The post ಸಮಾನತೆ, ರಕ್ಷಣೆ ಕಲ್ಪಿಸಿದ ಸಂವಿಧಾನಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರಿಗೆ ದೇಶದ ಮಹಿಳೆಯರು ಕೃತಜ್ಞರಾಗಿರಬೇಕು -ಸಾಮಾಜಿಕ ಹೋರಾಟಗಾರ್ತಿ ಅಕ್ಷತಾ ಕೆ ಛಲವಾದಿ appeared first on Karnataka Kahale.
]]>
ಬಳ್ಳಾರಿ, ಡಿ.7: ದೇಶದ ಎಲ್ಲಾಜಾತಿ, ಧರ್ಮದ ಮಹಿಳೆಯರಿಗೆ ಸಮಾನ ಅವಕಾಶ, ರಕ್ಷಣೆ, ಸೌಲಭ್ಯ, ಕಲ್ಪಿಸಿದ ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ.ಬಿ ಆರ್ ಅಂಬೇಡ್ಕರ್ ಅವರಿಗೆ ದೇಶದ ಸರ್ವ ಮಹಿಳೆಯರು ಕೃತಜ್ಞರಾಗಿರಬೇಕು ಎಂದು ಸಾಮಾಜಿಕ ಹೋರಾಟಗಾರ್ತಿ ಹಾವೇರಿಯ ಅಕ್ಷತಾ ಕೆ ಛಲವಾದಿ ಅವರು ಹೇಳಿದರು.
ಶುಕ್ರವಾರ ಸಂಜೆ ನಗರದ ಡಾ. ಬಿ ಆರ್ ಅಂಬೇಡ್ಕರ್ ಭವನದ ಆವರಣದಲ್ಲಿ ಬಾಬಾಸಾಹೇಬರ ಪ್ರತಿಮೆ ಬಳಿ ಬಳ್ಳಾರಿ ಜಿಲ್ಲಾ ಛಲವಾದಿ ನೌಕರರ ಕಲ್ಯಾಣ ಸಂಘ ಹಾಗೂ ದಸಾಪ ಜಿಲ್ಲಾ ಘಟಕದ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ಜ್ಞಾನಿ ಡಾ.ಬಿ ಆರ್ ಅಂಬೇಡ್ಕರ್ ಅವರ 68ನೇ ಮಹಾ ಪರಿನಿರ್ವಾಣ ದಿನದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮಹಿಳೆ ಮನಸ್ಸು ಮಾಡಿದರೆ ದೇಶದಲ್ಲಿ ಕ್ರಾಂತಿಯನ್ನು ಹುಟ್ಟು ಹಾಕಬಲ್ಲಳು ಎಂದು ಬಾಬಾಸಾಹೇಬರು ನಂಬಿದ್ದರು. ಮೌಡ್ಯ, ಅಂಧಶ್ರದ್ಧೆದಿಂದ ಹೊರಬಂದು ಉತ್ತಮ ಸಮಾಜ ನಿರ್ಮಾಣಕ್ಕೆ ಕಾರಣರಾಗಬೇಕು ಎಂದು ತಿಳಿಸಿದರು.
ಧರ್ಮ, ದೇವರ ಹೆಸರಿನಲ್ಲಿ ಮಹಿಳೆಯರನ್ನು ಬೀದಿಗೆ ತಂದು ನಿಲ್ಲಿಸುವವರ ಕುತಂತ್ರಗಳ ಬಗ್ಗೆ ಜಾಗೃತರಾಗಬೇಕಿದೆ ಎಂದು ಹೇಳಿದರು.
ವಿಶ್ವದಲ್ಲೇ ಶ್ರೇಷ್ಟ ಎಂದು ಹೆಗ್ಗಳಿಗೆ ಪಾತ್ರರಾಗಿರುವ
ಭಾರತದ ಸಂವಿಧಾನ ಅಪಾಯದಲ್ಲಿದೆ. ಪಟ್ಟಭದ್ರರು, ಸಮಾನತೆಯ ವಿರೋಧಿಗಳು ವ್ಯವಸ್ಥಿತವಾಗಿ ಸಂವಿಧಾನದ ಆಶಯಗಳಿಗೆ ಕೊಳ್ಳಿ ಇಡುತ್ತಿದ್ದಾರೆ. ಶೋಷಿತರು, ಪ್ರಜ್ಞಾವಂತರು, ಪ್ರಗತಿಪರರು, ಅಹಿಂದ ವರ್ಗಗಳು ಒಗ್ಗಟ್ಟಾಗಿ ಸಂವಿಧಾನ ವಿರೋಧಿಗಳಿಗೆ ಪಾಠ ಕಲಿಸಬೇಕು ಎಂದರು.
ಬುದ್ಧ ಬಸವ ಬಾಬಾಸಾಹೇಬರ ತತ್ವಾದರ್ಶಗಳನ್ನು ಪಾಲಿಸುವ ಮೂಲಕ ಬಳ್ಳಾರಿ ಜಿಲ್ಲಾ ಛಲವಾದಿ ನೌಕರರ ಸಂಘ ರಾಜ್ಯದಲ್ಲಿ ಮಾದರಿಯಾಗಲಿ ಎಂದು ಅಕ್ಷತಾ ಹಾರೈಸಿದರು.

ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಪ್ರೊ.ಗೌರಿ ಮಾಣಿಕ್ ಮಾನಸ ಅವರು, ಪ್ರಸ್ತುತ ದೇಶದ ಕೋಟ್ಯಾಂತರ ಶೋಷಿತರು, ನೌಕರರು ಉತ್ತಮಜೀವನ ನಡೆಸಲು ಕಾರಣ ಬಾಬಾಸಾಹೇಬರು ಕಾರಣ. ಇವರು ಕೊಟ್ಟ ಬಿಕ್ಷೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಛಲವಾದಿ ನೌಕರರ ಕಲ್ಯಾಣ ಸಂಘದ ಗೌರವಾಧ್ಯಕ್ಷ ಡಾ. ಸಿ ಎಚ್ ಸೋಮನಾಥ, ಪ್ರಧಾನ ಕಾರ್ಯದರ್ಶಿ ಹನುಮಪ್ಪ ಸಿ, ಉಪಾಧ್ಯಕ್ಷರಾದ ಲಕ್ಷಿಕಾಂತಯ್ಯ ಸಿ ಎಸ್, ಪ್ರೊ. ಎ.ಎಸ್. ಬಸವರಾಜ, ನಾಗರಾಜ್ ಸಿ, ಪದಾಧಿಕಾರಿಗಳಾದ ವಿಲಾಸ್ ಮಾನಕರ್, ಈರಣ್ಣ ಮುದೇನೂರು, ಸದಸ್ಯರುಗಳಾದ ಡಾ. ಕವಿತಾ ಸಾಗರ, ಪ್ರೊ. ಜಿ.ಕೆ ಸಂತೋಷ್, ಪ್ರೊ.ನಿರಂಜನ್, ಡಾ. ರಾಜೇಂದ್ರ ಪ್ರಸಾದ್, ರಾಜಶೇಖರ ಮೂರ್ತಿ, ನಾಗೇಂದ್ರಪ್ಪ, ಭೀಮರಾವ್ ಐಎಎಸ್ ಕೋಚಿಂಗ್ ಸೆಂಟರ್ನ ಶೇಖರಪ್ಪ ಕುರುವಳ್ಳಿ, ರುದ್ರಯ್ಯ, ಮತ್ತು ದಸಾಪ ಜಿಲ್ಲಾಧ್ಯಕ್ಷ ಡಾ. ನಾಗಪ್ಪ ಮತ್ತಿತರರು ಉಪಸ್ಥಿತರಿದ್ದರು.
ಜಿಲ್ಲಾ ಛಲವಾದಿ ನೌಕರರ ಕಲ್ಯಾಣ ಸಂಘದ ಅಧ್ಯಕ್ಷ ಗೂಳಪ್ಪ ಸಿ ಸ್ವಾಗತಿಸಿದರು. ಕಾರ್ಯಾಧ್ಯಕ್ಷ ಸಿ.ಮಂಜುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ದೀಪ ನಮನ: ಆರಂಭದಲ್ಲಿ ಸಂಘದ ಸದಸ್ಯರು, ಪದಾಧಿಕಾರಿಗಳು ದೀಪ ನಮನ ಸಲ್ಲಿಸುವ ಮೂಲಕ ಬಾಬಾಸಾಹೇಬರನ್ನು ಶ್ರದ್ಧಾಪೂರ್ವಕವಾಗಿ ಗೌರವ ಸಲ್ಲಿಸಿದರು.
The post ಸಮಾನತೆ, ರಕ್ಷಣೆ ಕಲ್ಪಿಸಿದ ಸಂವಿಧಾನಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರಿಗೆ ದೇಶದ ಮಹಿಳೆಯರು ಕೃತಜ್ಞರಾಗಿರಬೇಕು -ಸಾಮಾಜಿಕ ಹೋರಾಟಗಾರ್ತಿ ಅಕ್ಷತಾ ಕೆ ಛಲವಾದಿ appeared first on Karnataka Kahale.
]]>The post ಕುರುಗೋಡು ಸರಕಾರಿ ಡಿಗ್ರಿ ಕಾಲೇಜಿನಲ್ಲಿ ವಿಶೇಷ ಉಪನ್ಯಾಸ: ದಲಿತರ ಪ್ರಗತಿಗೆ ಆಂತರಿಕ ಮತ್ತು ಬಾಹ್ಯ ಬಿಕ್ಕಟ್ಟು ಹಾಗೂ ಜಾಗತೀಕರಣ ಕಾರಣ -ಚಿಂತಕ ಡಾ.ಹೊನ್ನೂರಾಲಿ ಐ ಅಭಿಮತ appeared first on Karnataka Kahale.
]]>
ಕುರುಗೋಡು(ಬಳ್ಳಾರಿ ಜಿ.), ಆ.11: ಸಮಕಾಲೀನ ದಲಿತರ ಪ್ರಗತಿಗೆ ಎರಡು ಪ್ರಮುಖ ಬಿಕ್ಕಟ್ಟುಗಳು ಕಾರಣವಾಗಿವೆ ಎಂದು ಬಳ್ಳಾರಿಯ ಎಸ್ ಎಸ್ ಎ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ, ಚಿಂತಕ ಡಾ. ಹೊನ್ನೂರಾಲಿ ಐ ಅವರು ಅಭಿಪ್ರಾಯ ಪಟ್ಟರು.
ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ದಲಿತ ಸಾಹಿತ್ಯ ಪರಿಷತ್ತು, ಬಳ್ಳಾರಿ ಜಿಲ್ಲಾ ಘಟಕದ ಸಹಯೋಗದಲ್ಲಿ ಆಯೋಜಿಸಿದ್ದ ‘ಡಾ. ಬಿ ಆರ್ ಅಂಬೇಡ್ಕರ್ ಸಂವಿಧಾನ ಮತ್ತು ಸಮಕಾಲೀನ ದಲಿತರು’ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಆಂತರಿಕ ಮತ್ತು ಬಾಹ್ಯ ಬಿಕ್ಕಟ್ಟು ಹಾಗೂ ಜಾಗತೀಕರಣ ದಲಿತರ ಅಭಿವೃದ್ಧಿಗೆ ಹಿನ್ನಡೆಯಾಗಿದೆ ಎಂದು ಉದಾಹರಣೆ ಸಮೇತ ವಿಶ್ಲೇಷಿಸಿದರು.
ಆಂತರಿಕ ಮತ್ತು ಬಾಹ್ಯ ಬಿಕ್ಕಟ್ಟುಗಳ ಪರಿಹಾರಕ್ಕೆ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರ ಚಿಂತನೆಗಳನ್ನು ದಲಿತರು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಧರ್ಮ ನಿರಪೇಕ್ಷ ಕಟ್ಟುವಲ್ಲಿ ವಿಫಲರಾಗಿದ್ದೇವೆ ಎಂದು ವಿಷಾಧಿಸಿದ ಡಾ.ಹೊನ್ನೂರಾಲಿ ಅವರು ಜಾಗತೀಕರಣ ಹಾಗೂ ಪಟ್ಟಭದ್ರರ ಹಿತಾಸಕ್ತಿಯಿಂದಾಗಿ ದಲಿತರ ಮೀಸಲಾತಿ ಹಾಗೂ ಸರಕಾರಿ ಉದ್ಯೋಗಕ್ಕೆ ಧಕ್ಕೆ ಬಂದಿದೆ ಎಂದರು.
ಖಾಸಗಿ ಸಂಸ್ಥೆಗಳಲ್ಲಿ ಮೇಲ್ವರ್ಗದ ಬಿಗಿ ಹಿಡಿತ ಹೊಂದಿದ್ದು ತಳ, ಶೋಷಿತ ಸಮುದಾಯಗಳಿಗೆ ಉದ್ಯೋಗಗಳು ಮರೀಚಿಕೆಯಾಗುತ್ತಿವೆ. ಈ ನಿಟ್ಟಿನಲ್ಲಿ ಸಮುದಾಯ ಎಚ್ಚೆತ್ತು ಕೊಳ್ಳಬೇಕಿದೆ ಎಂದು ತಿಳಿಸಿದರು.
ದಲಿತ ಯುವಜನತೆ ತಮ್ಮದಲ್ಲದ ಸಂಸ್ಕೃತಿಯ ಭಾಗವಾಗುತ್ತಿರುವುದು ಕೂಡಾ ಹಲವು ಸಮಸ್ಯೆಗಳ ಹುಟ್ಟಿಗೆ ಕಾರಣ ಎಂದು ಹೇಳಿದರು.
ದಲಿತ ಸಾಹಿತ್ಯ ಪರಿಷತ್ತು ಕಾರ್ಯಾಗಾರ, ವಿಚಾರ ಸಂಕಿರಣಗಳನ್ನು ಹಮ್ಮಿಕೊಳ್ಳುವ ಮೂಲಕ ಡಾ. ಅಂಬೇಡ್ಕರ್, ಜ್ಯೋತಿಬಾಪುಲೆ, ಪೆರಿಯಾರ್, ಡಾ.ಜಗಜೀವನರಾಮ್ ಅವರ ಚಿಂತನೆಗಳನ್ನು ಯುವಜನತೆಯ ಮನಸುಗಳಲ್ಲಿ ಬಿತ್ತಬೇಕು ಎಂದು ಸಲಹೆನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ.ಹೆಚ್. ರಾಮಕೃಷ್ಣ ಅವರು ಮಾತನಾಡಿ, ಯುವ ಸಮುದಾಯದಲ್ಲಿ ವೈಚಾರಿಕತೆ ಮೂಡಿಸುವ ಜವಾಬ್ದಾರಿ ದಸಾಪ ನೂತನ ಅಧ್ಯಕ್ಷ ನಾಗಪ್ಪ ಮತ್ತು ಪದಾಧಿಕಾರಿಗಳ ಮೇಲಿದೆ. ಜಿಲ್ಲೆಯ ಶಾಲಾ ಕಾಲೇಜುಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಿ ಅಂಧ ಶ್ರದ್ಧೆ, ಮೂಢನಂಬಿಕೆಗಳ ಬಗ್ಗೆ ಅರಿವು ಮೂಡಿಸ ಬೇಕು ಎಂದ ಅವರು ದಸಾಪ ಹಮ್ಮಿಕೊಳ್ಳುವ ಕಾರ್ಯಕ್ರಮಗಳಿಗೆ ಸದಾ ತಾವು ಸಹಕಾರ ನೀಡುವುದಾಗಿ ತಿಳಿಸಿದರು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ತೆಕ್ಕಲಕೋಟೆ ಸರಕಾರಿ ಪ್ರಥಮನದರ್ಜೆ ಕಾಲೇಜಿನ ಪ್ರಾಚಾರ್ಯ ಡಾ. ಮಲ್ಲಿಕಾರ್ಜುನ ಹೆಚ್ ಮೋಕ ಅವರು, ಬಹುಸಂಸ್ಕೃತಿಯ ಈ ನೆಲ ನಿಂತ ನೀರಾಗಬಾರದು. ಈ ನಿಟ್ಟಿನಲ್ಲಿ ದಸಾಪ ಜಿಲ್ಲೆಯಾದ್ಯಂತ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಪರಿಷತ್ತಿನಲ್ಲಿ
ಪ್ರಗತಿಪರ ದಲಿತೇತರಿಗೂ ಸದಸ್ಯತ್ವ ನೀಡಬೇಕು ಎಂದು ಕೋರಿದರು.

ವಿಎಸ್ ಕೆ ವಿವಿಯ ಸಹಾಯಕ ಪ್ರಾಧ್ಯಾಪಕರುಗಳಾದ ಡಾ. ರಾಜೇಂದ್ರ ಪ್ರಸಾದ್, ಡಾ. ಕುಮಾರ್, ಡಾ. ವಿಜಯಕುಮಾರ್, ಕಾಲೇಜಿನ ಆಂಗ್ಲ ವಿಭಾಗದ ಮುಖ್ಯಸ್ಥೆ ಡಾ. ಶಾಂತಲಾ, ಕರ್ನಾಟಕ ರಾಜ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜು ಅತಿಥಿ ಉಪನ್ಯಾಸಕ ಸಂಘದ ಜಿಲ್ಲಾಧ್ಯಕ್ಷ ಡಾ. ಟಿ. ದುರುಗಪ್ಪ ಮತ್ತಿತರರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಸಹ ಪ್ರಾಧ್ಯಾಪಕ ಡಾ. ಶಶಿಕಾಂತ ಬಿಲ್ಲವ, ಸಹಾಯಕ ಪ್ರಾಧ್ಯಾಪಕ ಡಾ. ಚಂದ್ರಕಾಂತ ಕೆ ಎಂ, ಗ್ರಂಥಪಾಲಕ ಕಿರಣ್ ಸುಹಾಸ್,
ಉಪನ್ಯಾಸಕರುಗಳಾದ ಡಾ. ರಾಮಯ್ಯ, ಡಾ. ಕೆ. ಬಸಪ್ಪ, ಡಿ.ಸಿದ್ದೇಶ್, ಟಿ.ರುದ್ರಮುನಿ, ರಾಮಣ್ಣ, ಮುತ್ತಪ್ಪ, ಡಾ.ಹನುಮೇಶ್ ಜೋಳದರಾಶಿ,
ಎಂ.ರಫಿ, ಮಾರೆಪ್ಪ ಎಕೆ, ಗುರುರಾಜ್, ಶರಣಪ್ಪ, ಡಾ.ಬಸವರಾಜ ಟಿ, ಡಾ.ಬೆಣಕಲ್ಲು ಗಂಗಾಧರ, ಮುದುಕಪ್ಪ ಕೆ, ಹೊನ್ನೂರು ಸಾಬ್, ಮೊಹಮ್ಮದ್ ಗೌಸ್, ರಾಮಣ್ಣ, ಡಾ.ಜ್ಯೋತಿಲಿಂಗ ಸೇರಿದಂತೆ ಕಾಲೇಜಿನ
ಎಲ್ಲಾ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಭಾಗವಹಿಸಿದ್ದರು.

ಸನ್ಮಾನ: ಇದೇ ಸಂದರ್ಭದಲ್ಲಿ ನೂತನ ಜಿಲ್ಲಾಧ್ಯಕ್ಷ ನಾಗಪ್ಪ ಅವರನ್ನು ವಿವಿಧ ಸಂಘ ಸಂಸ್ಥೆಗಳು ಹಾಗೂ ಗಣ್ಯ ಅತಿಥಿಗಳನ್ನು ದಸಾಪ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಕಾಲೇಜಿನ ಇತಿಹಾಸ ಉಪನ್ಯಾಸಕ ರಾಮು ಎ ಕೆ ಸ್ವಾಗತಿಸಿದರು. ದಸಾಪ ನಿಕಟಪೂರ್ವ ಜಿಲ್ಲಾಧ್ಯಕ್ಷ ಸಿ.ಮಂಜುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿದರು. ದಸಾಪ ನೂತನ ಜಿಲ್ಲಾಧ್ಯಕ್ಷ ನಾಗಪ್ಪ ಬಿ ಇ ವಂದಿಸಿದರು. ವಿದ್ಯಾರ್ಥಿನಿ ಶಾಂತಿ ಪ್ರಾರ್ಥಿಸಿದರು.
ಕನ್ನಡ ವಿಭಾಗದ ಉಪನ್ಯಾಸಕ ಆರ್. ರುದ್ರಮುನಿ ನಿರೂಪಿಸಿದರು.
The post ಕುರುಗೋಡು ಸರಕಾರಿ ಡಿಗ್ರಿ ಕಾಲೇಜಿನಲ್ಲಿ ವಿಶೇಷ ಉಪನ್ಯಾಸ: ದಲಿತರ ಪ್ರಗತಿಗೆ ಆಂತರಿಕ ಮತ್ತು ಬಾಹ್ಯ ಬಿಕ್ಕಟ್ಟು ಹಾಗೂ ಜಾಗತೀಕರಣ ಕಾರಣ -ಚಿಂತಕ ಡಾ.ಹೊನ್ನೂರಾಲಿ ಐ ಅಭಿಮತ appeared first on Karnataka Kahale.
]]>The post ದಸಾಪ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಡಾ.ನಾಗಪ್ಪ ಬಿ.ಈ ನೇಮಕ appeared first on Karnataka Kahale.
]]>
ಬಳ್ಳಾರಿ ಜು.21: ದಲಿತ ಸಾಹಿತ್ಯ ಪರಿಷತ್ತಿನ(ದಸಾಪ) ಬಳ್ಳಾರಿ ಜಿಲ್ಲಾ ಘಟಕದ ನೂತನ ಅಧ್ಯಕ್ಷರಾಗಿ ಕುರುಗೋಡು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕ ಡಾ.ನಾಗಪ್ಪ ಬಿ.ಈ. ಅವರು ನೇಮಕವಾಗಿದ್ದಾರೆ.
ದಸಾಪ ರಾಜ್ಯಾಧ್ಯಕ್ಷ ಡಾ.ಅರ್ಜುನ ಗೊಳಸಂಗಿ ಅವರು ಯುವ ಸಂಘಟಕ ಡಾ. ನಾಗಪ್ಪ ಅವರನ್ನು ನೇಮಿಸಿ ಆದೇಶ ಪತ್ರ ನೀಡಿದ್ದಾರೆ.
ಪರಿಚಯ: ನಗರದ ಸರಳಾದೇವಿ ಸರಕಾರಿ ಪದವಿ ಕಾಲೇಜು, ಮಹಿಳಾ ಸರ್ಕಾರಿ ಪದವಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿರುವ ಡಾ. ನಾಗಪ್ಪ ಅವರು ‘ದೇವದಾಸಿ
ಮಹಿಳೆಯರ ಸಮಸ್ಯೆ ಮತ್ತು ಸವಾಲುಗಳು: ಒಂದು ಸಮಾಜಶಾಸ್ತ್ರೀಯ ಅಧ್ಯಯನ’ ವಿಷಯದ
ಕುರಿತು ವಿಎಸ್ ಕೆ ವಿವಿ ಸಮಾಜಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ರಾಜೇಂದ್ರ ಪ್ರಸಾದ್ ಅವರ ಮಾರ್ಗದರ್ಶನದಲ್ಲಿ
ಪಿಎಚ್.ಡಿ ಪದವಿಯನ್ನು ಪಡೆದಿದ್ದಾರೆ. ಬಹುಜನ ವಿದ್ಯಾರ್ಥಿ ಸಂಘ (ಬಿವಿಎಸ್) ಸೇರಿದಂತೆ ಹಲವು ಜನಪರ ಸಂಘಟನೆಗಳೊಂದಿಗೆ ಗುರುತಿಸಿಕೊಂಡಿದ್ದಾರೆ.
ಅಭಿನಂದನೆ: ಡಾ.ನಾಗಪ್ಪ ಅವರ ನೇಮಕವನ್ನು ಸ್ವಾಗತಿಸಿರುವ ದಸಾಪ ನಿಕಟ ಪೂರ್ವ ಜಿಲ್ಲಾಧ್ಯಕ್ಷ ಸಿ.ಮಂಜುನಾಥ್, ಕರ್ನಾಟಕ ರಾಜ್ಯ ಸರಕಾರಿ ಪದವಿ ಕಾಲೇಜು ಅತಿಥಿ ಉಪನ್ಯಾಸಕರ ಸಂಘದ ರಾಜ್ಯ ಗೌರವಾಧ್ಯಕ್ಷ ಡಾ. ಟಿ.ದುರುಗಪ್ಪ , ಕುರುಗೋಡು ಸರಕಾರಿ ಪದವಿ ಕಾಲೇಜಿನ ಪ್ರಾಚಾರ್ಯ ಡಾ. ರಾಮಕೃಷ್ಣ ಹೆಚ್, ತೆಕ್ಕಲಕೋಟೆ ಸರಕಾರಿ ಪದವಿ ಕಾಲೇಜಿನ ಪ್ರಾಚಾರ್ಯ ಡಾ. ಮಲ್ಲಿಕಾರ್ಜುನ ಮೋಕ, ಅತಿಥಿ ಉಪನ್ಯಾಸಕರ ಸಂಘ ಬಳ್ಳಾರಿ ಜಿಲ್ಲಾ ಘಟಕದ ಮುಖಂಡರುಗಳಾದ ಡಾ. ಕೆ.ಬಸಪ್ಪ, ಡಾ. ರಾಮಯ್ಯ, ಡಾ.ಹನುಮೇಶ್ ಹೆಚ್, ಸಿದ್ದೇಶ್ ಡಿ, ಗುರುರಾಜ್, ರುದ್ರಮುನಿ, ಎಂ. ರಫಿ, ಮಾರೆಪ್ಪ ಎ ಕೆ, ರಮೇಶ್ ಎಸ್.ಎಂ, ಸಿರುಗುಪ್ಪ ಸರಕಾರಿ ಪದವಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ಚಂದ್ರಕಾಂತ್ ಕೆ ಎಂ ಮತ್ತಿತರರು ಅಭಿನಂದಿಸಿದ್ದಾರೆ. ——-
The post ದಸಾಪ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಡಾ.ನಾಗಪ್ಪ ಬಿ.ಈ ನೇಮಕ appeared first on Karnataka Kahale.
]]>The post ಡಾ. ಬಿ. ಆರ್ ಅಂಬೇಡ್ಕರ್ ಸಾಹಿತ್ಯ ಅಕಾಡೆಮಿ ಸ್ಥಾಪಿಸಬೇಕು -10ನೇ ಅಖಿಲಭಾರತ ದಲಿತ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಡಾ. ಎಚ್ ಟಿ ಪೋತೆ ಒತ್ತಾಯ appeared first on Karnataka Kahale.
]]>
ವಿಜಯಪುರ, ಜು.29:ರಾಜ್ಯದಲ್ಲಿ ಡಾ. ಬಿ. ಆರ್ ಅಂಬೇಡ್ಕರ್ ಸಾಹಿತ್ಯ ಅಕಾಡೆಮಿ ಸ್ಥಾಪಿಸಬೇಕು ಎಂದು ಸಾಹಿತಿ , ಸಂಶೋದಕ, ಜಾನಪದ ವಿದ್ವಾಂಸ ಡಾ. ಎಚ್.ಟಿ. ಪೋತೆ ಅವರು ರಾಜ್ಯ ಸರಕಾರವನ್ನು ಒತ್ತಾಯಿಸಿದರು.
ಗದಗಿನ ದಲಿತ ಸಾಹಿತ್ಯ ಪರಿಷತ್ ರಾಜ್ಯ ಘಟಕ ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರ ದಲ್ಲಿ ಆಯೋಜಿಸಿರುವ ಬೆಳ್ಳಿ ಹಬ್ಬದ ಸಂಭ್ರಮ ಹಾಗೂ 10 ನೆಯ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನವ ಬೌದ್ಧರಿಗಾಗಿ ಪ್ರತ್ಯೇಕ ನಿಗಮ ಸ್ಥಾಪಿಸಬೇಕು, ದಲಿತ ಚಳವಳಿ ಹೋರಾಟಗಾರರ ಹಾಗೂ ಚಿಂತಕರ ಜೀವನ ಕಥನ ಗ್ರಂಥಗಳ ಪ್ರಕಟಣೆಗೆ ಅನುದಾನ ನೀಡಬೇಕು ಹಾಗೂ ಸಫಾಯಿ ಕರ್ಮಚಾರಿ ಕೆಲಸದಲ್ಲಿ ಮಾನಬ ಬಳಕೆ ಬದಲು ಯಂತ್ರೋಪಕರಣಗಳನ್ನು ಬಳಸುವುದಾಗ ಬೇಕು ಹಾಗೂ ಸಫಾಯಿ ಕರ್ಮಚಾರಿ ಉದ್ಯೋಗದಲ್ಲಿದ್ದಾರೋ ಅವರಿಗೆ ಪರ್ಯಾಯ ಉದ್ಯೋಗಗಳನ್ನು ನೀಡಬೇಕು ಎಂದು ರಾಜ್ಯ ಸರಕಾರಕ್ಕೆ ತಮ್ಮ ಹಕ್ಕೋತ್ತಾಯವನ್ನು ಅಧ್ಯಕ್ಷೀಯ ಭಾಷಣದಲ್ಲಿ ಪ್ರಬಲವಾಗಿ ಮಂಡಿಸಿದರು.
ಕನ್ನಡದ ದಲಿತ ಸಾಹಿತ್ಯವು ರೂಪು ಪಡೆದಿರುವುದು ಸಾಹಿತ್ಯಿಕ ಭಾಷೆಯ ಆವರಣದಲ್ಲಿ ಎಂದು ಹೇಳಿದರು.
ಕನ್ನಡದ ದಲಿತ ಸಾಹಿತ್ಯವು ಭಾರತೀಯ ಸಂದರ್ಭದಲ್ಲಿ ಸಮೃದ್ಧ ನೆಲೆಯನ್ನು ಪಡೆದಿದೆ. ಕಾವ್ಯ, ಕಥೆ, ಕಾದಂಬರಿ, ಆತ್ಮಕಥೆ, ನಾಟಕ ಪ್ರಕಾರಗಳು ಸೃಜನಶೀಲತೆಯ ಉತ್ಕೃಷ್ಟತೆಯನ್ನು ಪಡೆದಿವೆ ಎಂದು ತಿಳಿಸಿದರು.
ಬಿ.ಶಾಮಸುಂದರ್, ಕುಮಾರ ಕಕ್ಕಯ್ಯ ಪೋಳ,
ಜಿ. ವೆಂಕಟಯ್ಯ, ಸೋಸಲೆ ಸಿದ್ದಪ್ಪ, ಬೀದರಿನ ಗವಾಯಿಗಳು, ಎನ್.ನರಸಿಂಹಯ್ಯ ಅವರು ಮೊದಲ ತಲೆಮಾರಿನ ದಲಿತ ಲೇಖಕರಾಗಿ ಕನ್ನಡ ದಲಿತ ಸಾಹಿತ್ಯಕ್ಕೆ ನೀಡಿದ ಕೊಡುಗೆ ಅಪಾರವಾದುದು ಎಂದು ಡಾ.ಪೋತೆ ಹೇಳಿದರು.

ದಲಿತರಲ್ಲಿ ಜಾಗೃತಿಯ ಪ್ರಜ್ಞೆಯನ್ನು ಮೂಡಿಸುವಲ್ಲಿ ನಾಡಿನ ದಲಿತ ಚಳವಳಿಗಳ ಪಾತ್ರ ಅನನ್ಯ. ಆರಂಭದ ದಿನಗಳಲ್ಲಿ ಚಳವಳಿಗಳು ತುಂಬಿದ ಉತ್ಸಾಹವೇ ಪ್ರಸ್ತುತ ದಲಿತ ಪ್ರಜ್ಞೆ ಇಷ್ಟೊಂದು ಪ್ರಮಾಣದಲ್ಲಿ ಬೆಳೆಯಲು ಕಾರಣವಾಗಿದೆ ಎಂದು ಅಭಿಪ್ರಾಯ ಪಟ್ಟರು.
ದೇಶಕ್ಕೆ ಸ್ವಾತಂತ್ರ್ಯ ಬಂದು ಎಪ್ಪತ್ತೈದು ವರ್ಷಗಳಾದರೂ ಬಡತನ ಎಲ್ಲಾ ಸಮುದಾಯಗಳಲ್ಲೂ ಹಾಗೆಯೇ ಇದೆ. ಸಹಸ್ರಾರು ದಲಿತ ಸಮುದಾಯಗಳು ಬಡತನದ ಕೆಳ ರೇಖೆಗಿಂತ ಮೇಲೆಳಲು ಸಾಧ್ಯವಾಗಿಲ್ಲ ಎಂದು ವಿಷಾಧಿಸಿದರು.
ಸಂವಿಧಾನದ ಸೌಲಭ್ಯಗಳು ತಳ ವರ್ಗದವರಿಗೆ ಸಿಗುವುದಕ್ಕಿಂತ ದಲ್ಲಾಳಿಗಳ ಹಾಗೂ ಮಧ್ಯವರ್ತಿ ಗೂಂಡಾಗಳ ಹಾಗೂ ಜಾತಿ ರಾಜಕಾರಣದವರ ಕೈಚಳಕಕ್ಕೆ ಒಳಗಾಗಿ ಸುಳ್ಳು ಜಾತಿ ಪ್ರಮಾಣಪತ್ರ ಪಡೆದವರಿಗೆ ಮೀಸಲಾತಿ ದಕ್ಕುತ್ತಿದೆ ಎಂದು ಡಾ.ಪೋತೆ ದೂರಿದರು.
ಕೇಂದ್ರ ಹಾಗೂ ರಾಜ್ಯ ಸರಕಾರಗಳು ಹಲವು ಯೋಜನೆಗಳಲ್ಲಿ ಸಾಮಾಜಿಕ ಬಡತನವನ್ನು ಉತ್ತಮೀಕರಿಸಲು ಇನ್ನೂ ಹೆಚ್ಚಿನ ರೀತಿಯಲ್ಲಿ ಪ್ರಯತ್ನಿಸ ಬೇಕು ಆದರೆ ಅಂಥ ಪ್ರಯತ್ನಗಳು ಸಾಕಾಗೋಲ್ಲ ಎನ್ನುವುದಕ್ಕೆ ಮಾದ್ಯಮಗಳಲ್ಲಿ ಹಲವಾರು ಅನ್ವೇಷಿತ ವರದಿಗಳು ಸಾಬೀತು ಪಡಿಸಿವೆ ಎಂದರು.
ದಲಿತ ಸಮುದಾಯದ ಸಾಮಾಜಿಕ ಜೀವನ ಮಟ್ಟ ಸುಧಾರಿಸುವಲ್ಲಿ ಆರ್ಥಿಕ ಸಬಲೀಕರಣ ಮತ್ತು ಇತರೆ ಸಮುದಾಯದವರ ಮಾನವೀಕರಣದ ಪೋಷಣೆ ಮತ್ತು ಆಂತರಿಕ ವಪ್ರೀತಿಯೂ ಅಗತ್ಯವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ದಲಿತ ಶೋಷಿತ, ಮಹಿಳಾ ಸಮುದಾಯದಲ್ಲಿ ಶಕ್ತಿ ತುಂಬಲು ಬುದ್ಧ, ಬಸವ, ಅಂಬೇಡ್ಕರ್ ವಿಚಾರಗಳನ್ನು ಸರಕಾರ, ಸಾರ್ವಜನಿಕರು, ಸಂಘ ಸಂಸ್ಥೆಗಳು ಹೆಚ್ಚೆಚ್ಚು ಪ್ರಚಾರ ಮಾಡಬೇಕು ಎಂದು ಡಾ.ಪೋತೆ ಒತ್ತಾಯಿಸಿದರು.

ವಿಜಯಪುರ ಜಿಲ್ಲಾ ಉಸ್ತುವಾರಿ ಹಾಗೂ ಬೃಹತ್ ಕೈಗಾರಿಕಾ ಸಚಿವರಾದ ಎಂ. ಬಿ ಪಾಟೀಲ್ ಸಮ್ಮೇಳನಕ್ಕೆ ಚಾಲನೆ ನೀಡಿದರು. ದಸಾಪ ರಾಜ್ಯಾಧ್ಯಕ್ಷ ಡಾ. ಅರ್ಜುನ ಗೊಳಸಂಗಿ, ವಿಜಯಪುರದ ಬುದ್ಧ ವಿಹಾರದ ಸಂಘಪಾಲ ಭಂತೇಜಿ ಅವರು ನೇತೃತ್ವವಹಿಸಿದ್ದರು. ವಿದ್ವಾಂಸರಾದ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್, ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಅಲ್ಲಾಗಿರಿರಾಜ, ಹೋರಾಟಗಾರ ಡಾ. ಡಿ ಜಿ ಸಾಗರ್, ವಿಧಾನಪರಿಷತ್ತಿನ ಮಾಜಿ ಸದಸ್ಯ ಡಿ.ಎಸ್. ವೀರಯ್ಯ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾಜು ಆಲಗೂರ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.

—–
The post ಡಾ. ಬಿ. ಆರ್ ಅಂಬೇಡ್ಕರ್ ಸಾಹಿತ್ಯ ಅಕಾಡೆಮಿ ಸ್ಥಾಪಿಸಬೇಕು -10ನೇ ಅಖಿಲಭಾರತ ದಲಿತ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಡಾ. ಎಚ್ ಟಿ ಪೋತೆ ಒತ್ತಾಯ appeared first on Karnataka Kahale.
]]>The post ಕವಿ ಡಾ. ಸದಾಶಿವ ದೊಡಮನಿ ಅವರಿಗೆ ದ.ಸಾ.ಪ ‘ಬೆಳ್ಳಿ ಸಂಭ್ರಮ ಪುಸ್ತಕ ಪ್ರಶಸ್ತಿ’ appeared first on Karnataka Kahale.
]]>
ಇಲಕಲ್ಲು, ಜೂ.27: ಪಟ್ಟಣದ ಶ್ರೀ ವಿಜಯ ಮಹಾಂತೇಶ ಕಲೆ, ವಿಜ್ಞಾನ ಹಾಗೂ ವಾಣಿಜ್ಯ ಪದವಿ ಮಹಾವಿದ್ಯಾಲಯದ ಕನ್ನಡ ಸಹಾಯಕ ಪ್ರಾಧ್ಯಾಪಕ, ಕವಿ ಡಾ. ಸದಾಶಿವ ದೊಡಮನಿ ಅವರ ‘ಇರುವುದು ಒಂದೇ ರೊಟ್ಟಿ’ ಕವನ ಸಂಕಲನಕ್ಕೆ 2021ನೆಯ ಸಾಲಿನ ದಲಿತ ಸಾಹಿತ್ಯ ಪರಿಷತ್ತಿನ ‘ಬೆಳ್ಳಿ ಸಂಭ್ರಮ ಪುಸ್ತಕ ಪ್ರಶಸ್ತಿ’ ಲಭಿಸಿದೆ. ಡಾ. ಸದಾಶಿವ ಅವರು ಇದೂವರೆಗೆ ‘ಧರೆಹತ್ತಿ ಉರಿದೊಡೆ’, ‘ನೆರಳಿಗೂ ಮೈಲಿಗೆ’, ‘ಇರುವುದು ಒಂದೇ ರೊಟ್ಟಿ’ ಕವನ ಸಂಕಲನಗಳನ್ನು; ‘ಧಾರವಾಡ ಮತ್ತು ಹಲಸಂಗಿ ಗೆಳೆಯರ ಗುಂಪು: ಒಂದು ಸಾಂಸ್ಕೃತಿಕ ಅಧ್ಯಯನ’ ಸಂಶೋಧನಾ ಮಹಾಪ್ರಬಂಧವನ್ನು; ‘ಪ್ರತಿಸ್ಪಂದನ’ ವಿಮರ್ಶೆಯನ್ನು; ‘ದಲಿತ ಸಾಹಿತ್ಯ ಸಂಚಯ’ ಸಂಪಾದನಾ ಕೃತಿಯನ್ನು ಪ್ರಕಟಿಸಿದ್ದಾರೆ. ‘ಇರುವುದು ಒಂದೇ ರೊಟ್ಟಿ’ ಕವನ ಸಂಕಲನಕ್ಕೆ 2021 ನೇ ಸಾಲಿನ ‘ಸೃಷ್ಟಿಕಾವ್ಯ ಪುರಸ್ಕಾರ’ವೂ ಸಂದಿದೆ.
ಡಾ. ಅರ್ಜುನ ಗೊಳಸಂಗಿ
ಜು.29 ಹಾಗೂ 30 ರಂದು ವಿಜಯಪುರ ನಗರದ ಕಂದಗಲ್ ಹಣಮಂತರಾಯ ರಂಗಮಂದಿರದಲ್ಲಿ ದಲಿತ ಸಾಹಿತ್ಯ ಪರಿಷತ್ತಿನ ‘ಬೆಳ್ಳಿ ಸಂಭ್ರಮ’ ಪ್ರಯುಕ್ತ ಆಯೋಜಿಸಲಾಗಿರುವ ಹತ್ತನೆಯ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ಡಾ. ಸದಾಶಿವ ದೊಡಮನಿ ಅವರಿಗೆ ‘ಬೆಳ್ಳಿ ಸಂಭ್ರಮ ಪುಸ್ತಕ ಪ್ರಶಸ್ತಿ’ಯನ್ನು ಪ್ರದಾನ ಮಾಡಲಾಗುವುದೆಂದು ದ.ಸಾ.ಪ ರಾಜ್ಯ ಘಟಕದ ಅಧ್ಯಕ್ಷ ಡಾ. ಅರ್ಜುನ ಗೊಳಸಂಗಿ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
The post ಕವಿ ಡಾ. ಸದಾಶಿವ ದೊಡಮನಿ ಅವರಿಗೆ ದ.ಸಾ.ಪ ‘ಬೆಳ್ಳಿ ಸಂಭ್ರಮ ಪುಸ್ತಕ ಪ್ರಶಸ್ತಿ’ appeared first on Karnataka Kahale.
]]>The post 10ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಡಾ. ಎಚ್.ಟಿ. ಪೋತೆ ಆಯ್ಕೆ -ದಸಾಪ ರಾಜ್ಯಾಧ್ಯಕ್ಷ ಡಾ.ಅರ್ಜುನ ಗೊಳಸಂಗಿ appeared first on Karnataka Kahale.
]]>
ಡಾ.ಎಚ್.ಟಿ. ಪೋತೆ
ವಿಜಯಪುರ, ಜೂ. 25: ಹತ್ತನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಡಾ. ಎಚ್.ಟಿ. ಪೋತೆ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ದಲಿತ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ. ಅರ್ಜುನ ಗೊಳಸಂಗಿ ಅವರು ಪ್ರಕಟಿಸಿದರು.
ನಗರದಲ್ಲಿ ಇಂದು ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು.
ಗದಗಿನ ದಲಿತ ಸಾಹಿತ್ಯ ಪರಿಷತ್ತು ಜು.29 ಮತ್ತು 30ರಂದು ನಗರದ ವಿಜಯಪುರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಸಮ್ಮೇಳನವನ್ನು ಹಮ್ಮಿಕೊಂಡಿದೆ.
ಡಾ.ಅರ್ಜುನ ಗೊಳಸಂಗಿ
ಗುಲ್ಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿರುವ ಡಾ. ಪೋತೆ ಅವರು ನಾಡಿನ ಮಹತ್ವದ ಅಂಬೇಡ್ಕರವಾದಿ ಲೇಖಕರಾಗಿದ್ದಾರೆ.
ಪರಿಚಯ: ಪ್ರೊ. ಎಚ್ ಟಿ ಪೋತೆಯವರು ಮೂಲತಃ ಜಾನಪದ ವಿದ್ವಾಂಸರು. ಆದರೂ ಕತೆ, ಪ್ರಬಂಧ, ಕಾದಂಬರಿ, ವಚನ ಸಾಹಿತ್ಯ, ದಲಿತ ಸಾಹಿತ್ಯ, ವಿಚಾರ, ವಿಮರ್ಶೆ ,ಹಾಯ್ಕುಗಳು ಮೊದಲಾದ ಪ್ರಕಾರಗಳ ಬರಹಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ‘ಶರಣ ಸಾಹಿತ್ಯ ವಿಮರ್ಶಾ ಸಂಪುಟಗಳು’ ಸು. ೧೫ ಸಂಪುಟಗಳನ್ನು, ‘ದಲಿತ ಸಾಹಿತ್ಯ ಸಂಪುಟಗಳು’ ಸು. ೬ ಸಂಪುಟಗಳು, ‘ಕನ್ನಡ ಬೌದ್ಧ ಸಾಹಿತ್ಯ ಸಂಪುಟಗಳು’ ಆರು ಸಂಪುಟಗಳು ಹೀಗೆ ಬೃಹತ್ ಸಂಪುಟಗಳ ಪ್ರಧಾನ ಸಂಪಾದನಕಾರರಾಗಿ ಕನ್ನಡ ಸಾಹಿತ್ಯ ಲೋಕಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ. ಬಹುಮುಖ್ಯವಾಗಿ ಇವರು ಕನ್ನಡ ದಲಿತ ಸಾಹಿತ್ಯದಲ್ಲಿ ಅಂಬೇಡ್ಕರ್ ವಾದಿ ಚಿಂತನೆಗಳನ್ನು ಗಂಭೀರ ನೆಲೆಯಲ್ಲಿ ತಾತ್ವಕವಾಗಿ ಮೈಗೂಡಿಸಿಕೊಂಡಿರುವ ವಿಶಿಷ್ಟ ಹಾಗೂ ಅಪರೂಪದ ಲೇಖಕರು ಮತ್ತು ಚಿಂತಕರು. ಕನ್ನಡ, ಹಿಂದಿ, ಇಂಗ್ಲಿಷ್, ಮರಾಠಿ ಮತ್ತು ಉರ್ದು ಭಾಷೆಗಳಲ್ಲಿ ಇವರ ಪ್ರಧಾನ ಸಂಪಾದಕತ್ವದಲ್ಲಿಅಂಬೇಡ್ಕರ್ ವಾಚಿಕೆಗಳು ಪ್ರಕಟಗೊಂಡಿವೆ. ಪ್ರಸ್ತುತ ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿ ಹಾಗೂ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಬಾಸಾಹೇಬ ಅಂಬೇಡ್ಕರ್ ಅವರ ಚಿಂತನೆಗಳನ್ನು ಬದುಕಿನುದ್ದಕ್ಕೂ ಅಳವಡಿಸಿಕೊಂಡ ಶ್ರೀಯುತರು ಜನಸಮುದಾಯದಲ್ಲಿಯೂ ಅಂಬೇಡ್ಕರ್ ಚಿಂತನೆಗಳ ಕುರಿತು ಅರಿವು ಮೂಡಿಸುವ ಕೆಲಸವನ್ನು ಹಗಲಿರುಳೆನ್ನದೆ ತಮ್ಮ ಬರಹ ಭಾಷಣಗಳ ಮುಖಾಂತರ ಮಾಡುತ್ತಿದ್ದಾರೆ. ವಿಜಯಪುರ ಜಿಲ್ಲೆಯಲ್ಲಿ ದಲಿತ ಸಂಘರ್ಷ ಸಮಿತಿ ಅಸ್ತಿತ್ವಕ್ಕೆ ತರುವಲ್ಲಿ ಇವರ ಪಾತ್ರ ಪ್ರಮುಖವಾಗಿದೆ. ರಾಜ್ಯ ಬಂಡಾಯ ಸಾಹಿತ್ಯ ಸಂಘಟನೆಯ ಸಂಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿ ನಡೆದ ಜಿಲ್ಲಾ ಪ್ರಥಮ ದಲಿತ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಸ್ಥಾನದ ಗೌರವಕ್ಕೂ ಪಾತ್ರರಾಗಿದ್ದಾರೆ. ಹೀಗೆ, ಡಾ. ಎಚ್. ಟಿ. ಪೋತೆಯವರು ಸಾಹಿತ್ಯ ಸಂಘಟನೆ ಹಾಗೂ ಹೋರಾಟಗಳಲ್ಲಿ ತಮ್ಮನ್ನು ಕ್ರಿಯಾಶೀಲವಾಗಿ ಗುರುತಿಸಿಕೊಂಡಿದ್ದಾರ
ದಲಿತ ಸಾಹಿತ್ಯ ಕ್ರೇತ್ರಕ್ಕೆ ಒಟ್ಟು ೧೫ಕ್ಕೂ ಹೆಚ್ಚು ಕೃತಿಗಳ ಕೊಡುಗೆಯನ್ನು ಡಾ. ಪೋತೆ ಅವರು ನೀಡಿದ್ದಾರೆ.
೧)ಅಂಬೇಡ್ಕರ್ : ದಲಿತ ಚಳುವಳಿ ೨) ದಲಿತಾಂತರಂಗ
೩)ಅಂಬೇಡ್ಕರ್ ಸಂವೇದನೆ ೪) ದಲಿತ ಸಾಹಿತ್ಯ : ಸಂಸ್ಕೃತಿ ೫)ದಲಿತಲೋಕ ೬)ಸ್ವಾತಂತ್ರ ಪೂರ್ವದ ದಲಿತ ಚಳುವಳಿ ೭) ಅಂಬೇಡ್ಕರ್ ಕಥನ ೮)ಅಂಬೇಡ್ಕರ್ ಭಾರತ ೯) ದಲಿತ ಕಥನ. ೧೦) ದಲಿತ ಚಳುವಳಿ ಕಥನ ೧೧) ಜೀವನ ಕಥನ ೧೨)ಅಂಬೇಡ್ಕರ್ ಪುಸ್ತಕ ಪೀತಿ ೧೩)ಅಂಬೇಡ್ಕರ್ ಫಸಲು ೧೪)ಎಲ್ಲರ ಅಂಬೇಡ್ಕರ್
ಅಭಿನಂದನೆಗಳು: ದಸಾಪ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡಾ. ಎಚ್ ಟಿ ಪೋತೆ ಅವರನ್ನು ಹಿರಿಯ ಸಾಹಿತಿ, ವಿಚಾರವಾದಿ ಡಾ. ವೆಂಕಟಯ್ಯ ಅಪ್ಪಗೆರೆ, ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತ ಸಿ. ಮಂಜುನಾಥ್, ಪತ್ರಕರ್ತ ಹಗರಿಬೊಮ್ಮನಹಳ್ಳಿಯ ಸಿ. ಶಿವಾನಂದ, ಹೊಸಪೇಟೆಯ ಇಂ. ಪ್ರಕಾಶ್ ಟಂಗೂರಿ, ಕರ್ನಾಟಕ ಜಾನಪದ ಪರಿಷತ್ತು ಬಳ್ಳಾರಿ ಜಿಲ್ಲಾ ಖಜಾಂಚಿ ಬಿ. ಸುರೇಶ್ ಕುಮಾರ್ ಮತ್ತಿತರರು ಅಭಿನಂದಿಸಿದ್ದಾರೆ.
*****
The post 10ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಡಾ. ಎಚ್.ಟಿ. ಪೋತೆ ಆಯ್ಕೆ -ದಸಾಪ ರಾಜ್ಯಾಧ್ಯಕ್ಷ ಡಾ.ಅರ್ಜುನ ಗೊಳಸಂಗಿ appeared first on Karnataka Kahale.
]]>