Warning: session_start(): Cannot start session when headers already sent in /home/karnatak/public_html/wp-content/plugins/the-visitor-counter/classes/class.widget.php on line 10

Warning: Cannot modify header information - headers already sent by (output started at /home/karnatak/public_html/wp-content/plugins/free-comments-for-wordpress-vuukle/free-comments-for-wordpress-vuukle.php:1) in /home/karnatak/public_html/wp-includes/feed-rss2.php on line 8
ತಾಜಾ- ಇದೀಗ ಬಂದ ಸುದ್ದಿ – Karnataka Kahale https://www.karnatakakahale.com ಕನ್ನಡಿಗರ ಕೊರಳ ಧ್ವನಿ Mon, 17 Jul 2023 16:43:39 +0000 en-US hourly 1 https://wordpress.org/?v=6.3.8 https://www.karnatakakahale.com/wp-content/uploads/2020/11/cropped-Karnataka-Kahale-1-1-32x32.jpg ತಾಜಾ- ಇದೀಗ ಬಂದ ಸುದ್ದಿ – Karnataka Kahale https://www.karnatakakahale.com 32 32 ಬಳ್ಳಾರಿ ನೂತನ ಜಿಲ್ಲಾಧಿಕಾರಿ ವೆಂಕಟೇಶ್ ಟಿ https://www.karnatakakahale.com/news/12787 Mon, 17 Jul 2023 16:43:39 +0000 https://www.karnatakakahale.com/?p=12787 ಬಳ್ಳಾರಿ, ಜು. 17: ಬಳ್ಳಾರಿ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ  ವೆಂಕಟೇಶ್ ಟಿ ಅವರನ್ನು ರಾಜ್ಯ ಸರಕಾರ ನೇಮಿಸಿ ಆದೇಶಿಸಿದೆ.                          ಈವರೆಗೆ ಜಿಲ್ಲಾಧಿಕಾರಿಯಾಗಿದ್ದ ಪವನಕುಮಾರ ಮಾಲಪಾಟಿ…

The post ಬಳ್ಳಾರಿ ನೂತನ ಜಿಲ್ಲಾಧಿಕಾರಿ ವೆಂಕಟೇಶ್ ಟಿ appeared first on Karnataka Kahale.

]]>

ಬಳ್ಳಾರಿ, ಜು. 17: ಬಳ್ಳಾರಿ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ  ವೆಂಕಟೇಶ್ ಟಿ ಅವರನ್ನು ರಾಜ್ಯ ಸರಕಾರ ನೇಮಿಸಿ ಆದೇಶಿಸಿದೆ.                          ಈವರೆಗೆ ಜಿಲ್ಲಾಧಿಕಾರಿಯಾಗಿದ್ದ ಪವನಕುಮಾರ ಮಾಲಪಾಟಿ ಅವರು ವರ್ಗಾವಣೆಯಾಗಿದ್ದಾರೆ.                   ವೆಂಕಟೇಶ್ ಅವರು ಈ ಹಿಂದೆ ಬಳ್ಳಾರಿಯಲ್ಲಿ ಎಡಿಸಿಯಾಗಿ ಸೇವೆ ಸಲ್ಲಿಸಿದ್ದಾರೆ ಮಾತ್ರವಲ್ಲ ಪ್ರಸ್ತುತ  ವಿಜಯನಗರ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.

 

The post ಬಳ್ಳಾರಿ ನೂತನ ಜಿಲ್ಲಾಧಿಕಾರಿ ವೆಂಕಟೇಶ್ ಟಿ appeared first on Karnataka Kahale.

]]>
ಚಳ್ಳಕೆರೆ ಬಳಿ ಅಪಘಾತ: ನಾಡೋಜ ಬೆಳಗಲ್ಲು ವೀರಣ್ಣ ಗಂಭೀರ ಗಾಯ https://www.karnatakakahale.com/news/11726 Sun, 02 Apr 2023 04:34:30 +0000 https://www.karnatakakahale.com/?p=11726 ಬಳ್ಳಾರಿ, ಏ.2: ಅಂತಾರಾಷ್ಟ್ರೀಯ ತೊಗಲುಗೊಂಬೆ ಕಲಾವಿದ ನಾಡೋಜ ಬೆಳಗಲ್ಲು ವೀರಣ್ಣ ಅವರು ಪ್ರಯಾಣಿಸುತ್ತಿದ್ದ ಕಾರು ಇಂದು ಬೆಳಿಗ್ಗೆ ಚಳ್ಳಕೆರೆ ಬಳಿ ಅಪಘಾತ ಹೊಂದಿದ್ದು, ವೀರಣ್ಣ ಅವರು ತೀವ್ರವಾಗಿ ಗಾಯಗೊಂಡಿದ್ದಾರೆ. ವೀರಣ್ಣ ಅವರ ಪುತ್ರ, ಸಂಗೀತ ಶಿಕ್ಷಕ ಹನುಮಂತ ಅವರೇ ಕಾರು ಚಾಲನೆ…

The post ಚಳ್ಳಕೆರೆ ಬಳಿ ಅಪಘಾತ: ನಾಡೋಜ ಬೆಳಗಲ್ಲು ವೀರಣ್ಣ ಗಂಭೀರ ಗಾಯ appeared first on Karnataka Kahale.

]]>

ಬಳ್ಳಾರಿ, ಏ.2: ಅಂತಾರಾಷ್ಟ್ರೀಯ ತೊಗಲುಗೊಂಬೆ ಕಲಾವಿದ ನಾಡೋಜ ಬೆಳಗಲ್ಲು ವೀರಣ್ಣ ಅವರು ಪ್ರಯಾಣಿಸುತ್ತಿದ್ದ ಕಾರು ಇಂದು ಬೆಳಿಗ್ಗೆ ಚಳ್ಳಕೆರೆ ಬಳಿ ಅಪಘಾತ ಹೊಂದಿದ್ದು, ವೀರಣ್ಣ ಅವರು ತೀವ್ರವಾಗಿ ಗಾಯಗೊಂಡಿದ್ದಾರೆ.
ವೀರಣ್ಣ ಅವರ ಪುತ್ರ, ಸಂಗೀತ ಶಿಕ್ಷಕ ಹನುಮಂತ ಅವರೇ ಕಾರು ಚಾಲನೆ ಮಾಡುತ್ತಿದ್ದು ಇವರಿಗೂ ಗಂಭೀರ ಗಾಯವಾಗಿದೆ.
ನಸುಕಿನ ಜಾವ ಬಳ್ಳಾರಿಯಿಂದ ಚಿಕ್ಕಮಗಳೂರಿಗೆ ಹೋಗುತ್ತಿದ್ದರು ಎಂದು ವೀರಣ್ಣ ಅವರ ಹಿರಿಯ ಪುತ್ರ ಮಹೇಶ ಬೆಳಗಲ್ಲು ಕರ್ನಾಟಕ ಕಹಳೆ ಡಾಟ್ ಕಾಮ್ ಗೆ ತಿಳಿಸಿದ್ದಾರೆ.

*****

The post ಚಳ್ಳಕೆರೆ ಬಳಿ ಅಪಘಾತ: ನಾಡೋಜ ಬೆಳಗಲ್ಲು ವೀರಣ್ಣ ಗಂಭೀರ ಗಾಯ appeared first on Karnataka Kahale.

]]>
371ಜೆ ಕಾಲಂ ಜಾರಿಗೊಳಿಸಿದ ಸೋನಿಯಾಗಾಂಧಿ, ರಾಹುಲ್ ಗಾಂಧಿ ಅವರಿಗೆ ಕಲ್ಯಾಣ ಕರ್ನಾಟಕದ ಜನತೆ ಯಾವತ್ತೂ ಕೃತಜ್ಞರಾಗಿರಬೇಕು -ಹಿರಿಯ ನಾಯಕ ಡಾ.ಮಲ್ಲಿಕಾರ್ಜುನ ಖರ್ಗೆ https://www.karnatakakahale.com/news/9898 Sat, 15 Oct 2022 18:05:17 +0000 https://www.karnatakakahale.com/?p=9898 ಬಳ್ಳಾರಿ, ಅ.15: ಹಿಂದುಳಿದ ಕಲ್ಯಾಣ ಕರ್ನಾಟಕದ ಜಿಲ್ಲೆಗಳ ಅಭಿವೃದ್ಧಿಗಾಗಿ 371 ಜೆ ವಿಶೇಷ ಕಾಲಂ‌ ಜಾರಿಗೊಳಿಸಿದ ರಾಹುಲ್ ಗಾಂಧಿ‌ ಮತ್ತು ಸೋನಿಯಾ ಗಾಂಧಿ ಅವರನ್ನು ಯಾವತ್ತೂ ಈ ಭಾಗದ ಜನತೆ ಮರೆಯಬಾರದು ಎಂದು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಡಾ.ಮಲ್ಲಿಕಾರ್ಜುನ ಖರ್ಗೆ…

The post 371ಜೆ ಕಾಲಂ ಜಾರಿಗೊಳಿಸಿದ ಸೋನಿಯಾಗಾಂಧಿ, ರಾಹುಲ್ ಗಾಂಧಿ ಅವರಿಗೆ ಕಲ್ಯಾಣ ಕರ್ನಾಟಕದ ಜನತೆ ಯಾವತ್ತೂ ಕೃತಜ್ಞರಾಗಿರಬೇಕು -ಹಿರಿಯ ನಾಯಕ ಡಾ.ಮಲ್ಲಿಕಾರ್ಜುನ ಖರ್ಗೆ appeared first on Karnataka Kahale.

]]>

ಬಳ್ಳಾರಿ, ಅ.15: ಹಿಂದುಳಿದ ಕಲ್ಯಾಣ ಕರ್ನಾಟಕದ ಜಿಲ್ಲೆಗಳ ಅಭಿವೃದ್ಧಿಗಾಗಿ 371 ಜೆ ವಿಶೇಷ ಕಾಲಂ‌ ಜಾರಿಗೊಳಿಸಿದ ರಾಹುಲ್ ಗಾಂಧಿ‌ ಮತ್ತು ಸೋನಿಯಾ ಗಾಂಧಿ ಅವರನ್ನು ಯಾವತ್ತೂ ಈ ಭಾಗದ ಜನತೆ ಮರೆಯಬಾರದು
ಎಂದು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಡಾ.ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದರು.
ನಗರದಲ್ಲಿ ಶನಿವಾರ ಜರುಗಿದ ಭಾರತ್ ಜೋಡೋ ಯಾತ್ರೆ ಯ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಬಳ್ಳಾರಿ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿ ಗಾಗಿ 371 ಜೆ ಕಾಲಂ ನ್ನು ಯುಪಿಎ ಸರಕಾರ ಜಾರಿ‌ಮಾಡಿ ಅನುಷ್ಠಾನ ಗೊಳಿಸಿತು. ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರ ವಿಶೇಷ ಆಸಕ್ತಿ, ಒತ್ತಾಸೆಯಿಂದ ಏಳು ಜಿಲ್ಲೆಗಳಿಗೆ ಒಳಿತಾಯಿತು ಎಂದರು.
ದೇಶದಲ್ಲಿ ಆರ್ ಎಸ್ ಎಸ್-ಬಿಜೆಪಿ ಅಶಾಂತಿ ಉಂಟುಮಾಡುತ್ತಿವೆ, ಜನರಲ್ಲಿ‌ವಿಷ ಬೀಜ ಬಿತ್ತುತ್ತಿವೆ ಎಂದು ಆಪಾದಿಸಿದರು.
ಭಾರತ್ ಜೋಡೋ ಯಾತ್ರೆ ನೇತೃತ್ವವಹಿಸಿರುವ ರಾಹುಲ್ ಗಾಂಧಿ ಅವರ ಹೋರಾಟಕ್ಕೆ ಎಲ್ಲರ ಬೆಂಬಲವಿದೆ. ಮೂರು ರಾಜ್ಯಗಳ ಮೂಲಕ ಒಂದು ಸಾವಿರ ಕಿ.‌ಮೀ ಕ್ರಮಿಸಿರುವ ರಾಹುಲ್ ಗಾಂದಿ ಅವರು ಇನ್ನೂ 2700 ಕಿ.ಮೀ ದೂರದ ಗುರಿಯನ್ನು ಯಶಸ್ವಿಯಾಗಿ ಮುಟ್ಟುತ್ತಾರೆ ಎಂದು ಹೇಳಿದರು.
ಎಲ್ಲರೂ ಒಗ್ಗಟ್ಟಿನಿಂದ ಕಮೀಷನ್ ಬಿಜೆಪಿ ಸರ್ಕಾರವನ್ನು ಬದಲಾಯಿಸ ಬೇಕು ಎಂದರು.


ವಿಧಾನ ಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮಾತನಾಡಿ, ಸಂವಿಧಾನ ಅಪಾಯದಲ್ಲಿದೆ. ಆರ್ ಎಸ್ ಎಸ್ ಮೊದಲಿನಿಂದಲೂ ಸಂವಿಧಾನ, ರಾಷ್ಟ್ರಗೀತೆಯನ್ನು ವಿರೋಧ ಮಾಡ್ತಾ ಇದೆ. ನರೇಂದ್ರ ಮೋದಿ ಅವರು ಪ್ರಧಾನಿಯಾಗಿರುವುದು, ತಾವು ಸಿಎಂ ಆಗಿದ್ದು ಸಂವಿಧಾನದಿಂದ ಎಂಬುದನ್ನು ಮರೆಯ ಬಾರದು ಎಂದು ಹೇಳಿದರು.
ಸಂವಿಧಾನ ಉಳಿಸಲು ರಾಹುಲ್ ಗಾಂಧಿ ಅವರು ಭಾರತ್ ಜೋಡೋ ಯಾತ್ರೆ ಕೈಗೊಂಡಿದ್ದಾರೆ ಎಂದರು.
ಟ್ವೀಟ್ ಮೂಲಕ ಜಿಲ್ಲೆಗೆ ಕಾಂಗ್ರೆಸ್ ಪಕ್ಷದ ಕೊಡುಗೆ ಏನು ಎಂದು ಕೆಣಕ್ಕಿದ್ದ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡ ಸಿದ್ಧ ರಾಮಯ್ಯ ಅವರು ಜಿಲ್ಲೆಯಲ್ಲಿ 1977ರಲ್ಲಿ ವಿಜಯ ಉಕ್ಕು ಕಾರ್ಖಾನೆ ಸ್ಥಾಪಿಸಿದ್ದು, 2000-01 ರಲ್ಲಿ ಬಳ್ಳಾರಿಯ ಕುಡುತಿನಿ‌ ಥರ್ಮಲ್ ಪವರ್ ಕೇಂದ್ರವನ್ನು ಆರಂಭಿಸಿದ್ದು ‘ಯಾರಪ್ಪ ಶ್ರೀ ರಾಮುಲು’ ಎಂದು ವಾಗ್ದಾಳಿ ‌ನಡೆಸಿದರು.
ಪೆದ್ದ ಶ್ರೀರಾಮುಲು: ನಮಗೆ ಚರ್ಚೆಗೆ ಆಹ್ವಾನ ಕೊಡ್ತಿಯಾ? ನಿನ್ನಂಥ ಪೆದ್ದನ ಜತೆ ಚರ್ಚೆ ಮಾಡುವುದಿಲ್ಲ. ಬೇಕಾದರೆ ಮಾಜಿ ಸಂಸದ ಉಗ್ರಪ್ಪ ಅವರನ್ನು ಕಳುಹಿಸುತ್ತೇವೆ ಎಂದ ಅವರು ನಿಮ್ಮ ಸಾಧನೆ ಬರೀ ಲೂಟಿ‌ಮಾಡಿದ್ದು ಎಂದು‌ ಟೀಕಿಸಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮಾತನಾಡಿ, ಭಾರತ್ ಜೋಡೋ ಕೇವಲ ಪಾದಯಾತ್ರೆ ಅಲ್ಲ, ಇದೊಂದು ಆಂದೋಲನ, ಕ್ರಾಂತಿ ಎಂದು ಬಣ್ಣಿಸಿದರು.

ಬಹಳ‌ಕಷ್ಟ ಕಾಲದಲ್ಲಿ ಕೆಪಿಸಿಸಿ ಅಧ್ಯಕ್ಷನಾದೆ. ಫ್ರೀಡಂ ಮಾರ್ಚ್, ಮೇಕೆದಾಟು ಪಾದಯಾತ್ರೆ ಮಾಡಿದೆ.
ರಾಜ್ಯದಲ್ಲಿ ಒಳ್ಳೆಯ ಆಡಳಿತ ನೀಡಬೇಕಿದೆ. ಈ ಹಿನ್ನಲೆಯಲ್ಲಿ ನಮ್ಮ ಹೋರಾಟ ನಡೆದಿದೆ ಎಂದರು.
ಸಮಾವೇಶದಲ್ಲಿ ರಾಜಸ್ತಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಛತ್ತೀಷ್ ಗಡ್ ಮುಖ್ಯ ಮಂತ್ರಿ ಭೂಪೇಶ್ ಭಾಗೇಲ್, ಹಿರಿಯ ನಾಯಕರಾದ ಸುರ್ಜಿವಾಲ, ಕಮಲನಾಥ್, ದ್ವಿಗ್ವಿಜಯ ಸಿಂಗ್, ಡಾ.ಜಿ.ಪರಮೇಶ್ವರ, ಹೆಚ್. ಆಂಜನೇಯಲು, ಡಾ ಹೆಚ್.ಸಿ.ಮಹಾದೇವಪ್ಪ ಎಂ.ಬಿ.ಪಾಟೀಲ್, ಎಲ್.ಹನಂಮತಯ್ಯ, ಬಿ.ಕೆ.ಹರಿಪ್ರಸಾದ್, ಮಾಜಿ ಸಚಿವರುಗಳಾದ ಎಂ.ದಿವಾಕರಬಾಬು, ಸಂತೋಷ್ ಲಾಡ್ , ಮೇಯರ್ ಎಂ.ರಾಜೇಶ್ವರಿ, ಜಿಲ್ಲೆಯ ಶಾಸಕರು ಸೇರಿದಂತೆ ಕಾರ್ಯಕ್ರಮದಲ್ಲಿ ಕೆಪಿಸಿಸಿ, ಡಿಸಿಸಿ ಪದಾಧಿಕಾರಿಗಳು, ಗಣ್ಯರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ನಗರ ದೇವತೆ ಶ್ರೀ ಕನಕ‌ದುರ್ಗಮ್ಮಗೆ ಬೆಳ್ಳಿ ಖಡ್ಗವನ್ನು ರಾಹುಲ್ ಗಾಂಧಿ ಅವರು ನೀಡಿದರು. ಸಮಾವೇಶದಲ್ಲಿ ಈ ಖಡ್ಗವನ್ನು ಡಿಕೆ ಶಿವಕುಮಾರ್ ಮತ್ತು ಸಿದ್ಧರಾಮಯ್ಯ ಅವರೊಂದಿಗೆ ಪ್ರದರ್ಶಿಸಿದರು.
*****

The post 371ಜೆ ಕಾಲಂ ಜಾರಿಗೊಳಿಸಿದ ಸೋನಿಯಾಗಾಂಧಿ, ರಾಹುಲ್ ಗಾಂಧಿ ಅವರಿಗೆ ಕಲ್ಯಾಣ ಕರ್ನಾಟಕದ ಜನತೆ ಯಾವತ್ತೂ ಕೃತಜ್ಞರಾಗಿರಬೇಕು -ಹಿರಿಯ ನಾಯಕ ಡಾ.ಮಲ್ಲಿಕಾರ್ಜುನ ಖರ್ಗೆ appeared first on Karnataka Kahale.

]]>
ಬೆಂಗಳೂರಿಗೆ ಆಗಮಿಸಿದ ರಾಷ್ಟ್ರಪತಿಗಳು: ಮುಖ್ಯಮಂತ್ರಿ, ರಾಜ್ಯಪಾಲರಿಂದ ಆತ್ಮೀಯ ಸ್ವಾಗತ https://www.karnatakakahale.com/news/8640 Mon, 13 Jun 2022 07:48:38 +0000 https://www.karnatakakahale.com/?p=8640 ಬೆಂಗಳೂರು, ಜೂ.13: ಎರಡು ದಿನಗಳ ರಾಜ್ಯ ಪ್ರವಾಸಕ್ಕೆ ಇಂದು ಬೆಂಗಳೂರಿಗೆ ಆಗಮಿಸಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆತ್ಮೀಯವಾಗಿ ಬರ ಮಾಡಿಕೊಂಡರು. *****

The post ಬೆಂಗಳೂರಿಗೆ ಆಗಮಿಸಿದ ರಾಷ್ಟ್ರಪತಿಗಳು: ಮುಖ್ಯಮಂತ್ರಿ, ರಾಜ್ಯಪಾಲರಿಂದ ಆತ್ಮೀಯ ಸ್ವಾಗತ appeared first on Karnataka Kahale.

]]>

ಬೆಂಗಳೂರು, ಜೂ.13: ಎರಡು ದಿನಗಳ ರಾಜ್ಯ ಪ್ರವಾಸಕ್ಕೆ ಇಂದು ಬೆಂಗಳೂರಿಗೆ ಆಗಮಿಸಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆತ್ಮೀಯವಾಗಿ ಬರ ಮಾಡಿಕೊಂಡರು.
*****

The post ಬೆಂಗಳೂರಿಗೆ ಆಗಮಿಸಿದ ರಾಷ್ಟ್ರಪತಿಗಳು: ಮುಖ್ಯಮಂತ್ರಿ, ರಾಜ್ಯಪಾಲರಿಂದ ಆತ್ಮೀಯ ಸ್ವಾಗತ appeared first on Karnataka Kahale.

]]>
ಮುಖ್ಯಮಂತ್ರಿ ಅಧ್ಯಕ್ಷತೆ: ಬೆಂಗಳೂರು ನಗರದ ಸಮಗ್ರ ಅಭಿವೃದ್ಧಿಗಾಗಿ ಸಭೆ https://www.karnatakakahale.com/news/7132 Sun, 02 Jan 2022 06:03:01 +0000 https://www.karnatakakahale.com/?p=7132 ಬೆಂಗಳೂರು, ಜ.2: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಬೆಂಗಳೂರು ನಗರದ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದಂತೆ ಬೆಂಗಳೂರಿನ ಶಾಸಕರು, ಸಚಿವರ ಸಭೆ ಭಾನುವಾರ ನಗರದ ಮುಖ್ಯಮಂತ್ರಿಗಳ ಗೃಹಕಚೇರಿ ಕೃಷ್ಣಾದಲ್ಲಿ ನಡೆಯಿತು. ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜ(ಬೈರತಿ) ಸೇರಿದಂತೆ ಸಚಿವರಾದ ಅರ್. ಆಶೋಕ, ವಿ…

The post ಮುಖ್ಯಮಂತ್ರಿ ಅಧ್ಯಕ್ಷತೆ: ಬೆಂಗಳೂರು ನಗರದ ಸಮಗ್ರ ಅಭಿವೃದ್ಧಿಗಾಗಿ ಸಭೆ appeared first on Karnataka Kahale.

]]>
ಬೆಂಗಳೂರು, ಜ.2: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಬೆಂಗಳೂರು ನಗರದ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದಂತೆ ಬೆಂಗಳೂರಿನ ಶಾಸಕರು, ಸಚಿವರ ಸಭೆ ಭಾನುವಾರ ನಗರದ ಮುಖ್ಯಮಂತ್ರಿಗಳ ಗೃಹಕಚೇರಿ ಕೃಷ್ಣಾದಲ್ಲಿ ನಡೆಯಿತು.
ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜ(ಬೈರತಿ) ಸೇರಿದಂತೆ ಸಚಿವರಾದ ಅರ್. ಆಶೋಕ, ವಿ ಸೋಮಣ್ಣ, ಎಸ್.ಟಿ. ಸೋಮಶೇಖರ್, ಡಾ ಸಿ.ಎನ್.ಅಶ್ವಥ್ ನಾರಾಯಣ, ಕೆ.ಗೋಪಾಲಯ್ಯ, ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್, ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್, ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ, ಆಡಳಿತಾಧಿಕಾರಿ ರಾಕೇಶ್ ಸಿಂಗ್, ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತೆ ವಂದಿತಾ ಶರ್ಮಾ, ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಐ.ಎಸ್.ಎನ್.ಪ್ರಸಾದ್ ಸಭೆಯಲ್ಲಿ ಉಪಸ್ಥಿತರಿದ್ದರು.
*****

The post ಮುಖ್ಯಮಂತ್ರಿ ಅಧ್ಯಕ್ಷತೆ: ಬೆಂಗಳೂರು ನಗರದ ಸಮಗ್ರ ಅಭಿವೃದ್ಧಿಗಾಗಿ ಸಭೆ appeared first on Karnataka Kahale.

]]>
ಸಚಿವ ಸಂಪುಟ ಸಭೆಗೆ ಸಚಿವರೊಂದಿಗೆ ಆಗಮಿಸಿದ ಸಿಎಂ ಬೊಮ್ಮಾಯಿ https://www.karnatakakahale.com/news/5990 Mon, 20 Sep 2021 04:58:55 +0000 https://www.karnatakakahale.com/?p=5990 ಬೆಂಗಳೂರು, ಸೆ.20: ಸೋಮವಾರ ಮುಂಜಾನೆ ಪ್ರಾರಂಭವಾದ ಸಚಿವ ಸಂಪುಟದ ಸಭೆಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ, ಸಚಿವ ಶಿವರಾಮ ಹೆಬ್ಬಾರ್ ಮತ್ತು ಮುನೇನಕೊಪ್ಪ ಅವರೊಂದಿಗೆ ಆಗಮಿಸಿದರು.

The post ಸಚಿವ ಸಂಪುಟ ಸಭೆಗೆ ಸಚಿವರೊಂದಿಗೆ ಆಗಮಿಸಿದ ಸಿಎಂ ಬೊಮ್ಮಾಯಿ appeared first on Karnataka Kahale.

]]>
ಬೆಂಗಳೂರು, ಸೆ.20: ಸೋಮವಾರ ಮುಂಜಾನೆ ಪ್ರಾರಂಭವಾದ ಸಚಿವ ಸಂಪುಟದ ಸಭೆಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ, ಸಚಿವ ಶಿವರಾಮ ಹೆಬ್ಬಾರ್ ಮತ್ತು ಮುನೇನಕೊಪ್ಪ ಅವರೊಂದಿಗೆ ಆಗಮಿಸಿದರು.

The post ಸಚಿವ ಸಂಪುಟ ಸಭೆಗೆ ಸಚಿವರೊಂದಿಗೆ ಆಗಮಿಸಿದ ಸಿಎಂ ಬೊಮ್ಮಾಯಿ appeared first on Karnataka Kahale.

]]>
ರಾಜ್ಯದಲ್ಲಿ ಇಂದಿನಿಂದ ಒಂಬತ್ತು ದಿನ ರಾತ್ರಿ ಕರ್ಫ್ಯೂ ಜಾರಿ -ಸಿಎಂ ಬಿ ಎಸ್ ವೈ https://www.karnatakakahale.com/news/2156 Wed, 23 Dec 2020 08:55:32 +0000 https://www.karnatakakahale.com/?p=2156 ಬೆಂಗಳೂರು: ರೂಪಾಂತರಗೊಂಡಿರುವ ಕೊರೋನಾ ಹಿನ್ನಲೆಯಲ್ಲಿ ಬುದವಾರದಿಂದ ಜ. 2ರವೆರೆಗೆ ಒಂಬತ್ತು ದಿನ ರಾಜ್ಯದಲ್ಲಿ ರಾತ್ರಿ ಕರ್ಪ್ಯೂ ಜಾರಿ ಮಾಡಲಾಗುವುದು ಎಂದು ಮುಖ್ಯ‌ಂತ್ರಿ ಬಿ ಎಸ್ ಯಡಿಯೂರಪ್ಪ ಅವರು ತಿಳಿಸಿದರು. ಇಂದು(ಡಿ. 23) ನಗರದ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಕೋವಿಡ್ ಸಾಂಕ್ರಾಮಿಕವನ್ನು‌ ಪರಿಣಾಮಕಾರಿಯಾಗಿ…

The post ರಾಜ್ಯದಲ್ಲಿ ಇಂದಿನಿಂದ ಒಂಬತ್ತು ದಿನ ರಾತ್ರಿ ಕರ್ಫ್ಯೂ ಜಾರಿ -ಸಿಎಂ ಬಿ ಎಸ್ ವೈ appeared first on Karnataka Kahale.

]]>
ಬೆಂಗಳೂರು: ರೂಪಾಂತರಗೊಂಡಿರುವ ಕೊರೋನಾ ಹಿನ್ನಲೆಯಲ್ಲಿ ಬುದವಾರದಿಂದ ಜ. 2ರವೆರೆಗೆ ಒಂಬತ್ತು ದಿನ ರಾಜ್ಯದಲ್ಲಿ ರಾತ್ರಿ ಕರ್ಪ್ಯೂ ಜಾರಿ ಮಾಡಲಾಗುವುದು ಎಂದು ಮುಖ್ಯ‌ಂತ್ರಿ ಬಿ ಎಸ್ ಯಡಿಯೂರಪ್ಪ ಅವರು ತಿಳಿಸಿದರು.
ಇಂದು(ಡಿ. 23) ನಗರದ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಕೋವಿಡ್ ಸಾಂಕ್ರಾಮಿಕವನ್ನು‌ ಪರಿಣಾಮಕಾರಿಯಾಗಿ ತಡೆಗಟ್ಟುವ‌ ಸಂಬಂಧ ಸಚಿವರು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.

The post ರಾಜ್ಯದಲ್ಲಿ ಇಂದಿನಿಂದ ಒಂಬತ್ತು ದಿನ ರಾತ್ರಿ ಕರ್ಫ್ಯೂ ಜಾರಿ -ಸಿಎಂ ಬಿ ಎಸ್ ವೈ appeared first on Karnataka Kahale.

]]>
ಚಿಹ್ನೆ ಮುದ್ರಣ ದೋಷ: ಬಳ್ಳಾರಿ ತಾಲೂಕಿನ ತೊಲಮಾಮಡಿ ಮತಗಟ್ಟೆ ಸ್ಥಗಿತ, ಜಿಲ್ಲಾಧಿಕಾರಿ ನಕುಲ್, ಎಸ್.ಪಿ ಅಡಾವತ್ ಭೇಟಿ https://www.karnatakakahale.com/news/2110 Tue, 22 Dec 2020 06:01:08 +0000 https://www.karnatakakahale.com/?p=2110 ಬಳ್ಳಾರಿ: ಚಿಹ್ನೆ ಮುದ್ರಣ ದೋಷದಿಂದಾಗಿ ಶಂಕರಬಂಡೆ ಗ್ರಾಪಂ ವ್ಯಾಪ್ತಿಯ ತೊಲಮಾಮಡಿ ಮತಗಟ್ಟೆಯಲ್ಲಿ ಮತದಾನ ಸ್ಥಗಿತವಾಗಿದೆ. ಸುದ್ದಿ ತಿಳಿಯುತ್ತಲೇ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ಚುನಾವಣಾಧಿಕಾರಿ ಎಸ್‌.ಎಸ್.ನಕುಲ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದಲು ಅಡಾವತ್,ಸಹಾಯಕ ಆಯುಕ್ತ ರಮೇಶ ಕೋನರೆಡ್ಡಿ,ತಹಶಿಲ್ದಾರ್ ರೆಹಮಾನ್ ಪಾಶಾ…

The post ಚಿಹ್ನೆ ಮುದ್ರಣ ದೋಷ: ಬಳ್ಳಾರಿ ತಾಲೂಕಿನ ತೊಲಮಾಮಡಿ ಮತಗಟ್ಟೆ ಸ್ಥಗಿತ, ಜಿಲ್ಲಾಧಿಕಾರಿ ನಕುಲ್, ಎಸ್.ಪಿ ಅಡಾವತ್ ಭೇಟಿ appeared first on Karnataka Kahale.

]]>
ಬಳ್ಳಾರಿ: ಚಿಹ್ನೆ ಮುದ್ರಣ ದೋಷದಿಂದಾಗಿ ಶಂಕರಬಂಡೆ ಗ್ರಾಪಂ ವ್ಯಾಪ್ತಿಯ ತೊಲಮಾಮಡಿ ಮತಗಟ್ಟೆಯಲ್ಲಿ ಮತದಾನ ಸ್ಥಗಿತವಾಗಿದೆ.
ಸುದ್ದಿ ತಿಳಿಯುತ್ತಲೇ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ಚುನಾವಣಾಧಿಕಾರಿ ಎಸ್‌.ಎಸ್.ನಕುಲ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದಲು ಅಡಾವತ್,ಸಹಾಯಕ ಆಯುಕ್ತ ರಮೇಶ ಕೋನರೆಡ್ಡಿ,ತಹಶಿಲ್ದಾರ್ ರೆಹಮಾನ್ ಪಾಶಾ ಅವರು ಪರಿಶೀಲನೆ ನಡೆಸಿದರು.
ಮುದ್ರಣದೋಷದಿಂದಾಗಿ ತೊಲಮಾಮಡಿ ಮತಗಟ್ಟೆಯ ಅಭ್ಯರ್ಥಿ ಪದ್ಮಾವತಿ ಅವರ ಚಿಹ್ನೆ ಮಡಿಕೆಯ ಬದಲಿಗೆ ಸಿಲಿಂಡರ್ ಚಿಹ್ನೆ ಬಂದಿದ್ದು, ಈ ಹಿನ್ನೆಲೆಯಲ್ಲಿ ಸ್ಥಗಿತಗೊಳಿಸಲಾಗಿದ್ದು, ಈ ಕುರಿತು
ಚುನಾವಣಾ ಆಯೋಗಕ್ಕೆ ವರದಿ ಸಲ್ಲಿಸಲಾಗಿದೆ. ಈ ಗ್ರಾಪಂ ವ್ಯಾಪ್ತಿಯ ರಿಟರ್ನಿಂಗ್ ಅಧಿಕಾರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ. ಎರಡನೇ ಹಂತದ ಚುನಾವಣೆಯ ದಿನ ಅಥವಾ ಇನ್ನೊಂದು ದಿನ ಈ ಮತಗಟ್ಟೆಯಲ್ಲಿ ಮತದಾನ ನಡೆಸಲಾಗುವುದು ಎಂದು ಜಿಲ್ಲೆಯ ಎಸ್.ಎಸ್.ನಕುಲ್ ತಿಳಿಸಿದ್ದಾರೆ.

The post ಚಿಹ್ನೆ ಮುದ್ರಣ ದೋಷ: ಬಳ್ಳಾರಿ ತಾಲೂಕಿನ ತೊಲಮಾಮಡಿ ಮತಗಟ್ಟೆ ಸ್ಥಗಿತ, ಜಿಲ್ಲಾಧಿಕಾರಿ ನಕುಲ್, ಎಸ್.ಪಿ ಅಡಾವತ್ ಭೇಟಿ appeared first on Karnataka Kahale.

]]>