Warning: session_start(): Cannot start session when headers already sent in /home/karnatak/public_html/wp-content/plugins/the-visitor-counter/classes/class.widget.php on line 10

Warning: Cannot modify header information - headers already sent by (output started at /home/karnatak/public_html/wp-content/plugins/free-comments-for-wordpress-vuukle/free-comments-for-wordpress-vuukle.php:1) in /home/karnatak/public_html/wp-includes/feed-rss2.php on line 8
ಕರ್ನಾಟಕ ಕಹಳೆ ನ್ಯೂಸ್ – Karnataka Kahale https://www.karnatakakahale.com ಕನ್ನಡಿಗರ ಕೊರಳ ಧ್ವನಿ Thu, 14 Jan 2021 01:01:17 +0000 en-US hourly 1 https://wordpress.org/?v=6.3.8 https://www.karnatakakahale.com/wp-content/uploads/2020/11/cropped-Karnataka-Kahale-1-1-32x32.jpg ಕರ್ನಾಟಕ ಕಹಳೆ ನ್ಯೂಸ್ – Karnataka Kahale https://www.karnatakakahale.com 32 32 ಅನುದಿನ ಕವನ-೧೪ https://www.karnatakakahale.com/news/2676 Thu, 14 Jan 2021 01:01:17 +0000 https://www.karnatakakahale.com/?p=2676 ಹನಿಗವನಗಳು* *************** ( 1) *ಸಿಹಿಮಾತು* ——————– ಎಳ್ಳು – ಬೆಲ್ಲವ ಹಂಚಿ ಒಳ್ಳೆಯ ಮಾತುಗಳನ್ನಾಡೋಣ ಸಾರ್ವಕಾಲಿಕ ನುಡಿ ; ನಿತ್ಯ – ನಿರಂತರ ಒಳ್ಳೆಯದನ್ನೇ ಬಯಸೋಣ, ಮಾತನಾಡೋಣ ಸಣ್ಣ ತಿದ್ದುಪಡಿ. (2) *ಕರೆ* ****** ಕೃಷ್ಣನ ಕೊಳಲಿನ ಕರೆಗೆ ಗೋವುಗಳು…

The post ಅನುದಿನ ಕವನ-೧೪ appeared first on Karnataka Kahale.

]]>
ಹನಿಗವನಗಳು*
***************
( 1)
*ಸಿಹಿಮಾತು*
——————–
ಎಳ್ಳು – ಬೆಲ್ಲವ ಹಂಚಿ
ಒಳ್ಳೆಯ ಮಾತುಗಳನ್ನಾಡೋಣ
ಸಾರ್ವಕಾಲಿಕ ನುಡಿ ;
ನಿತ್ಯ – ನಿರಂತರ
ಒಳ್ಳೆಯದನ್ನೇ
ಬಯಸೋಣ, ಮಾತನಾಡೋಣ
ಸಣ್ಣ ತಿದ್ದುಪಡಿ.

(2)
*ಕರೆ*
******
ಕೃಷ್ಣನ ಕೊಳಲಿನ
ಕರೆಗೆ ಗೋವುಗಳು
ತಲೆದೂಗಿ ಬಂದಂತೆ ;
ನಿನ್ನೀ ಕಣ್ಣಿನ
ಕರೆಗೆ
ಬಾರದೇ ಇರಲಾದೀತೆ.

(3)
*ಮಳೆ*
******
ಹೊರಗೆ ಸುರಿಯುತ್ತಿದೆ
ಸಂಜೆಯ ಮಳೆ
ಧೋ…….ಎಂದು ;
ನೀನಿಲ್ಲದ ನೆನಪು
ತಂಪಲ್ಲೂ ಬೆವರಿದ
ಅನುಭವ ಇಂದು.

(4)
*ಸಿಹಿ – ಕಹಿ*
***********
ಬೆಲ್ಲದ ಸಿಹಿ
ಯಾರಿಗೂ ಇಷ್ಟ
ಬೇವು ಸವಿಯೋದು,
ಸಹಿಸೋದು ಕಷ್ಟ ;
ದಾಂಪತ್ಯದಲ್ಲಿ ಸಿಹಿ – ಕಹಿ
ಎರಡನ್ನೂ
ಸಮನಾಗಿ ಸವಿದಾಗ
ಜೀವನವೇ ಉತ್ಕೃಷ್ಟ.

(5)
……..ಬಂತು !?
************
ಹಸಿವಾದಾಗ
ಅನ್ನ ನೀಡದಿದ್ದ ಮೇಲೆ
ಮೃಷ್ಟಾನ್ನ
ನೀಡಿದರೇನು ಬಂತು…?
ಸಂಬಂಧಗಳು
ಹಳಸಿದಮೇಲೆ
ಪ್ರೀತಿಯ ಧಾರೆ
ಸುರಿದರೇನು ಬಂತು….?

-ಶೋಭಾ ಮಲ್ಕಿ ಒಡೆಯರ್
*ಹೂವಿನ ಹಡಗಲಿ*

The post ಅನುದಿನ ಕವನ-೧೪ appeared first on Karnataka Kahale.

]]>
ಸಮರಸವಾಗಲಿ ಸಂಕ್ರಾಂತಿ -ಎ.ಎಂ.ಪಿ. ವೀರೇಶಸ್ವಾಮಿ, ಹೊಳಗುಂದಿ, https://www.karnatakakahale.com/news/2670 Wed, 13 Jan 2021 23:40:35 +0000 https://www.karnatakakahale.com/?p=2670 ಸಮರಸವಾಗಲಿ ಸಂಕ್ರಾಂತಿ -ಎ.ಎಂ.ಪಿ. ವೀರೇಶಸ್ವಾಮಿ, ಹೊಳಗುಂದಿ, ಭಾವ ಬಂಧಗಳ ಬೆಸುಗೆ ಈ ಸಂಕ್ರಾಂತಿ ಮೈ ಮನಗಳ ಒಸಗೆ ಈ ಸಂಕ್ರಾಂತಿ-ಪ ಮರವು ಚಿಗುರಲಿ ಬರವು ನೀಗಲಿ ಶಾಂತಿ ಬೆಳಗಲಿ ಕ್ರಾಂತಿ ನೆಲೆಸಲಿ ಹೂವು ಅರಳಲಿ ನೋವು ಕರಗಲಿ ಸಮತೆ ಸಾರಲಿ ಸಂಕ್ರಾತಿ-1…

The post ಸಮರಸವಾಗಲಿ ಸಂಕ್ರಾಂತಿ -ಎ.ಎಂ.ಪಿ. ವೀರೇಶಸ್ವಾಮಿ, ಹೊಳಗುಂದಿ, appeared first on Karnataka Kahale.

]]>
ಸಮರಸವಾಗಲಿ ಸಂಕ್ರಾಂತಿ
-ಎ.ಎಂ.ಪಿ. ವೀರೇಶಸ್ವಾಮಿ, ಹೊಳಗುಂದಿ,

ಭಾವ ಬಂಧಗಳ ಬೆಸುಗೆ

ಈ ಸಂಕ್ರಾಂತಿ

ಮೈ ಮನಗಳ ಒಸಗೆ

ಈ ಸಂಕ್ರಾಂತಿ-ಪ

ಮರವು ಚಿಗುರಲಿ

ಬರವು ನೀಗಲಿ

ಶಾಂತಿ ಬೆಳಗಲಿ

ಕ್ರಾಂತಿ ನೆಲೆಸಲಿ

ಹೂವು ಅರಳಲಿ

ನೋವು ಕರಗಲಿ

ಸಮತೆ ಸಾರಲಿ ಸಂಕ್ರಾತಿ-1
ಮಳೆಯು ಸುರಿಯಲಿ

ಇಳೆಯು ತಣಿಯಲಿ

ಹೊಳೆಯು ತುಂಬಲಿ

ಹೊಲವು ಬೆಳೆಯಲಿ

ಬೆಲೆಯು ದೊರೆಯಲಿ ರೈತಗೆ

ನೆಲೆಯು ಲಭಿಸಲಿ ಸಮೃದ್ಧಿ ತರಲಿ ಸಂಕ್ರಾತಿ-2
ಜಾತಿ ಕೊಳೆಯಲಿ

ನೀತಿ ಹೊಳೆಯಲಿ

ಪ್ರೀತಿ ತೊಳಗಲಿ

ದ್ವೇಷ ತೊಲಗಲಿ

ಸತ್ಯ ಉಳಿಯಲಿ

ಮಿಥ್ಯ ಅಳಿಯಲಿ

ನಿತ್ಯ ನೂತನವಾಗಲಿ ಸಂಕ್ರಾತಿ-3
ಸಂಗೀತ ತುಂಗೆಯಾಗಲಿ

ಸಾಹಿತ್ಯ ಭದ್ರೆಯಾಗಲಿ

ಜ್ಞಾನ ಕಲೆ ಸಿದ್ಧಿಸಲಿ

ವಿಜ್ಞಾನ ವೃದ್ಧಿಸಲಿ

ನೋವೇ ಬರಲಿ ನಲಿವೇ ಇರಲಿ ಸಮರಸವಾಗಲಿ ಸಂಕ್ರಾತಿ-4

 

(ಕವಿ ಎ.ಎಂ.ಪಿ. ವೀರೇಶಸ್ವಾಮಿ, ಹೊಳಗುಂದಿ ಅವರು ಬಳ್ಳಾರಿಯ ವೀರಶೈವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ)

The post ಸಮರಸವಾಗಲಿ ಸಂಕ್ರಾಂತಿ -ಎ.ಎಂ.ಪಿ. ವೀರೇಶಸ್ವಾಮಿ, ಹೊಳಗುಂದಿ, appeared first on Karnataka Kahale.

]]>
ಜನರ ಪ್ರಾಣ ಮತ್ತು ಆಸ್ತಿ ಕಾಪಾಡಲು ತರಬೇತಿ ಸಹಕಾರಿ https://www.karnatakakahale.com/news/1417 Thu, 26 Nov 2020 07:36:53 +0000 https://www.karnatakakahale.com/?p=1417 ಬಳ್ಳಾರಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಮತ್ತು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ನಗರದ ತಾಪಂ ಕಚೇರಿ ಆವರಣದಲ್ಲಿ ಕಂದಾಯ ಅಧಿಕಾರಿಗಳು, ಗ್ರಾಮಲೆಕ್ಕಿಗರು ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ  ವಿಪತ್ತು ನಿರ್ವಹಣೆ ಮತ್ತು ಪ್ರಥಮ ಚಿಕಿತ್ಸಾ…

The post ಜನರ ಪ್ರಾಣ ಮತ್ತು ಆಸ್ತಿ ಕಾಪಾಡಲು ತರಬೇತಿ ಸಹಕಾರಿ appeared first on Karnataka Kahale.

]]>
ಬಳ್ಳಾರಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಮತ್ತು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ನಗರದ ತಾಪಂ ಕಚೇರಿ ಆವರಣದಲ್ಲಿ ಕಂದಾಯ ಅಧಿಕಾರಿಗಳು, ಗ್ರಾಮಲೆಕ್ಕಿಗರು ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ  ವಿಪತ್ತು ನಿರ್ವಹಣೆ ಮತ್ತು ಪ್ರಥಮ ಚಿಕಿತ್ಸಾ ಕಾರ್ಯಗಾರವನ್ನು ಬುಧವಾರ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಾಗಾರಕ್ಕೆ ಚಾಲನೆ ನೀಡಿದ ಅಪರ ಜಿಲ್ಲಾಧಿಕಾರಿ ಪಿ.ಎಸ್.ಮಂಜುನಾಥ ಅವರು ಮಾತನಾಡಿ ಪ್ರತಿನಿತ್ಯ ಸಾರ್ವಜನಿಕ ಸಂಪರ್ಕದಲ್ಲಿ ಕಂದಾಯ ಅಧಿಕಾರಿಗಳು, ಗ್ರಾಮ ಲೆಕ್ಕಿಗರು ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ. ಇವರಿಗೆ ವಿಪತ್ತು ನಿರ್ವಹಣೆ ಮತ್ತು ಪ್ರಥಮ ಚಿಕಿತ್ಸೆ ಕುರಿತು ತರಬೇತಿ ನೀಡಿದಲ್ಲಿ ಅವರು ಕರ್ತವ್ಯದ ಸಂದರ್ಭದಲ್ಲಿ ಜನರ ಪ್ರಾಣ ಮತ್ತು ಆಸ್ತಿಯನ್ನು ಕಾಪಾಡಲು ಹೆಚ್ಚು ಅನೂಕುಲವಾಗುತ್ತದೆ ಎಂದರು.
ಈ ಹಿನ್ನೆಲೆಯಲ್ಲಿ ಜನರ ಮಧ್ಯೆ ಸದಾ ಇರುವ ಅಧಿಕಾರಿಗಳಿಗೆ ಜಿಲ್ಲಾಡಳಿತವು ಈ ತರಬೇತಿ ನೀಡುತ್ತಿದ್ದು, ಇದರ ಸದುಪಯೋಗವನ್ನು ಎಲ್ಲರು ಪಡೆದುಕೊಳ್ಳಬೇಕು ಎಂದರು.
ಈ ತರಬೇತಿಯನ್ನು ಜಿಲ್ಲಾಡಳಿತದಿಂದ ಎಲ್ಲಾ ತಾಲೂಕುಗಳಲ್ಲಿ ನಡೆಸಲಾಗಿದ್ದು, ಕೊನೆಯದಾಗಿ ಈ ತರಬೇತಿಯ ಕಾರ್ಯಗಾರವನ್ನು ಬಳ್ಳಾರಿಯಲ್ಲಿ ಇಂದಿನಿಂದ ಎರಡು ದಿನಗಳ ಕಾಲ ನಡೆಸಲಾಗುತ್ತಿದೆ ಎಂದರು.
ಪ್ರೋಬೆಷನರಿ ಐಎಎಸ್ ಅಧಿಕಾರಿ ರಾಹುಲ್ ಸಂಕನೂರು ಅವರು ಮಾತನಾಡಿ,
ಬಳ್ಳಾರಿ ಜಿಲ್ಲೆಯಲ್ಲಿ ಪ್ರವಾಹ, ಬರಗಾಲ ಮತ್ತು ಕಾರ್ಖಾನೆಯಿಂದ ಆಗುವ ಅನಾಹುತಗಳ ಬಗ್ಗೆ ಎಲ್ಲಾ ರೀತಿಯಿಂದ ಅರಿವು ಮೂಡಿಸಲು ಈ ತರಬೇತಿ ಅಗತ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಪ್ರೋಬೆಷನರಿ ಕೆಎಎಸ್ ಅಧಿಕಾರಿ ಪರಿಣಿಕ, ವಿಪತ್ತು ನಿರ್ವಹಣ ತರಬೇತಿಯ ನೋಡಲ್ ಅಧಿಕಾರಿ ಪರಮೇಶ ಮತ್ತಿತರರು ಇದ್ದರು.
ಭಾರತೀಯ ರೆಡ್‍ಕ್ರಾಸ್ ಕಾರ್ಯದರ್ಶಿ ಎಂ.ಎ.ಷಕೀಬ್ ತರಬೇತಿ ನೀಡಿದರು.

The post ಜನರ ಪ್ರಾಣ ಮತ್ತು ಆಸ್ತಿ ಕಾಪಾಡಲು ತರಬೇತಿ ಸಹಕಾರಿ appeared first on Karnataka Kahale.

]]>
ನ. 26 ರಂದು ಬೃಹತ್ ನೀರಾವರಿ ಯೋಜನಾ ಕಾಮಗಾರಿಗೆ ಸಿಎಂ ಶಂಕುಸ್ಥಾಪನೆ https://www.karnatakakahale.com/news/1412 Thu, 26 Nov 2020 07:32:31 +0000 https://www.karnatakakahale.com/?p=1412 ಬಳ್ಳಾರಿ: :ಜಲಸಂಪನ್ಮೂಲ ಇಲಾಖೆ, ಕರ್ನಾಟಕ ನೀರಾವರಿ ನಿಗಮದ ನಿಯಮಿತದ ವತಿಯಿಂದ 243.35 ಕೋಟಿ ರೂ.ಗಳ ವೆಚ್ಚದಲ್ಲಿ ವಿಜಯನಗರ ಕ್ಷೇತ್ರ ವ್ಯಾಪ್ತಿಯ ಪಾಪಿನಾಯನಕನಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಬೃಹತ್ ನೀರಾವರಿ ಯೋಜನೆಯ ಕಾಮಗಾರಿಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ವಿಧಾನಸೌಧದದಿಂದ ವರ್ಚುವಲ್ ತಂತ್ರಜ್ಞಾನದ ಮೂಲಕ…

The post ನ. 26 ರಂದು ಬೃಹತ್ ನೀರಾವರಿ ಯೋಜನಾ ಕಾಮಗಾರಿಗೆ ಸಿಎಂ ಶಂಕುಸ್ಥಾಪನೆ appeared first on Karnataka Kahale.

]]>
ಬಳ್ಳಾರಿ: :ಜಲಸಂಪನ್ಮೂಲ ಇಲಾಖೆ, ಕರ್ನಾಟಕ ನೀರಾವರಿ ನಿಗಮದ ನಿಯಮಿತದ ವತಿಯಿಂದ 243.35 ಕೋಟಿ ರೂ.ಗಳ ವೆಚ್ಚದಲ್ಲಿ ವಿಜಯನಗರ ಕ್ಷೇತ್ರ ವ್ಯಾಪ್ತಿಯ ಪಾಪಿನಾಯನಕನಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಬೃಹತ್ ನೀರಾವರಿ ಯೋಜನೆಯ ಕಾಮಗಾರಿಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ವಿಧಾನಸೌಧದದಿಂದ ವರ್ಚುವಲ್ ತಂತ್ರಜ್ಞಾನದ ಮೂಲಕ ನ.26ರಂದು ಗುರುವಾರ ಸಂಜೆ 4ಕ್ಕೆ ಉದ್ಘಾಟಿಸಲಿದ್ದಾರೆ.
ಸಿಎಂ ಅವರು ವರ್ಚುವಲ್ ತಂತ್ರಜ್ಞಾನದ ಮೂಲಕ ಉದ್ಘಾಟಿಸುವರು. ಇದೇ ಸಂದರ್ಭದಲ್ಲಿ  ಪಾಪಿನಾಯಕನಳ್ಳಿ ಗ್ರಾಮದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಅರಣ್ಯ,ಪರಿಸರ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್,ಸಂಸದ ವೈ.ದೇವೇಂದ್ರಪ್ಪ, ಶಾಸಕರು,ಜಿಪಂ,ತಾಪಂ,ಗ್ರಾಪಂ ಅಧ್ಯಕ್ಷರು,ಸದಸ್ಯರು ಹಾಗೂ ಚುನಾಯಿತ ಪ್ರತಿನಿಧಿಗಳು ಉಪಸ್ಥಿತರಿರಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

The post ನ. 26 ರಂದು ಬೃಹತ್ ನೀರಾವರಿ ಯೋಜನಾ ಕಾಮಗಾರಿಗೆ ಸಿಎಂ ಶಂಕುಸ್ಥಾಪನೆ appeared first on Karnataka Kahale.

]]>
ಬಳ್ಳ್ಳಾರಿ ಬಂದ್: ಪೊಲೀಸ್ ಇಲಾಖೆಯಿಂದ ಅಗತ್ಯ ಬಂದೋಬಸ್ತ್: ಎಸ್ಪಿ ಸೈದುಲು ಅಡಾವತ್ https://www.karnatakakahale.com/news/1408 Thu, 26 Nov 2020 07:29:29 +0000 https://www.karnatakakahale.com/?p=1408 ಬಳ್ಳಾರಿ: ಜಿಲ್ಲೆಯನ್ನು ವಿಭಜಿಸಿ ವಿಜಯನಗರ ನೂತನ ಜಿಲ್ಲೆ ರಚಿಸುವುದನ್ನು ವಿರೋಧಿಸಿ ಬಳ್ಳಾರಿ ಜಿಲ್ಲಾ ಹೋರಾಟ ಸಮಿತಿ ನೇತೃತ್ವದಲ್ಲಿ  ವಿವಿಧ ಕನ್ನಡ, ರೈತಪರ ಸಂಘಟನೆಗಳು,  ರಾಜಕೀಯ ಪಕ್ಷ ಗಳು ಮತ್ತು ವಿವಿಧ ಸಾಮಾಜಿಕ ಹೋರಾಟ ಸಂಘಟನೆಗಳ ಮುಖಂಡರು ನ.26ರಂದು ಬಳ್ಳಾರಿ ಬಂದ್ ಹಮ್ಮಿಕೊಂಡಿರುವ…

The post ಬಳ್ಳ್ಳಾರಿ ಬಂದ್: ಪೊಲೀಸ್ ಇಲಾಖೆಯಿಂದ ಅಗತ್ಯ ಬಂದೋಬಸ್ತ್: ಎಸ್ಪಿ ಸೈದುಲು ಅಡಾವತ್ appeared first on Karnataka Kahale.

]]>
ಬಳ್ಳಾರಿ: ಜಿಲ್ಲೆಯನ್ನು ವಿಭಜಿಸಿ ವಿಜಯನಗರ ನೂತನ ಜಿಲ್ಲೆ ರಚಿಸುವುದನ್ನು ವಿರೋಧಿಸಿ ಬಳ್ಳಾರಿ ಜಿಲ್ಲಾ ಹೋರಾಟ ಸಮಿತಿ ನೇತೃತ್ವದಲ್ಲಿ  ವಿವಿಧ ಕನ್ನಡ, ರೈತಪರ ಸಂಘಟನೆಗಳು,  ರಾಜಕೀಯ ಪಕ್ಷ ಗಳು ಮತ್ತು ವಿವಿಧ ಸಾಮಾಜಿಕ ಹೋರಾಟ ಸಂಘಟನೆಗಳ ಮುಖಂಡರು ನ.26ರಂದು ಬಳ್ಳಾರಿ ಬಂದ್ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ಜಿಲ್ಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಅಗತ್ಯ ಮುನ್ನಚ್ಚೆರಿಕಾ ಕ್ರಮಗಳು ಮತ್ತು ಬಂದೋಬಸ್ತ್ ಕೈಗೊಂಡಿದೆ ಎಂದು ಜಿಲ್ಲಾ ಎಸ್ಪಿ  ಸೈದುಲು ಅಡಾವತ್ ಅವರು ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಎಸ್ಪಿ ಸೈದುಲು ಅಡಾವತ್ ಅವರು ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಜಿಲ್ಲೆಯಲ್ಲಿ ಅಗತ್ಯವಾದ ಪೊಲೀಸ್ ಅಧಿಕಾರಿ/ಸಿಬ್ಬಂದಿಯನ್ನು ಆಯಾಕಟ್ಟಿನ ಸ್ಥಳಗಳಲ್ಲಿ  ನಿಯೋಜಿಸಲಾಗಿದೆ.

3 ಜನ ಡಿಎಸ್‍ಪಿ, 10 ಸಿಪಿಐ/ಪಿಐ,18 ಪಿಎಸ್‍ಐ, 40 ಎ.ಎಸ್.ಐ., 200 ಹೆಚ್.ಸಿ/ಪಿ.ಸಿ., 3 ಡಿಎಆರ್ ತುಕಡಿ ನೇಮಿಸಿಕೊಳ್ಳಲಾಗಿದೆ ಎಂದು ಅವರು ವಿವರಿಸಿದ್ದಾರೆ.
ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟನೆಯನ್ನು ಶಾಂತರೀತಿಯಲ್ಲಿ ಕೈಗೊಳ್ಳುವುದು, ಬಂದ್ ಮಾಡುವಂತೆ ಯಾವುದೇ ವ್ಯಕ್ತಿಯಾಗಲೀ ಯಾವುದೇ ಸಂಘಟನೆಯಾಗಲೀ ಯಾರನ್ನೂ ಒತ್ತಾಯಿಸುವಂತಿಲ್ಲ. ಯಾವುದೇ ರೀತಿಯ ಸಾರ್ವಜನಿಕ ಮತ್ತು ಸರ್ಕಾರದ ಆಸ್ತಿಗಳಿಗೆ ಧಕ್ಕೆಯಾಗದಂತೆ ಹಾಗೂ ಜನಸಾಮಾನ್ಯರಿಗೆ ತೊಂದರೆಯಾಗದಂತೆ ಕಾನೂನಿನ ಚೌಕಟ್ಟಿನಲ್ಲಿ ಮುಷ್ಕರ ಕೈಗೊಳ್ಳಲು ಸೂಚಿಸಲಾಗಿದೆ. ಯಾವುದೇ ರೀತಿಯ ಕಾನೂನು ಉಲ್ಲಂಘನೆಯಾದಲ್ಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್.ಪಿ ವರು ಎಚ್ಚರಿಕೆ ನೀಡಿದ್ದಾರೆ.
ಜಿಲ್ಲೆಯ ಸಾರ್ವಜನಿಕರು ಆತಂಕಕ್ಕೆ ಒಳಗಾಗಬಾರದು.  ಆಗತ್ಯವಿದ್ದಲ್ಲಿ ತಮ್ಮ ರಕ್ಷಣೆ ಹಾಗೂ ಸಹಾಯಕ್ಕಾಗಿ ಸ್ಥಳೀಯ ಪೊಲೀಸರನ್ನು ಮತ್ತು ಜಿಲ್ಲಾ ಕಂಟ್ರೋಲ್ ರೂಂ ದೂರವಾಣಿ: 08392-258100 I 256101/ 256103/ 257100/ 257600 & 9480803000 ಸಂಪರ್ಕಿಸಬೇಕು ಎಂದು ಅವರು ತಿಳಿಸಿದ್ದಾರೆ.

The post ಬಳ್ಳ್ಳಾರಿ ಬಂದ್: ಪೊಲೀಸ್ ಇಲಾಖೆಯಿಂದ ಅಗತ್ಯ ಬಂದೋಬಸ್ತ್: ಎಸ್ಪಿ ಸೈದುಲು ಅಡಾವತ್ appeared first on Karnataka Kahale.

]]>
ಚಳಿಗಾಲ ಮತ್ತೆ ಮೆಲ್ಲನೆ ನುಸುಳಿ ಬಂದಿದೆ https://www.karnatakakahale.com/news/321 Wed, 25 Nov 2020 10:08:57 +0000 https://www.karnatakakahale.com/?p=321 Your browser does not support the video tag. ಕವಿ: ಶ್ರೀ ಎಂ.ನಂಜುಂಡಸ್ವಾಮಿ (ಮನಂ)ಐಪಿಎಸ್ ರಾಗಸಂಯೋಜನೆ & ಗಾಯನ: ಶ್ರೀಮತಿ ಶಾರದ ಕೊಪ್ಪಳ

The post ಚಳಿಗಾಲ ಮತ್ತೆ ಮೆಲ್ಲನೆ ನುಸುಳಿ ಬಂದಿದೆ appeared first on Karnataka Kahale.

]]>

ಕವಿ: ಶ್ರೀ ಎಂ.ನಂಜುಂಡಸ್ವಾಮಿ (ಮನಂ)ಐಪಿಎಸ್
ರಾಗಸಂಯೋಜನೆ & ಗಾಯನ: ಶ್ರೀಮತಿ ಶಾರದ ಕೊಪ್ಪಳ

The post ಚಳಿಗಾಲ ಮತ್ತೆ ಮೆಲ್ಲನೆ ನುಸುಳಿ ಬಂದಿದೆ appeared first on Karnataka Kahale.

]]>
ರಾಜ್ಯೋತ್ಸವ-ನಿತ್ಯೋತ್ಸವ https://www.karnatakakahale.com/news/317 Tue, 24 Nov 2020 16:51:35 +0000 https://www.karnatakakahale.com/?p=317 ರಾಜ್ಯೋತ್ಸವ-ನಿತ್ಯೋತ್ಸವ ಕರ್ನಾಟಕದ ಘನ ರಾಜ್ಯೋತ್ಸವ ಕನ್ನಡ ತಾಯಿಯ ಶುಭ ನಿತ್ಯೊತ್ಸವ ಗತವೈಭವದ ಇತಿಹಾಸೋತ್ಸವ ಗಜ ಹುಲಿ ಕೇಸರಿ ಕಲಿ ಸಮರೋತ್ಸವ ನದಿ ಗಿರಿ ಬನ ಖನಿ ಸಿರಿಸ್ವರ್ಗೋತ್ಸವ ನಾಟಕ ನರ್ತನ ಸಾಂಸ್ಕೃತಿಕೋತ್ಸವ ಕವಿ ಕೋಗಿಲೆಗಳ ಸವಿ ಕಾವ್ಯೋತ್ಸವ ಚಿಂತನ ಮಂಥನ ಸಾಹಿತ್ಯೋತ್ಸವ…

The post ರಾಜ್ಯೋತ್ಸವ-ನಿತ್ಯೋತ್ಸವ appeared first on Karnataka Kahale.

]]>
ರಾಜ್ಯೋತ್ಸವ-ನಿತ್ಯೋತ್ಸವ
ಕರ್ನಾಟಕದ ಘನ ರಾಜ್ಯೋತ್ಸವ
ಕನ್ನಡ ತಾಯಿಯ ಶುಭ ನಿತ್ಯೊತ್ಸವ

ಗತವೈಭವದ ಇತಿಹಾಸೋತ್ಸವ
ಗಜ ಹುಲಿ ಕೇಸರಿ ಕಲಿ ಸಮರೋತ್ಸವ
ನದಿ ಗಿರಿ ಬನ ಖನಿ ಸಿರಿಸ್ವರ್ಗೋತ್ಸವ
ನಾಟಕ ನರ್ತನ ಸಾಂಸ್ಕೃತಿಕೋತ್ಸವ

ಕವಿ ಕೋಗಿಲೆಗಳ ಸವಿ ಕಾವ್ಯೋತ್ಸವ
ಚಿಂತನ ಮಂಥನ ಸಾಹಿತ್ಯೋತ್ಸವ
ಮೌಢ್ಯತೆ ತೊಡೆಯುವ ಸುವಿಚಾರೋತ್ಸವ
ಶಿಲ್ಪ ಲಲಿತ ಕಲೆ ಸಂಗೀತೋತ್ಸವ

ಕುವೆಂಪು ಬೇಂದ್ರೆ ಕಾರಂತೋತ್ಸವ
ಮಾಸ್ತಿ ವಿನಾಯಕ ಗೋಕಾಕೋತ್ಸವ
ಅನಂತಮೂರ್ತಿ ಕಾರ್ನಾಡ ಕಂಬಾರೋತ್ಸವ
ಜ್ಞಾನಪೀಠದಲಿ ದಿಗ್ವಿಜಯೋತ್ಸವ

ವಿಶ್ವ ಪಥದಲಿ ಮನುಜ ಮತೋತ್ಸವ
ವಿಶ್ವ ಮಾನವತೆಯ ನಿಜ ಧರ್ಮೋತ್ಸವ
ಅರಿವಿನ ಕಾರ್ತಿಕ ಶುಭ ದೀಪೋತ್ಸವ
ಕನ್ನಡ ಗಡಿ ಗುಡಿ ನುಡಿ ದಿವ್ಯೋತ್ಸವ
~~~~~~~
– ಟಿ.ಕೆ.ಗಂಗಾಧರ ಪತ್ತಾರ ಬಳ್ಳಾರಿ
~~~~~~~

The post ರಾಜ್ಯೋತ್ಸವ-ನಿತ್ಯೋತ್ಸವ appeared first on Karnataka Kahale.

]]>
ಶ್ರೀ ವಿಜಯದಾಸರ ಆರಾಧನಾ ಮಹೋತ್ಸವ https://www.karnatakakahale.com/news/313 Tue, 24 Nov 2020 16:40:30 +0000 https://www.karnatakakahale.com/?p=313 ಬಳ್ಳಾರಿ: ಸಮೀಪದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಚಿಪ್ಪಗಿರಿಯ ಶ್ರೀ ವಿಜಯದಾಸರ ಸನ್ನಿಧಾನದಲ್ಲಿ 265ನೇ ವರ್ಷದ ವಿಜಯದಾಸರ ಆರಾಧನಾ ಮಹೋತ್ಸವ ಮಂಗಳವಾರ ವಿಜೃಂಭಣೆಯಿಂದ ನಡೆಯಿತು. ಮಧ್ಯಾರಾಧನಾ ಹಿನ್ನೆಲೆಯಲ್ಲಿ ಶ್ರೀಕ್ಷೇತ್ರದಲ್ಲಿ ಬೆಳಿಗ್ಗೆ ಹರಿಕಥಾಮೃತಸಾರ ಪಾರಾಯಣ, ಸುಲಾದಿ ಪಾರಾಯಣ, ಶ್ರೀವಿಜಯರಾಯರಿಗೆ ಪಂಚಾಮೃತಾಭಿಷೇಕ, ವಿಶೇಷ ಅಲಂಕಾರ, ನೈವಿದ್ಯ,…

The post ಶ್ರೀ ವಿಜಯದಾಸರ ಆರಾಧನಾ ಮಹೋತ್ಸವ appeared first on Karnataka Kahale.

]]>
ಬಳ್ಳಾರಿ: ಸಮೀಪದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಚಿಪ್ಪಗಿರಿಯ ಶ್ರೀ ವಿಜಯದಾಸರ ಸನ್ನಿಧಾನದಲ್ಲಿ 265ನೇ ವರ್ಷದ ವಿಜಯದಾಸರ ಆರಾಧನಾ ಮಹೋತ್ಸವ ಮಂಗಳವಾರ ವಿಜೃಂಭಣೆಯಿಂದ ನಡೆಯಿತು.
ಮಧ್ಯಾರಾಧನಾ ಹಿನ್ನೆಲೆಯಲ್ಲಿ ಶ್ರೀಕ್ಷೇತ್ರದಲ್ಲಿ ಬೆಳಿಗ್ಗೆ ಹರಿಕಥಾಮೃತಸಾರ ಪಾರಾಯಣ, ಸುಲಾದಿ ಪಾರಾಯಣ, ಶ್ರೀವಿಜಯರಾಯರಿಗೆ ಪಂಚಾಮೃತಾಭಿಷೇಕ, ವಿಶೇಷ ಅಲಂಕಾರ, ನೈವಿದ್ಯ, ಮಹಾಮಂಗಳಾರತಿ ಸೇರಿದಂತೆ ವಿವಿಧ ಪೂಜೆಗಳು ವಿಜೃಂಭಣೆಯಿಂದ ನಡೆದವು.
ಸ್ಥಳೀಯ ಸೇರಿದಂತೆ ನಾನಾ ಕಡೆಯಿಂದ ಆಗಮಿಸಿದ ಭಜನಾ ಮಂಡಳಿ ಸದಸ್ಯರಿಂದ ಸಾಮೋಹಿಕ ಭಜನೆ ನಡೆಯಿತು. ಇದಕ್ಕೂ ಮುನ್ನ ಬೆಂಗಳೂರಿನ ಗುರುರಾಜ ದಾಸ್ ಹಾಗೂ ಹೈದ್ರಾಬಾದ್‍ನ ರಾಘವೇಂದ್ರಾಚಾರ್ ಅವರಿಂದ ಉಪನ್ಯಾಸ ನಡೆಯಿತು.
ವೆಂಕೋಬ ದಾಸ್ ಅವರ ನೇತೃತ್ವದಲ್ಲಿ ವಿವಿಧ ಪೂಜೆಗಳು ನಡೆದವು. ಶ್ರೀ ವಿಜಯದಾಸರ ವಂಶಸ್ಥರಾದ ಶ್ರೀಪಾದ್ ದಾಸ್ ಚಿಪ್ಪಗಿರಿ, ಮೋಹನ್ ದಾಸ್ ಸೇರಿದಂತೆ ಇತರರು ಆರಾಧನೆ ನೇತೃತ್ವ ವಹಿಸಿದ್ದರು. ನಗರ ಸೇರಿದಂತೆ ನಾನಾ ಕಡೆಯಿಂದ ಆಗಮಿಸಿದ ಭಕ್ತರಿಗೆ ವಿಜಯದಾಸ ಸೇವಾ ಟ್ರಸ್ಟ್‍ನ ಪದಾಧಿಕಾರಿಗಳು, ಭಕ್ತರು ತೀರ್ಥ ಪ್ರಸಾದ ವ್ಯವಸ್ಥೆ ಕಲ್ಪಿಸಿದ್ದರು.

The post ಶ್ರೀ ವಿಜಯದಾಸರ ಆರಾಧನಾ ಮಹೋತ್ಸವ appeared first on Karnataka Kahale.

]]>
ಬೆಂಬಲ ಬೆಲೆ ಯೋಜನೆಗಳಡಿ ಭತ್ತ ಖರೀದಿ -ಡಿಸಿ ನಕುಲ್ https://www.karnatakakahale.com/news/309 Tue, 24 Nov 2020 16:37:43 +0000 https://www.karnatakakahale.com/?p=309 ಬಳ್ಳಾರಿ: ಪ್ರಸಕ್ತ (2020-21 ನೇ) ಸಾಲಿನ ಮುಂಗಾರು ಋತುವಿನಲ್ಲಿ ಬೆಳೆದ ಭತ್ತವನ್ನು ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ರೈತರಿಂದ ನೇರವಾಗಿ ಖರೀದಿಸಲು ತೀರ್ಮಾನಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಅವರು ಸರ್ಕಾರದ ಆದೇಶದಂತೆ…

The post ಬೆಂಬಲ ಬೆಲೆ ಯೋಜನೆಗಳಡಿ ಭತ್ತ ಖರೀದಿ -ಡಿಸಿ ನಕುಲ್ appeared first on Karnataka Kahale.

]]>
ಬಳ್ಳಾರಿ: ಪ್ರಸಕ್ತ (2020-21 ನೇ) ಸಾಲಿನ ಮುಂಗಾರು ಋತುವಿನಲ್ಲಿ ಬೆಳೆದ ಭತ್ತವನ್ನು ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ರೈತರಿಂದ ನೇರವಾಗಿ ಖರೀದಿಸಲು ತೀರ್ಮಾನಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಅವರು ಸರ್ಕಾರದ ಆದೇಶದಂತೆ ಬೆಂಬಲ ಬೆಲೆ ಯೋಜನೆಯಡಿ ಭತ್ತವನ್ನು ಮಾರಾಟ ಮಾಡಲು ರೈತರು ಮೊದಲು ಕೃಷಿ ಇಲಾಖೆಯಲ್ಲಿ ಪ್ರೂಟ್ಸ್ ತಂತ್ರಾಂಶದಲ್ಲಿ ನೋಂದಣಿ ಮಾಡಿಕೊಳ್ಳಬೇಕು. ತದ ನಂತರ ಆಯಾ ತಾಲ್ಲೂಕುಗಳ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ತೆರೆದಿರುವ ಖರೀದಿ ಕೇಂದ್ರಗಳಲ್ಲಿ ಭತ್ತ ಮಾರಾಟ ಮಾಡಲು ನೋಂದಾಯಿಸಿಕೊಳ್ಳಬೇಕು. ಈ ರೀತಿ ಕೃಷಿ ಇಲಾಖೆ ಮತ್ತು ಖರೀದಿ ಕೇಂದ್ರಗಳಲ್ಲಿ ನೋಂದಾಯಿಸಿಕೊಂಡ ರೈತರು ಭತ್ತವನ್ನು ನಿಗಧಿಪಡಿಸಿರುವ ಅಕ್ಕಿ ಗಿರಣಿಗಳಿಗೆ/ಖರೀದಿ ಕೇಂದ್ರಗಳಿಗೆ ನೇರವಾಗಿ ಸರಬರಾಜು ಮಾಡಬೇಕು ಎಂದು ಅವರು ವಿವರಿಸಿದ್ದಾರೆ.
ಸಾಮಾನ್ಯ ಭತ್ತಕ್ಕೆ ಕ್ವಿಂಟಾಲ್‍ಗೆ ರೂ.1868, ಗ್ರೇಡ್ ಎ ಭತ್ತಕ್ಕೆ 1888 ರೂ.ಗಳನ್ನು ಸರಕಾರ ನಿಗದಿಪಡಿಸಿದೆ. ಬಳ್ಳಾರಿ ಜಿಲ್ಲೆಯಲ್ಲಿ ಕರ್ನಾಟಕ ಆಹಾರ ನಾಗರಿಕ ಸರಬರಾಜು ನಿಗಮವು ಖರೀದಿ ಏಜೆನ್ಸಿಯಾಗಿದೆ. ರೈತರು ನ.30ರಿಂದ ಡಿ.30ರವರೆಗೆ ಭತ್ತ ಮಾರಾಟ ಮಾಡಲು ತಮ್ಮ ಹೆಸರು ನೋಂದಾಯಿಸಿಕೊಳ್ಳಬೇಕು. ಡಿ.20ರಿಂದ 2021 ಮಾರ್ಚ್ 30ರವರೆಗೆ ಭತ್ತ ಖರೀದಿಸಲಾಗುತ್ತದೆ.
ಜಿಲ್ಲೆಯಲ್ಲಿ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಭತ್ತ ಖರೀದಿಸಲು ಮತ್ತು ರೈತರು ನೊಂದಾವಣೆ ಮಾಡಿಕೊಳ್ಳಲು ಬಳ್ಳಾರಿ/ಕುರುಗೋಡು,ಸಿರಗುಪ್ಪ,ಸಂಡೂರು,ಕೂಡ್ಲಿಗಿ/ಕೊಟ್ಟೂರು,ಹೊಸಪೇಟೆ,ಕಂಪ್ಲಿ, ಎಚ್.ಬಿ.ಹಳ್ಳಿ,ಹಡಗಲಿ ಮತ್ತು ಹರಪನಳ್ಳಿ ಎಪಿಎಂಸಿ ಯಾರ್ಡ್‍ಗಳನ್ನು ಕೇಂದ್ರಗಳಾಗಿ ಗುರುತಿಸಲಾಗಿದೆ. ರೈತರಿಂದ ನೇರವಾಗಿ ಖರೀದಿಸುವ ಭತ್ತ ಸರಾಸರಿ ಉತ್ತಮ ಗುಣಮಟ್ಟದ್ದು (ಈಂಕಿ) ಆಗಿರಬೇಕು. ಅದಕ್ಕಾಗಿ ಗುಣಮಟ್ಟ ನಿಗಧಿಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಕುಲ್ ವಿವರಿಸಿದ್ದಾರೆ.
ಜಿಲ್ಲೆಯಲ್ಲಿ ಗುರುತಿಸಲಾಗಿರುವ 9 ಖರೀದಿ ಮತ್ತು ರೈತರು ನೋಂದಣಿ ಮಾಡಿಕೊಳ್ಳುವ ಕೇಂದ್ರಗಳಿಗೆ ಖರೀದಿ ಅಧಿಕಾರಿಗಳನ್ನು ಹಾಗೂ ಗ್ರೇಡರ್‍ಗಳನ್ನು ಈಗಾಗಲೇ ನೇಮಕ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
*ರೈತರು ನೋಂದಣಿಯನ್ನು ಆನ್‍ಲೈನ್ ಕೇಂದ್ರದಲ್ಲಿಯೇ ಮಾಡಿ: ರೈತರ ನೊಂದಣಿಯನ್ನು ಖರೀದಿ ಕೇಂದ್ರಗಳಲ್ಲಿ ಆನ್‍ಲೈನ್ ಮುಖಾಂತರ ಮಾಡಬೇಕು. ಖರೀದಿ ಕೇಂದ್ರಕ್ಕೆ ರೈತರು ಕೃಷಿ ಇಲಾಖೆಯಿಂದ ಪಡೆದಿರುವ ಅವರ ಫ್ರೂಟ್ಸ್ ಐ.ಡಿ. (ರೈತರ ನೊಂದಣಿ ಮತ್ತು ಏಕೀಕೃತ ಫಲಾನುಭವಿ ಮಾಹಿತಿ ವ್ಯವಸ್ಥೆ(ಈಚಿಡಿmeಡಿ ಖegisಣಡಿಚಿಣioಟಿ ಚಿಟಿಜ Uಟಿiಜಿieಜ ಃeಟಿeಜಿiಛಿiಚಿಡಿಥಿ Iಟಿಜಿoಡಿmಚಿಣioಟಿ Sಥಿsಣem- ಈಖUIಖಿS ) ಮತ್ತು ಆಧಾರ್‍ನೊಂದಿಗೆ ನೊಂದಣಿ ಕೇಂದ್ರಕ್ಕೆ ಬರಬೇಕು. ಬೆಂಬಲ ಬೆಲೆಗಾಗಿ ರೈತರನ್ನು ಪ್ರತ್ಯೇಕವಾಗಿ ನೊಂದಾಯಿಸದೆ ಕೇವಲ ಅವರ ಫ್ರೂಟ್ಸ್ ಐ,ಡಿ.ಯ ಮೂಲಕ ಖರೀದಿಗೆ ನೋಂದಾಯಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದ್ದಾರೆ.
ರೈತರ ಫ್ರೂಟ್ಸ್ ಐ.ಡಿ ಯನ್ನು (ಉದಾ: ಎಫ್.ಐಡಿ 2205000013125) ಈ ಸಾಲಿನಲ್ಲಿ ರೈತರಿಂದ ಫ್ರೂಟ್ಸ್ ಐ.ಡಿ ಪಡೆಯುವುದು ಕಡ್ಡಾಯ. ರೈತರ ಬಳಿ ಫ್ರೂಟ್ಸ್ ಐ.ಡಿ ಇಲ್ಲದಿದ್ದಲ್ಲಿ ಅಥವಾ ಅವರ ಫ್ರೂಟ್ಸ್ ಐ.ಡಿ ಮಾಹಿತಿ ಪರಿಷ್ಕರಿಸಲು ಕೃಷಿ ಇಲಾಖೆಯನ್ನು ಸಂಪರ್ಕಿಸಿ ಸರಿಪಡಿಸಿಕೊಳ್ಳಬೇಕು ಎಂದು ತಿಳಿಸಿರುವ ಡಿಸಿ ನಕುಲ್ ಅವರು ಪ್ರತಿಯೊಬ್ಬ ರೈತರ ಫ್ರೂಟ್ಸ್ ಐ.ಡಿ. ನಮೂದಿಸಿದ ನಂತರ ಫ್ರೂಟ್ಸ್ ದತ್ತಾಂಶದಿಂದ ರೈತರ ಅಗತ್ಯ ಮಾಹಿತಿ ಲಭ್ಯವಾಗಲಿದೆ. ಮಾಹಿತಿಯಲ್ಲಿ ರೈತರ ಹೆಸರು, ವಿಳಾಸ, ಜಾತಿ, ವಯಸ್ಸು, ಮೊಬೈಲ್ ಸಂಖ್ಯೆ, ಜಮೀನು ಮತ್ತು ಬೆಳೆದಿರುವ ಬೆಳೆಯ ವಿವರಗಳು ಹಾಗೂ ರೈತರ ಬ್ಯಾಂಕ್ ಖಾತೆಯ ವಿವರಗಳು ಲಭ್ಯವಿರುತ್ತವೆÉ. ಹಾಗಾಗಿ ಪ್ರತ್ಯೇಕವಾಗಿ ಬೇರಾವುದೇ ದಾಖಲೆ ನೀಡುವ ಅವಶ್ಯಕತೆ ಇಲ್ಲ ಎಂದು ಅವರು ವಿವರಿಸಿದ್ದಾರೆ.
ಫ್ರೂಟ್ಸ್ ದತ್ತಾಂಶದನ್ವಯ ರೈತರ ಬೆಳೆ ಸಮೀಕ್ಷೆ ವಿವರದಂತೆ ಬೆಳೆ ವಿಸ್ತೀರ್ಣಕ್ಕನುಗುಣವಾಗಿ ಬೆಂಬಲ ಬೆಲೆ ಯೋಜನೆಯಡಿ ಖರೀದಿಸಬಹುದಾದ ಗರಿಷ್ಠ ಪ್ರಮಾಣವನ್ನು ತೋರಿಸಲಾಗುವುದು. ಖರೀದಿ ಕೇಂದ್ರಗಳಲ್ಲಿ ನೋಂದಣಿ ಮಾಡಿದಾಗ ರೈತರಿಗೆ ತಮ್ಮ ಜಮೀನು ಮತ್ತು ಬೆಳೆ ವಿವರ ನೋಡಲು ಅವಕಾಶವಿದೆ. ರೈತರು ಖರೀದಿ ವಿವರಗಳನ್ನು ಒಪ್ಪಿ ನಮೂದಿಸಿದ ನಂತರ ಸ್ವೀಕೃತಿಯನ್ನು ಮುದ್ರಿಸಿ ರೈತರರಿಗೆ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ರೈತರ ಫ್ರೂಟ್ಸ್ ದತ್ತಾಂಶದಿಂದ ತೋರ್ಪಡಿಸುವ ಮಾಹಿತಿಯನ್ನು ರೈತರು ಒಪ್ಪದಿದ್ದಲ್ಲಿ ರೈತರಿಂದ ಗುರುತಿಸಿ ಫ್ರೂಟ್ಸ್ ದತ್ತಾಂಶದಲ್ಲಿ ಹೊಂದಾಣಿಕೆಯಾಗದ ಮಾಹಿತಿಯನ್ನು ರೈತರಿಗೆ ನೀಡಲಾಗುತ್ತದೆ. ಈ ಮಾಹಿತಿಯೊಂದಿಗೆ ರೈತರು ಸಂಬಂಧಪಟ್ಟ ಕೃಷಿ ಇಲಾಖೆಯವರನ್ನು ಸಂಪರ್ಕಿಸಿ ಅಗತ್ಯ ಮಾಹಿತಿಯನ್ನು ಸರಿಪಡಿಸಿ, ಫ್ರೂಟ್ಸ್ ದತ್ತಾಂಶದಲ್ಲಿ ಪರಿಷ್ಕರಿಸಿಕೊಳ್ಳಬಹುದು. ಈ ರೀತಿ ಪರಿಷ್ಕರಣೆಯ ನಂತರವೇ ರೈತರು ಮತ್ತೊಮ್ಮೆ ಖರೀದಿ ಕೇಂದ್ರಕ್ಕೆ ಬಂದು ಖರೀದಿ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು ಎಂದು ಅವರು ವಿವರಿಸಿದ್ದಾರೆ.
*ಭತ್ತ ಸರಬರಾಜು: ಖರೀದಿ ಕೇಂದ್ರಗಳಲ್ಲಿ ನೊಂದಾಯಿಸಿಕೊಂಡ ರೈತರಿಗೆ ಖರೀದಿ ಅಧಿಕಾರಿ ಭತ್ತ ಸರಬರಾಜು ಮಾಡಬೇಕಾದ ಅಕ್ಕಿ ಗಿರಣಿ ವಿವರ ನೀಡುವರು. ಅದರಂತೆ ರೈತರು ಭತ್ತವನ್ನು ತಮಗೆ ನಿಯೋಜಿಸಿರುವ ಅಕ್ಕಿ ಗಿರಣಿಗಳಿಗೆ ನೇರವಾಗಿ ಸರಬರಾಜು ಮಾಡಬೇಕು.ರೈತರು ಭತ್ತ ಸರಬರಾಜು ಮಾಡಬೇಕಾದ ದಿನಾಂಕವನ್ನು ಸಂಬಂಧಿಸಿದ ಅಕ್ಕಿ ಗಿರಣಿಯವರು ನೀಡಲಿದ್ದಾರೆ ಎಚಿದು ನಕುಲ್ ಅವರು ವಿವರಿಸಿದ್ದಾರೆ.
ಅಕ್ಕಿ ಗಿರಣಿಗೆ ರೈತರು ಭತ್ತ ಸರಬರಾಜು ಮಾಡುವಾಗ ಎಫ್.ಎ.ಕ್ಯೂ ಗುಣಮಟ್ಟ ಪರಿಶೀಲಿಸಿ ಭತ್ತ ಖರೀದಿಸಲಾಗುವುದು.ಖರೀದಿಸಿದ ಭತ್ತಕ್ಕೆ ಅಕ್ಕಿ ಗಿರಣಿ ಮಾಲೀಕರು ಖರೀದಿ ರಸೀದಿ ನೀಡುವರು ಎಂದು ಅವರು ತಿಳಿಸಿದ್ದಾರೆ.
*ಖರೀದಿ ಕೇಂದ್ರಗಳಿಗೆ ದಲ್ಲಾಳಿಗಳು ಭತ್ತ ತಂದಲ್ಲಿ ಕ್ರಿಮಿನಲ್ ಕೇಸ್ : ಮಧ್ಯವರ್ತಿಗಳು/ ಏಜೆಂಟರ್‍ಗಳು ಖರೀದಿ ಕೇಂದ್ರಗಳಿಗೆ ಭತ್ತವನ್ನು ತಂದಲ್ಲಿ ಅಂತಹವರ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಬೆಂಬಲ ಬೆಲೆ ಯೋಜನೆಯಡಿ ಭತ್ತ ಸರಬರಾಜು ಮಾಡಿದ ರೈತರಿಗೆ ಅವರು ಕೃಷಿ ಇಲಾಖೆಯಲ್ಲಿ ನೊಂದಾಯಿಸಿಕೊಂಡಿರುವ
ಬ್ಯಾಂಕ್ ಖಾತೆಗೆ ಆರ್.ಟಿ.ಜಿ.ಎಸ್ ಮೂಲಕ ಹಣ ಪಾವತಿಸಲಾಗುವುದು ಎಂದು ತಿಳಿಸಿರುವ ಅವರು ಬೆಂಬಲ ಬೆಲೆ
ಯೋಜನೆ ಬಗ್ಗೆ ರೈತರಿಗೆ ಯಾವುದೇ ಸಮಸ್ಯೆಗಳಿದ್ದರೆ ತಾಲ್ಲೂಕಿನ ತಹಶೀಲ್ದಾರ್/ಕೃಷಿ ಅಧಿಕಾರಿ/ಎ.ಪಿ.ಎಂ.ಸಿ
ಕಾರ್ಯದರ್ಶಿ/ರೈತ ಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸಬಹುದು ಎಂದು ನಕುಲ್ ಅವರು ತಿಳಿಸಿದ್ದಾರೆ.
*****

The post ಬೆಂಬಲ ಬೆಲೆ ಯೋಜನೆಗಳಡಿ ಭತ್ತ ಖರೀದಿ -ಡಿಸಿ ನಕುಲ್ appeared first on Karnataka Kahale.

]]>
ಭಾರತದ ಸಾಂಸ್ಕøತಿಕ ಪರಂಪರೆ ವೈವಿಧ್ಯಮಯ: ಆರ್.ಎಂ.ಶ್ರೀದೇವಿ https://www.karnatakakahale.com/news/302 Mon, 23 Nov 2020 16:41:21 +0000 https://www.karnatakakahale.com/?p=302 ಬಳ್ಳಾರಿ: ವಿವಿಧ ರೀತಿಯ ಆಚಾರ-ವಿಚಾರ, ಸಂಸ್ಕಾರ-ಸಂಸ್ಕøತಿಗಳನ್ನು ಹೊಂದಿದ ದೇಶದ ಸಾಂಸ್ಕøತಿಕ ಪರಂಪರೆ ಜಗತ್ತಿನಲ್ಲಿಯೇ ವೈವಿಧ್ಯಮಯವಾದುದೂ, ವೈಶಿಷ್ಟ್ಯ ಪೂರ್ಣವಾದುದೂ ಎಂದು ಇತಿಹಾಸ ಪ್ರಾಧ್ಯಾಪಕಿ ಆರ್.ಎಂ.ಶ್ರೀದೇವಿ ತಿಳಿಸಿದರು. ನಗರದ ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್(ಸ್ವಾಯತ್ತ)ನಲ್ಲಿ ‘ರಾಷ್ಟ್ರೀಯ ಐಕ್ಯತಾ ಸಪ್ತಾಹ’ದ…

The post ಭಾರತದ ಸಾಂಸ್ಕøತಿಕ ಪರಂಪರೆ ವೈವಿಧ್ಯಮಯ: ಆರ್.ಎಂ.ಶ್ರೀದೇವಿ appeared first on Karnataka Kahale.

]]>

ಬಳ್ಳಾರಿ: ವಿವಿಧ ರೀತಿಯ ಆಚಾರ-ವಿಚಾರ, ಸಂಸ್ಕಾರ-ಸಂಸ್ಕøತಿಗಳನ್ನು ಹೊಂದಿದ ದೇಶದ ಸಾಂಸ್ಕøತಿಕ ಪರಂಪರೆ ಜಗತ್ತಿನಲ್ಲಿಯೇ ವೈವಿಧ್ಯಮಯವಾದುದೂ, ವೈಶಿಷ್ಟ್ಯ ಪೂರ್ಣವಾದುದೂ ಎಂದು ಇತಿಹಾಸ ಪ್ರಾಧ್ಯಾಪಕಿ ಆರ್.ಎಂ.ಶ್ರೀದೇವಿ ತಿಳಿಸಿದರು.
ನಗರದ ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್(ಸ್ವಾಯತ್ತ)ನಲ್ಲಿ ‘ರಾಷ್ಟ್ರೀಯ ಐಕ್ಯತಾ ಸಪ್ತಾಹ’ದ ‘ಸಾಂಸ್ಕøತಿಕ ಐಕ್ಯತಾ ದಿನ’ದ ಅಂಗವಾಗಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೇಶದಲ್ಲಿ ಬೇರೆ ಬೇರೆ ಆಚರಣೆಗಳನ್ನು ಹೊಂದಿದ ವಿಶಿಷ್ಟ ಸಂಸ್ಕøತಿಗಳಿದ್ದು ಅವುಗಳ ಮೂಲಕ ಐಕ್ಯತೆಯನ್ನು ಸಾಧಿಸಬೇಕಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ||ಎ.ಹೇಮಣ್ಣ ಅವರು ಮಾತನಾಡಿ, ಸಂಸ್ಕøತಿ ಮತ್ತು ನಾಗರಿಕತೆಗಳನ್ನು ಏಕರೂಪವಾಗಿ ನೋಡುತ್ತೇವೆ. ವೇಷ, ಭಾಷೆ, ಪ್ರಾದೇಶಿಕತೆ ಮೊದಲಾದವುಗಳ ಒಟ್ಟು ಸಾರವೇ ಸಂಸ್ಸøತಿಯಾಗಿದೆ ಎಂದರು.
ಸಂಸ್ಕøತಿಯೂ ವಿಭಿನ್ನವಾಗಿರುತ್ತದೆ. ಇಂತಹ ಭಿನ್ನತೆಯ ಸಂಸ್ಕøತಿಗಳಲ್ಲಿ ಏಕತೆಯನ್ನು ಸಾಧಿಸುವುದು ‘ಸಾಂಸ್ಕøತಿಕ ಏಕತಾ ದಿನ’ದ ಉದ್ದೇಶವಾಗಿದೆ ಎಂದು ತಿಳಿಸಿದರು. ಸಾಂಸ್ಕøತಿಕ ಭಿನ್ನತೆಯಿದ್ದರೂ ಸಾವಿರಾರು ವರ್ಷಗಳಿಂದ ಪ್ರಪಂಚಕ್ಕೆ ಮಹತ್ವದ ಕಾಣಿಕೆಯನ್ನು ಭಾರತವು ನೀಡಿದ್ದು, ದೇಶದ ವಿವಿಧ ಸಂಸ್ಕøತಿಗಳಿಗೆ ಪ್ರತಿಯೊಬ್ಬರೂ ಮನ್ನಣೆ ನೀಡಿ ಸಾಂಸ್ಕøತಿಕ ಐಕ್ಯತೆಯನ್ನು ಸಾಧಿಸಲು ನೆರವಾಗಬೇಕು ಎಂದು ಹೇಳಿದರು.
ಪ್ರಾಧ್ಯಾಪಕ ಎಂ.ಎಂ.ಈಶ್ವರ್ ಮಾತನಾಡಿ, ನಮ್ಮ ದೇಶದಲ್ಲಿರುವ ಕಲೆ, ವಾಸ್ತುಶಿಲ್ಪ, ಚಿತ್ರಕಲೆ, ಸಂಗೀತ ಮೊದಲಾದವುಗಳ ಪ್ರತಿಬಿಂಬವೇ ಸಂಸ್ಕøತಿಯಾಗಿದೆ ಎಂದು ತಿಳಿಸಿದರು. ವೇದಿಕೆಯಲ್ಲಿ ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥ ನಾಗರಾಜ ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಧ್ಯಾಪಕ ವೃಂದ ಸೇರಿದಂತೆ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪ್ರಾಧ್ಯಾಪಕರಾದ ಡಾ||ಶಶಿಕಾಂತ ನಿರೂಪಿಸಿದರು. ಡಾ||ತಿಪ್ಪೇರುದ್ರ ಸಂಡೂರು ಸ್ವಾಗತಿಸಿದರು. ಡಾ||ಟಿ.ವೀರಭದ್ರಪ್ಪ ವಂದಿಸಿದರು.

The post ಭಾರತದ ಸಾಂಸ್ಕøತಿಕ ಪರಂಪರೆ ವೈವಿಧ್ಯಮಯ: ಆರ್.ಎಂ.ಶ್ರೀದೇವಿ appeared first on Karnataka Kahale.

]]>