The post ಬಳ್ಳಾರಿ: ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ ಶಾಸಕ ನಾರಾ ಭರತ್ ರೆಡ್ಡಿ appeared first on Karnataka Kahale.
]]>
ಬಳ್ಳಾರಿ, ಫೆ.9: ನಗರ ಶಾಸಕ ನಾರಾ ಭರತ್ ರೆಡ್ಡಿಯವರು ವಾರ್ಡ್ ಸಂಖ್ಯೆ 21ರ ಬಸವೇಶ್ವರ ನಗರದ ಸಂಗಮೇಶ್ವರ ದೇವಸ್ಥಾನದ ಅಭಿವೃದ್ಧಿ ಹಾಗೂ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಸೋಮವಾರ ಅಂದಾಜು 95 ಲಕ್ಷ ರೂ.ಗಳ ಅನುದಾನದಡಿ ಭೂಮಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ವೀರಶೈವ ಲಿಂಗಾಯತ ಮಹಾಸಭಾದ ನಿಕಟಪೂರ್ವ ಅಧ್ಯಕ್ಷ ಚಾನಾಳ್ ಶೇಖರ್, ವಿ. ವಿ. ಸಂಘದ ಜಂಟಿ ಕಾರ್ಯದರ್ಶಿಗಳು ಯಾಲ್ಪಿ ಪಂಪನಗೌಡ್ರು, ಕೆರನಹಳ್ಳಿ ಚಂದ್ರಶೇಖರ್, ಸಂಗಮೇಶ್ವರ ದೇವಸ್ಥಾನದ ಕಮಿಟಿ ಅಧ್ಯಕ್ಷರು ಮತ್ತು ಸದಸ್ಯರು, ಚಿದಾನಂದಪ್ಪ, ಕಟ್ಟೆಗೌಡ, ಚಂದ್ರಮೌಳಿ, ಮಹೇಶ್, ಜಯದೇವಗೌಡ, ಸುರೇಶ್ ಸ್ವಾಮಿ, ವಾಸು ರೆಡ್ಡಿ, ಗುರುಸಿದ್ಧ, ಸುರೇಖಾ, ಮಲ್ಲನಗೌಡ, ಮಾಜಿ ಮೇಯರ್ ರಾಜೇಶ್ವರಿ, ಪಾಲಿಕೆಯ ಸದಸ್ಯರಾದ ಮಿಂಚು ಸೀನ, ಕುಬೇರಾ, ಕಾಂಗ್ರೆಸ್ ಮುಖಂಡರಾದ ಮಹಮ್ಮದ್ ಭಾಯ್, ಮಂಜು ಬಳಗಾರ್, ಪೋಲಕ್ ಹನುಮಂತ ರೆಡ್ಡಿ, ಲೋಕೇಶ್, ಶಾಮ ಮತ್ತಿತರರು ಇದ್ದರು.

ಅದೇ ರೀತಿ ವಾರ್ಡ್ ಸಂಖ್ಯೆ 8ರ ವ್ಯಾಪ್ತಿಯಲ್ಲಿ 34.52 ಕೋಟಿ ರೂ.ಗಳ ವೆಚ್ಚದಲ್ಲಿ ಕಲ್ಯಾಣದುರ್ಗ ಸಿಸಿ ರಸ್ತೆಯ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು. ಈ ಸಂದರ್ಭ ವಾರ್ಡಿನ ಸದಸ್ಯ ರಾಮಾಂಜನೇಯ, ಮಾಜಿ ಮೇಯರುಗಳಾದ ಎಂ.ರಾಜೇಶ್ವರಿ, ಮುಲ್ಲಂಗಿ ನಂದೀಶ್, ಪಾಲಿಕೆಯ ಸದಸ್ಯರಾದ ಮಿಂಚು ಸೀನಾ, ನೂರ್ ಮೊಹಮ್ಮದ್, ಎಂ.ಪ್ರಭಂಜನಕುಮಾರ್, ನಾಜು, ಆಸಿಫ್, ರಾಜಶೇಖರ್, ಜಬ್ಬಾರ್, ಕಾಂಗ್ರೆಸ್ ಮುಖಂಡರಾದ ಕಲ್ಲುಕಂಭ ಪಂಪಾಪತಿ, ಎಲ್.ಮಾರೆಣ್ಣ, ಅಯಾಜ್ ಅಹ್ಮದ್, ಮೊಹಮ್ಮದ್ ಭಾಯ್, ಪಿ.ಜಗನ್ನಾಥ್, ಬಿಆರಲ್ ಸೀನಾ, ಮುಂಡ್ಲೂರು ವಿಜಯ್, ವೆಂಕಟೇಶ ಹೆಗಡೆ, ಹೊನ್ನಪ್ಪ, ಶಿವರಾಜ್, ಹಗರಿ ಗೋವಿಂದ, ವೀರೇಂದ್ರ, ಸೋಮು, ಶಿವರಾಜ್, ವಿಷ್ಣು ಬೋಯಾಪಾಟಿ, ಪದ್ಮಾ, ಬಿ.ಎಂ.ಪಾಟೀಲ್, ಸಮೀರ್, ಅರ್ಷದ್ ಸೇರಿದಂತೆ ಹಲವರು ಇದ್ದರು.

ವಾರ್ಡ್ ಸಂಖ್ಯೆ 23ರ ಮಹಾನಂದಿಕೊಟ್ಟಂನಲ್ಲಿ 50 ಲಕ್ಷ ರೂ.ಗಳ ಅನುದಾನದಡಿ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಶಾಸಕ ನಾರಾ ಭರತ್ ರೆಡ್ಡಿಯವರು ಭೂಮಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ವಾರ್ಡಿನ ಸದಸ್ಯ ಮತ್ತು ಮೇಯರ್ ಪಿ.ಗಾದೆಪ್ಪ, ಪಾಲಿಕೆಯ ಸದಸ್ಯರಾದ ಮಿಂಚು ಸೀನಾ, ನೂರ್ ಮೊಹಮ್ಮದ್, ಮಾಜಿ ಮೇಯರ್ ಎಂ.ರಾಜೇಶ್ವರಿ, ಸುಬ್ಬರಾಯುಡು, ಸ್ಥಳೀಯ ಮುಖಂಡರಾದ ಸೋಮಶೇಖರ್, ಪೋಲಕ್ ಹನುಮಂತ ರೆಡ್ಡಿ, ಸೂರಿ, ಕುರುವಳ್ಳಿ ರಾಜ, ಗೌತಮ್.ಎಸ್, ನಾಗರಾಜ ಮತ್ತಿತರರು ಹಾಜರಿದ್ದರು.
ಅದೇ ರೀತಿ ಬಳ್ಳಾರಿ ಜಿಲ್ಲಾ ಖನಿಜ ಪ್ರತಿಷ್ಠಾನದ ವತಿಯಿಂದ ಬಳ್ಳಾರಿ ನಗರದ ಮುನಿಸಿಪಲ್ ಕಾಲೇಜು ಆವರಣದಲ್ಲಿ ನಿರ್ಮಿಸಲಾಗಿರುವ ನಾಲ್ಕು ಶಾಲಾ ಕೊಠಡಿಗಳನ್ನು ಸೋಮವಾರ ಉದ್ಘಾಟಿಸಿದರು. ಈ ವೇಳೆ ಡಿಡಿಪಿಯು ಉಪ ನಿರ್ದೇಶಕ ಲಕ್ಷ್ಮಣ ಹಳ್ಳದಮನಿ, ಪ್ರಾಂಶುಪಾಲ ಸುಂಕಪ್ಪ, ಕಾಲೇಜು ಅಭಿವೃದ್ಧಿ ಸಮಿತಿಯ ಜಿ.ರಮೇಶ್, ಅರ್ಷದ್ ಹಾಗೂ ಸ್ಥಳೀಯ ಮುಖಂಡರು, ಬೆಂಬಲಿಗರು ಹಾಜರಿದ್ದರು.
The post ಬಳ್ಳಾರಿ: ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ ಶಾಸಕ ನಾರಾ ಭರತ್ ರೆಡ್ಡಿ appeared first on Karnataka Kahale.
]]>The post ಬಳ್ಳಾರಿ ಘರ್ಷಣೆ: ಮೃತ ರಾಜಶೇಖರ ರೆಡ್ಡಿ ಕುಟುಂಬಕ್ಕೆ 25 ಲಕ್ಷ ರೂ. ನೀಡಿ ಸಾಂತ್ವನ ಹೇಳಿದ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ appeared first on Karnataka Kahale.
]]>
ಬಳ್ಳಾರಿ: ಬ್ಯಾನರ್ ಕಟ್ಟುವ ವಿಚಾರದಲ್ಲಿ ಗುಂಪು ಘರ್ಷಣೆಯಲ್ಲಿ ಸಾವನ್ನಪ್ಪಿದ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ ರೆಡ್ಡಿ ಕುಟುಂಬಕ್ಕೆ ವಸತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ ಝೆಡ್ ಜಮೀರ್ ಅಹ್ಮದ್ ಖಾನ್ ಅವರು 25 ಲಕ್ಷ ರೂ. ಆರ್ಥಿಕ ನೆರವು ನೀಡಿ ಸಾಂತ್ವನ ಹೇಳಿದರು.
ನಗರದ ಶಾಸಕನಾರಾ ಭರತ ರೆಡ್ಡಿ, ಕಂಪ್ಲಿ ಶಾಸಕ ಜೆ ಎನ್ ಗಣೇಶ್, ಡಿಸಿಸಿ ಅಧ್ಯಕ್ಷ ಅಲ್ಲಂ ಪ್ರಶಾಂತ್ ಮತ್ತಿತರ ಗಣ್ಯರೊಂದಿಗೆ ಹುಸೇನ್ ನಗರದಲ್ಲಿರುವ ರಾಜಶೇಖರ ರೆಡ್ಡಿ ಅವರ ಮನೆಗೆ ಶನಿವಾರ ಸಂಜೆ ತೆರಳಿ ಜಮೀರ್ ಖಾನ್ ಅವರು ಕುಟುಂಬ ಸದಸ್ಯರಿಗೆ ಧೈರ್ಯ ತುಂಬಿದರು.
ನಿಮ್ಮ ಕುಟುಂಬದ ಜತೆ ಕಾಂಗ್ರೆಸ್ ಪಕ್ಷ, ಜಿಲ್ಲೆಯ ಎಲ್ಲಾ ಶಾಸಕರು ಇದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರಾಜಶೇಖರ ಅವರ ತಾಯಿ, ತಮ್ಮ, ವಿಧವೆ ಅಕ್ಕ ಇದ್ದು ತಮ್ಮ ಕುಟುಂಬಕ್ಕೆ ಆಸರೆಯಾಗಿದ್ದ ರೆಡ್ಡಿಯನ್ನು ಕಳೆದು ಕೊಂಡು ತೀರಾ ಸಂಕಷ್ಟದಲ್ಲಿದ್ದೇವೆ ಎಂದು ದುಃಖಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಜಮೀರ್ ಅಹ್ಮದ್ಖಾನ್ ಅವರು, ರಾಜಶೇಖರ ಕುಟುಂಬಕ್ಕೆ ಆಧಾರವಾಗಿದ್ದರು. ಕುಟುಂಬ ಕಂಗಾಲಾಗಿ ಹೋಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಸೂಕ್ತ ನೆರವು ನೀಡಲಿದೆ. ಕೆಪಿಸಿಸಿ ಅಧ್ಯಕ್ಷರೂ ನೆರವು ಘೋಷಿಸಲಿದ್ದಾರೆ.
ರಾಜಶೇಖರ ತಮ್ಮನಿಗೆ ಬಳ್ಳಾರಿ ಪಾಲಿಕೆಯಲ್ಲಿ ನೌಕರಿ ನೀಡಲಾಗುವುದು. ವಿಧವೆಯಾಗಿರುವ ಸಹೋದರಿಗೆ ಸ್ಲಮ್ ಬೋರ್ಡ್ ನಿಂದ ಮನೆ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.
ಗುಂಪು ಘರ್ಷಣೆಗೆ ಬಗ್ಗೆ ಮಾತನಾಡಿದ ಸಚಿವರು ಮಹರ್ಷಿ ಶ್ರೀ ವಾಲ್ಮೀಕಿ ಪುತ್ಥಳಿ ಅನಾವರಣ ಕಾರ್ಯಕ್ರಮದ ಹಿನ್ನಲೆಯಲ್ಲಿ ಅಭಿಮಾನಿಗಳು ಬ್ಯಾನರ್ ಕಟ್ಟಿ ಸಂಭ್ರಮ ಪಡುತ್ತಿದ್ದರು. ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು ದೊಡ್ಡ ಮನಸ್ಸು ಮಾಡಿ ನಿರ್ಲಕ್ಷಿಸಿದ್ದರೆ ಘರ್ಷಣೆ ಯಾಗುತ್ತಿರಲಿಲ್ಲ ಎಂದು ಅಭಿಪ್ರಾಯ ಪಟ್ಟರು.
ಬಹಳ ವರ್ಷಗಳ ಕನಸು ನನಸಾಗುತ್ತಿರುವದರಿಂದ
ಕಾರ್ಯಕ್ರಮಕ್ಕೆ ಶ್ರೀ ರಾಮುಲು ಮತ್ತು ಜನಾರ್ದನ ರೆಡ್ಡಿ ಬೆಂಬಲ ನೀಡ ಬೇಕಿತ್ತು ಎಂದರು.
ಎಸ್.ಪಿ ಪವನ್ ನೆಜ್ಜೂರು ಅವರ ಅಮಾನತ್ತನ್ನು ಸಚಿವರು ಸಮರ್ಥಿಸಿ ಕೊಂಡರು. ಜವಾಬ್ದಾರಿಯುತ ಸ್ಥಾನದಲ್ಲಿರುವ ಎಸ್ಪಿ ಚಾರ್ಜ್ ತೆಗೆದುಕೊಂಡು ಗಂಟೆಗಳಲ್ಲಿ ಕರ್ತವ್ಯ ನಿರ್ವಹಿಸಬೇಕು. ಸೂಕ್ಷ್ಮ ಸನ್ನಿವೇಶವಿದ್ದಾಗ ನಿರ್ಲಕ್ಷ ಸರಿಯಲ್ಲ ಎಂದರು.
ಈ ಸಂದರ್ಭದಲ್ಲಿ ಶಾಸಕರಾದ ನಾರಾ ಭರತ ರೆಡ್ಡಿ, ಜೆ ಎನ್ ಗಣೇಶ್, ಡಿಸಿಸಿ ಅಧ್ಯಕ್ಷ ಅಲ್ಲಂ ಪ್ರಶಾಂತ್ ಮತ್ತಿತರ ಗಣ್ಯರು ಇದ್ದರು.
—–
The post ಬಳ್ಳಾರಿ ಘರ್ಷಣೆ: ಮೃತ ರಾಜಶೇಖರ ರೆಡ್ಡಿ ಕುಟುಂಬಕ್ಕೆ 25 ಲಕ್ಷ ರೂ. ನೀಡಿ ಸಾಂತ್ವನ ಹೇಳಿದ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ appeared first on Karnataka Kahale.
]]>The post ಟಿವಿಎಂ ಸ್ಮಾರಕ ಫಾರ್ಮಸಿ ಕಾಲೇಜಿನಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರ ಯಶಸ್ವಿ appeared first on Karnataka Kahale.
]]>
ಬಳ್ಳಾರಿ: ನಗರದ ವೀರಶೈವ ವಿದ್ಯಾವರ್ಧಕ ಸಂಘದ ತೊಗರಿ ವೀರಮಲ್ಲಪ್ಪ ಸ್ಮಾರಕ ಔಷಧ ವಿಜ್ಞಾನ ಮಹಾವಿದ್ಯಾಲಯ ಹಾಗೂ ಹೆಚ್.ಡಿ.ಎಫ್.ಸಿ. ಬ್ಯಾಂಕ್, ಬಳ್ಳಾರಿ ಶಾಖೆಯ ಸಹಯೋಗದಲ್ಲಿ ಸೋಮವಾರ ಮಹಾವಿದ್ಯಾಲಯದ ಆವರಣದಲ್ಲಿ ಸ್ವಯಂ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತೊಗರಿ ವೀರಮಲ್ಲಪ್ಪ ಸ್ಮಾರಕ ಔಷಧ ವಿಜ್ಞಾನ ಮಹಾವಿದ್ಯಾಲಯದ ಅಧ್ಯಕ್ಷರಾದ ಎಲ್.ಟಿ. ಶೇಖರ್ ಅವರು ವಹಿಸಿದ್ದರು. ಮುಖ್ಯ ಅತಿಥಿಯಾಗಿದ್ದ ಬಳ್ಳಾರಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರದ ವೈದ್ಯಕೀಯ ಅಧೀಕ್ಷಕರಾದ ಡಾ. ಇಂದುಮತಿ ವಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಇಂದಿನ ಸಂದರ್ಭದಲ್ಲಿ ರಕ್ತದಾನದ ಅಗತ್ಯತೆ ಹಾಗೂ ಅದರ ಮಹತ್ವವನ್ನು ವಿವರಿಸಿದರು.

ವೇದಿಕೆಯ ಮೇಲೆ ಉಪಸ್ಥಿತರಿದ್ದ ಕಾಲೇಜು ಆಡಳಿತ ಮಂಡಳಿಯ ಸದಸ್ಯರಾದ ಡಾ. ಸೋಮನಾಥ ಎಸ್.ಎಂ ಅವರು ಮಾತನಾಡಿ, ಜನಸಾಮಾನ್ಯರಲ್ಲಿ ರಕ್ತದಾನದ ಮಹತ್ವ ಮತ್ತು ಸಾಮಾಜಿಕ ಕಾಳಜಿಯ ಕುರಿತು ಹೆಚ್ಚಿನ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಪ್ರಾಧ್ಯಾಪಕ ಡಾ. ಆರ್.ಎಲ್.ಎನ್. ಮೂರ್ತಿ ಅವರು ನಿರೂಪಿಸಿದರು. ಈ ಶಿಬಿರದಲ್ಲಿ ತೊಗರಿ ವೀರಮಲ್ಲಪ್ಪ ಸ್ಮಾರಕ ಔಷಧ ವಿಜ್ಞಾನ ಮಹಾವಿದ್ಯಾಲಯದ 100 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಿ, ಬಳ್ಳಾರಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರದ ರಕ್ತನಿಧಿಗೆ ರಕ್ತವನ್ನು ಸಮರ್ಪಿಸಿದರು.

ರಕ್ತದಾನ ಶಿಬಿರವು ಅತ್ಯಂತ ಯಶಸ್ವಿಯಾಗಿ ನೆರವೇರಿದ್ದು, ವಿದ್ಯಾರ್ಥಿಗಳ ಸಾಮಾಜಿಕ ಜವಾಬ್ದಾರಿಯನ್ನು ಪ್ರತಿಬಿಂಬಿಸಿತು.
The post ಟಿವಿಎಂ ಸ್ಮಾರಕ ಫಾರ್ಮಸಿ ಕಾಲೇಜಿನಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರ ಯಶಸ್ವಿ appeared first on Karnataka Kahale.
]]>The post ಬಿಸಿ ಚೈತನ್ಯ ಸಮಿತಿ ರಾಷ್ಟ್ರೀಯ ಉಪಾಧ್ಯಕ್ಷರಾಗಿ ಪತ್ರಕರ್ತ ಬೆಲ್ಡೋನಾ ಗಿರಿ ಯಾದವ್ ನೇಮಕ appeared first on Karnataka Kahale.
]]>ಗಣಿನಾಡಿನ ಬಳ್ಳಾರಿಯ ಗಡಿಯಲ್ಲಿರುವ ಕರ್ನೂಲ್ ಜಿಲ್ಲೆಯ ಬೆಲ್ಡೋಣ ಗ್ರಾಮದಲ್ಲಿ ಜನಿಸಿದ ಬೆಲ್ಡೋನಾ ಗಿರಿ ಯಾದವ್, ಕಳೆದ 20 ವರ್ಷಗಳಿಂದ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಜನರು ಮತ್ತು ಸರ್ಕಾರಿ ವಲಯಗಳ ನಡುವೆ ಸೇತುವೆಯಾಗಿ ಕೆಲಸ ಮಾಡುತ್ತಾ ಸಾರ್ವಜನಿಕರಿಗೆ ಒಳಿತಿಗಾಗಿ ಸಮಸ್ಯೆಗಳನ್ನು ಪರಿಹರಿಸಲು ತಮ್ಮದೇ ಆದ ಶೈಲಿಯಲ್ಲಿ ಕೆಲಸ ಮಾಡಿದ ಯುವ ನಾಯಕ. ಮತ್ತು ಸಾಕ್ಷಿ ರಾಷ್ಟ್ರೀಯ ತೆಲುಗು ದಿನಪತ್ರಿಕೆಯಲ್ಲಿ ಕಳೆದ 20 ವರ್ಷಗಳಿಂದ ಕೆಲಸ ಮಾಡಿದ್ದಾರೆ ಈ ಎಲ್ಲಾ ಸಾರ್ವಜನಿಕ ಸೇವೆಯನ್ನು ಗುರುತಿಸಿ ಕಿರಿ ಯಾದವ್ ಅವರನ್ನು ರಾಷ್ಟ್ರೀಯ ಉಪಾಧ್ಯಕ್ಷ ಆಗಿ ನೇಮಕ ಮಾಡಲಾಗಿದೆ ಎಂದು ಅವರು ಹೇಳಿದರು.
ಗಿರಿ ಯಾದವ್ ಜನ ಚೈತನ್ಯ ಚಾರಿಟೇಬಲ್ ಟ್ರಸ್ಟ್ ಅನ್ನು ಸ್ಥಾಪಿಸಿದ್ದಾರೆ ಭಗವದ್ಗೀತೆಯನ್ನು ಜಗತ್ತಿಗೆ ಕಲಿಸಿದ ಶ್ರೀ ಕೃಷ್ಣ ಯಾದವ್ ಅವರ ವಂಶಸ್ಥರು ಮತ್ತು ಯಾದವ್ ಸಮುದಾಯದ ಬಳ್ಳಾರಿ ಜಿಲ್ಲಾ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿರುವ ಗಿರಿ ಯಾದವ್ ಅವರು ಈಗ ರಾಷ್ಟ್ರೀಯ ಬಿ.ಸಿ. ಚೈತನ್ಯ ಸಮಿತಿಯಲ್ಲಿ ಅತ್ಯುನ್ನತ ಸೇವೆಗಳನ್ನು ಒದಗಿಸಬೇಕು. ಈ ಶುಭ ಸಂದರ್ಭದಲ್ಲಿ ನಾವು ಗಿರಿ ಯಾದವ್ ಅವರನ್ನು ಅಭಿನಂದಿಸುತ್ತೇವೆ ಮತ್ತು ಅವರಿಗೆ ಹುದ್ದೆಯ ಜವಾಬ್ದಾರಿಗಳನ್ನು ವಹಿಸುತ್ತೇವೆ, ಅಲೆಮಾರಿ ಸಮುದಾಯದಲ್ಲಿ ಅತ್ಯಂತ ಹಿಂದುಳಿದಿರುವ ಯಾದವ ಜನಾಂಗದ ಗಿರಿ ಯಾದವ್ ಬಿ.ಸಿ.ಗಳ ಕ್ಷೇತ್ರವಾಗಿ ಧ್ವನಿ ಎತ್ತಲು ಅವರು ನಮ್ಮಲ್ಲಿ ಒಬ್ಬರಾಗಬೇಕು ಎಂದು ಹೇಳಲು ಇಚ್ಚಿಸುತ್ತೇವೆ. ಈ ಸಂದರ್ಭದಲ್ಲಿ ಬಿ.ಸಿ. ಚೈತನ್ಯ ಸಮಿತಿಯ ಸದಸ್ಯರು ಅವರಿಗೆ ಶುಭ ಹಾರೈಸುತ್ತಾರೆ ಮತ್ತು ರಾಷ್ಟ್ರೀಯ ಉಪಾಧ್ಯಕ್ಷರಾಗಿ ಅವರಿಗೆ ವಹಿಸಲಾಗಿರುವ ಜವಾಬ್ದಾರಿಗಳನ್ನು ಸರಿಯಾಗಿ ನಿರ್ವಹಿಸಲು ಮತ್ತು ಹೆಚ್ಚಿನ ಸ್ವ-ಪ್ರಯತ್ನದಿಂದ ಮುಂದಿನ ದಿನಗಳಲ್ಲಿ ಉನ್ನತ ಹುದ್ದೆಯನ್ನು ದೇವರು ಕರುಣಿಸಲಿ ಎಂದು ಪ್ರಾರ್ಥಿಸುತ್ತೇವೆ ಎಂದರು.
ಆದೇಶ ಪತ್ರವನ್ನು ಪಡೆದುಕೊಂಡ ಗಿರಿ ಯಾದವ್ ಮಾತನಾಡಿ, ನನ್ನ ಮೇಲೆ ನಂಬಿಕೆ ಮತ್ತು ವಿಶ್ವಾಸದಿಂದ ನನಗೆ ಈ ದೊಡ್ಡ ಜವಾಬ್ದಾರಿಯನ್ನು ನೀಡಿರುತ್ತಾರೆ ಅವರ ನಂಬಿಕೆಯನ್ನು ಹುಸಿಗೊಳಿಸದಂತೆ ನನಗೆ ನೀಡಿರುವ ಕಾರ್ಯವನ್ನು ಪೂರೈಸುತ್ತೇನೆ. ರಾಷ್ಟ್ರೀಯ ಉಪಾಧ್ಯಕ್ಷರಾದಂತ ದೊಡ್ಡ ಹುದ್ದೆಯನ್ನು
ನೀಡಿದ್ದಕ್ಕಾಗಿ ಬಿ.ಸಿ. ಚೈತನ್ಯ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಮತ್ತು ಎಲ್ಲಾ ಬಿ.ಸಿ. ಸಹೋದರರಿಗೆ ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ, ರಾಷ್ಟ್ರೀಯ ಬಿಸಿ ಚೈತನ್ಯ ಸಮಿತಿಯ ರಾಷ್ಟ್ರೀಯ ಮಾಧ್ಯಮ ಸಲಹೆಗಾರ ಬೆಂಗಳೂರು ಸಿ ಗೋಪಾಲ್, ಗ್ರೇಟರ್ ಹೈದರಾಬಾದ್ ಅಧ್ಯಕ್ಷೆ ಕಾವ್ಯ ಶ್ರೀಕಾಂತ್, ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ರಾವ್, ಎಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಸಿ. ಚೆನ್ನೈಯಯ್ಯ, ಗ್ರೇಟರ್ ಹೈದರಾಬಾದ್ ಅಧಿಕಾರಿಗಳು ಮತ್ತು ಇತರರು ಭಾಗವಹಿಸಿದ್ದರು.
The post ಬಿಸಿ ಚೈತನ್ಯ ಸಮಿತಿ ರಾಷ್ಟ್ರೀಯ ಉಪಾಧ್ಯಕ್ಷರಾಗಿ ಪತ್ರಕರ್ತ ಬೆಲ್ಡೋನಾ ಗಿರಿ ಯಾದವ್ ನೇಮಕ appeared first on Karnataka Kahale.
]]>The post ಮಹರ್ಷಿ ಶ್ರೀ ವಾಲ್ಮೀಕಿ ಪುತ್ಥಳಿ ಅನಾವರಣ: ಸಮಾಜದ ಮುಖಂಡರಿಂದ ವೃತ್ತ ವೀಕ್ಷಣೆ appeared first on Karnataka Kahale.
]]>
ಬಳ್ಳಾರಿ, ನ.29: ನಗರ ಶಾಸಕ ನಾರಾ ಭರತ್ ರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ಬರುವ ಜ 3ರಂದು ನಡೆಯಲಿರುವ ಬಳ್ಳಾರಿ ನಗರದ ವಾಲ್ಮೀಕಿ ವೃತ್ತದಲ್ಲಿ ಮಹರ್ಷಿ ಶ್ರೀ ವಾಲ್ಮೀಕಿಯವರ ಪುತ್ಥಳಿಯನ್ನು ಅನಾವರಣ ಕಾರ್ಯಕ್ರಮದ ಹಿನ್ನಲೆಯಲ್ಲಿ ನಗರ ಹಾಗೂ ಜಿಲ್ಲೆಯ ವಾಲ್ಮೀಕಿ ನಾಯಕರ ಸಮಾಜದ ಮುಖಂಡರು ಶನಿವಾರ ಬೆಳಿಗ್ಗೆ ವಾಲ್ಮೀಕಿ ವೃತ್ತಕ್ಕೆ ಭೇಟಿ ನೀಡಿ ಪುತ್ಥಳಿ ಸ್ಥಾಪನೆಯಾಗುವ ವೃತ್ತದ ಕಾಮಗಾರಿಯನ್ನು ವೀಕ್ಷಿಸಿದರು.
ಇದಕ್ಕೂ ಮುನ್ನ ಹಾಲಿ ಇರುವ ಮಹರ್ಷಿ ವಾಲ್ಮೀಕಿಯವರ ಪುತ್ಥಳಿಗೆ ಪೂಜೆ ಸಲ್ಲಿಸಲಾಯಿತು.
ಸ್ಥಳ ವೀಕ್ಷಣೆಯ ಬಳಿಕ ಸಭೆ ನಡೆಸಿ ಜ.03, 2026ರ ಪುತ್ಥಳಿಯ ಅನಾವರಣ ಕಾರ್ಯಕ್ರಮ, ಪುತ್ಥಳಿಯ ಸ್ವಾಗತ, ವೇದಿಕೆ ಕಾರ್ಯಕ್ರಮ, ಪ್ರಚಾರ ಕಾರ್ಯ ಸೇರಿದಂತೆ ಕಾರ್ಯಕ್ರಮ ಯಶಸ್ವಿಗೊಳಿಸಲು ಅಗತ್ಯ ಇರುವ ಅಂಶಗಳ ಕುರಿತು ಸಭೆಯಲ್ಲಿ ಹಾಜರಿದ್ದ ವಾಲ್ಮೀಕಿ ನಾಯಕರ ಸಮುದಾಯದ ಮುಖಂಡರು ಸಲಹೆ ಸೂಚನೆ ನೀಡಿದರು.
ಮಹಾನಗರ ಪಾಲಿಕೆಯ ಸದಸ್ಯ ಹನುಮಂತಪ್ಪ ಮಾತನಾಡಿ, ಪಕ್ಷಾತೀತವಾಗಿ ಎಲ್ಲರೂ ಈ ಕಾರ್ಯಕ್ರಮ ಯಶಸ್ಸಿಗೆ ಶ್ರಮಿಸಬೇಕು ಜೊತೆಗೆ ಎಲ್ಲ ಪಕ್ಷಗಳಲ್ಲಿರುವ ಹಾಲಿ, ಮಾಜಿ ಜನಪ್ರತಿನಿಧಿಗಳಿಗೆ ಆಹ್ವಾನ ನೀಡಬೇಕು ಎಂದರು.
ಕಾರ್ಯಕ್ರಮಕ್ಕೆ ಪೂರಕವಾಗಿ ವಿವಿಧ ಸಮಿತಿಗಳನ್ನು ರಚಿಸಲಾಗಿದೆ, ನಗರದ 39 ವಾರ್ಡುಗಳು ಹಾಗೂ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಸಮಾಜದ ಜನರಿಗೆ ಆಹ್ವಾನ ನೀಡುವ ಬಗ್ಗೆ ನಾವೆಲ್ಲ ಕಾರ್ಯ ಪ್ರವೃತ್ತರಾಗೋಣ ಎಂದು ಪರಶುರಾಮ (ಪರಶಿ) ಅವರು ಹೇಳಿದರು.
ಯುವ ಮುಖಂಡರಾದ ಸಂಗನಕಲ್ಲು ವಿಜಯ ಕುಮಾರ್, ಹೊನ್ನೂರಪ್ಪ, ಲೋಕೇಶ್, ಟಿ.ಹೆಚ್.ಚರಣರಾಜ್ ಅವರು ಈವರೆಗೆ ಪೂರ್ವಭಾವಿ ಸಭೆಗಳಲ್ಲಿ ಆಗಿರುವ ತೀರ್ಮಾನ, ಮುಂದೆ ಆಗಬೇಕಾಗಿರುವ ಕೆಲಸ ಕಾರ್ಯಗಳ ಕುರಿತು ಸಭೆಯಲ್ಲಿ ಹಾಜರಿದ್ದವರಿಗೆ ಮಾಹಿತಿ ನೀಡಿದರು.
ಸಮಾಜದ ಹಿರಿಯ ಮುಖಂಡ, ಮಾಜಿ ನಗರಸಭೆ ಸದಸ್ಯ ರಾಮಣ್ಣ ಗುಮನೂರ್, ಹಿರಿಯ ಮುಖಂಡರಾದ ಕೆಇಬಿ ರುದ್ರಪ್ಪ, ಪಿ. ಜಗನ್ನಾಥ, ಪತ್ರಕರ್ತರಾದ ಕೆ. ಮಲ್ಲಯ್ಯ, ಗೋರಯ್ಯ, ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಮಾಜಿ ಜಿಲ್ಲಾಧ್ಯಕ್ಷರಾದ ಟಿ. ಮಲ್ಲಿಕಾರ್ಜುನ, ಶಾನವಾಸಪುರ ದೊಡ್ಡ ಎರ್ರೀಸ್ವಾಮಿ, ಪರಶುರಾಮಡು, ಹಗರಿ ಗೋವಿಂದ, ವಿ.ಎನ್. ಶ್ರೀನಾಥ್ ಎಸ್ಪಿ ಸರ್ಕಲ್ ಮಲ್ಲಿಕಾರ್ಜುನ, ದೇವಿನಗರ ಸುಧಾಕರ್, ಬಾಲರಾಜ್, ಕೊಳಗಲ್ಲು ಶಿವಾನಂದ, ಶೇಖರ್, ಕಾಕರ್ಲತೋಟ ರವಿ, ಹಮಾಲಿ ಸುಂಕಣ್ಣ, ವಕೀಲ ಕಿಶೋರ್, ರಾಮುಮೂರ್ತಿ, ಕೆ.ಕೆ. ಹಾಳ್ ಸತ್ಯನಾರಾಯಣ, ಕೆಕೆ ಹಾಳ್ ದುರ್ಗಣ್ಣ, ಚಳ್ಳಗುರ್ಕಿ ಕುಬೇರ್, ಹವ್ವಂಬಾವಿ ಲೋಕೇಶ್, ಗಂಗಾಧರ, ಸಂಗನಕಲ್ಲು ವಿಜಯಕುಮಾರ್, ಸಂಗನಕಲ್ಲು ರಮೇಶ್, ಬಜ್ಜಪ್ಪ, ಮೋಹನ್, ರಾಘವೇಂದ್ರ, ರಾಮು, ಮಚ್ಚಾ ಪ್ರಸಾದ್, ಸುಧಾಕರ್, ಭವಾನಿ ಪ್ರಸಾದ್, ಜಗದೀಶ್, ಟಿಎಂಜಿ ಗಂಗಪ್ಪ, ಎರಗುಡಿ ಸೋಮಣ್ಣ, ಬಸರಕೋಡು ಗೋವಿಂದ, ಶ್ರೀಶೈಲ,ಯರಗುಡಿ ರಮೇಶ್, ವಣೀನೂರು ಶ್ರೀನಿವಾಸ, ಬೆಣಕಲ್ ಸುರೇಶ್, ಮೀನಹಳ್ಳಿ ಪಾಲಾಕ್ಷಿ,ನರೇಂದ್ರ ಬಯಲೂರು ಶೇಖಣ್ಣ, ಸಂಗನಕಲ್ಲು ಟಿ.ಹೊನ್ನೂರಪ್ಪ, ಲಾಲು ಸ್ವಾಮಿ, ಜಗದೀಶ್, ಚಿನ್ನಾ ಇದ್ದರು.
The post ಮಹರ್ಷಿ ಶ್ರೀ ವಾಲ್ಮೀಕಿ ಪುತ್ಥಳಿ ಅನಾವರಣ: ಸಮಾಜದ ಮುಖಂಡರಿಂದ ವೃತ್ತ ವೀಕ್ಷಣೆ appeared first on Karnataka Kahale.
]]>The post ಬಳ್ಳಾರಿ: ರಸ್ತೆ, ರೈಲ್ವೇ ಕೆಳ ಸೇತುವೆ ಕಾಮಗಾರಿಗೆ ಶಾಸಕ ನಾರಾ ಭರತರೆಡ್ಡಿ ಅವರಿಂದ ಭೂಮಿ ಪೂಜೆ appeared first on Karnataka Kahale.
]]>
ಬಳ್ಳಾರಿ, ಅ.19: ನಗರದ ಸತ್ಯನಾರಾಯಣ ಪೇಟೆಯ ರೈಲ್ವೆ ಕೆಳ ಸೇತುವೆ ಬಳಿ ಭಾನುವಾರ ಮಧ್ಯಾಹ್ನ ನಗರ ಕ್ಷೇತ್ರದ ಶಾಸಕ ನಾರಾ ಭರತ್ ರೆಡ್ಡಿ ಭೂಮಿ ಪೂಜೆ ನೆರವೇರಿಸುವ ಮೂಲಕ ಅಂದಾಜು ವೆಚ್ಚ 2 ಕೋಟಿ ರೂ.ಗಳ ಕಾಮಗಾರಿಗೆ ಚಾಲನೆ ನೀಡಿದರು.
ವಾರ್ಡ್ ಸಂಖ್ಯೆ 19ರ ಸತ್ಯನಾರಾಯಣ ಪೇಟೆಯ ಕೂಲ್ ಕಾರ್ನರ್ ವೃತ್ತದಿಂದ ಇಂದಿರಾ ವೃತ್ತದವರೆಗೆ ರಸ್ತೆಯ ಎರಡೂ ಬದಿ ಪೇವರ್ ಅಳವಡಿಕೆ ಮತ್ತು ಸುಂದರೀಕರಣ ಹಾಗೂ ಸತ್ಯನಾರಾಯಣ ಪೇಟೆಯ ರೈಲ್ವೆ ಕೆಳ ಸೇತುವೆಯ ಅಭಿವೃದ್ಧಿ, ಸುಂದರೀಕರಣ ಕಾಮಗಾರಿಗೆ ಚಾಲನೆ ನೀಡಲಾಯಿತು.
ಅದೇ ರೀತಿ ವಾರ್ಡ್ ಸಂಖ್ಯೆ 21 ರ ವ್ಯಾಪ್ತಿಯ ಚೈತನ್ಯ ಕಾಲೇಜು ಹಿಂಭಾಗದ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಪಾಲಿಕೆಯ ಸದಸ್ಯೆ, ಮಾಜಿ ಮೇಯರ್ ಎಂ.ರಾಜೇಶ್ವರಿ, ಎಇಇ ಬಸವರೆಡ್ಡಿ, ಕಾಂಗ್ರೆಸ್ ಮುಖಂಡರಾದ ಪರಶುರಾಮ್, ಚಾನಾಳ್ ಶೇಖರ್, ಸುಬ್ಬರಾಯುಡು, ತಲಪುರಿ ಪದ್ಮಾ, ರಾಜು, ರಘು, ವಿಜಯ ಸೇರಿದಂತೆ ಹಲವರು ಹಾಜರಿದ್ದರು.
The post ಬಳ್ಳಾರಿ: ರಸ್ತೆ, ರೈಲ್ವೇ ಕೆಳ ಸೇತುವೆ ಕಾಮಗಾರಿಗೆ ಶಾಸಕ ನಾರಾ ಭರತರೆಡ್ಡಿ ಅವರಿಂದ ಭೂಮಿ ಪೂಜೆ appeared first on Karnataka Kahale.
]]>The post ಬಳ್ಳಾರಿ: ಜು 22 ರಂದು ಲೇಖಕ ಸಿದ್ಧರಾಮ ಕಲ್ಮಠ ಅವರ ಕರ್ಪೂರದ ಬೆಳಗು ನಾಟಕ ಕೃತಿ ಬಿಡುಗಡೆ appeared first on Karnataka Kahale.
]]>ಈ ಕಾರ್ಯಕ್ರಮದ ಸಾನಿಧ್ಯವನ್ನು ಮ.ನಿ.ಪ್ರ.ಶ್ರೀ ಕಲ್ಯಾಣ ಮಹಾಸ್ವಾಮಿಗಳು ವಹಿಸಲಿದ್ದು ವಿಧಾನ ಪರಿಷತ್ ಸದಸ್ಯರಾದ ವೈ ಎಂ ಸತೀಶ್ ಕಾರ್ಯಕ್ರಮ ಉದ್ಘಾಟಿಸುವರು.

ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಣೇಕಲ್ ಮಹಾಂತೇಶ್ ಅಧ್ಯಕ್ಷತೆ ವಹಿಸಲಿದ್ದಾರೆ . ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷ ಕೆ.ವಿ. ನಾಗರಾಜ ಮೂರ್ತಿ ನಾಟಕ ಕೃತಿ ಬಿಡುಗಡೆ ಮಾಡುವರು. ಡಾ. ಪಿ. ದಿವಾಕರ ನಾರಾಯಣ ಕೃತಿ ಕುರಿತು ಮಾತಾಡಲಿದ್ದಾರೆ.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮರಿಸ್ವಾಮಿ ಮಠದ ಶ್ರೀ ವಾಗೀಶ ಶರ್ಮ ಹೀರದ ಸೂಗಮ್ಮ ಶಾಲೆಯ ಅಧ್ಯಕ್ಷ ಮೇಟಿ ಪಂಪನಗೌಡ, ಕುಡಿತಿನಿ ಸತ್ಸಂಗ ಆಶ್ರಮದ ಪಲ್ಲೇದ ಪಂಪಾಪತೆಪ್ಪ,ರಂಗ ತೋರಣ ಕಾರ್ಯದರ್ಶಿ ಕಪ್ಪಗಲ್ಲು ಪ್ರಭುದೇವ ಮತ್ತು ನಿವೃತ್ತ ಅಭಿಯಂತರ ಕೇಣಿ ಬಸಪ್ಪ, ಶರಣ ಸಕ್ಕರೆ ಕರಡೀಶ ಸೌಹಾರ್ದ ಪ.ಸೌ. ಸಹಕಾರ ಸಂಘದ ಅಧ್ಯಕ್ಷ ಕಲ್ಗುಡಿ ಮಂಜುನಾಥ, ಸಮಾಜಸೇವಕ ಜಿ. ಮಹಾಲಿಂಗಯ್ಯ ಮತ್ತು ವೀರಶೈವ ತರುಣ ಸಂಘದ ಅಧ್ಯಕ್ಷ ನಂದೀಶ್ ಮಠಂ,
ಭಾಗವಹಿಸಲಿದ್ದಾರೆ. ಜಾನಪದ ಗಾರುಡಿಗ ಯಲ್ಲನಗೌಡ ಶಂಕರ ಬಂಡೆ ಮತ್ತು ಜಡೇಶ್ ಎಮ್ಮಿಗನೂರು ಇವರಿಂದ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಲೇಖಕ ಸಿದ್ದರಾಮ ಕಲ್ಮಠ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
The post ಬಳ್ಳಾರಿ: ಜು 22 ರಂದು ಲೇಖಕ ಸಿದ್ಧರಾಮ ಕಲ್ಮಠ ಅವರ ಕರ್ಪೂರದ ಬೆಳಗು ನಾಟಕ ಕೃತಿ ಬಿಡುಗಡೆ appeared first on Karnataka Kahale.
]]>The post ‘ನಮ್ಮ ಕ್ಲಿನಿಕ್’ ಗೆ ಬರುವ ರೋಗಿಗಳನ್ನು ಕುಟುಂಬದ ಸದಸ್ಯರೆಂದು ಭಾವಿಸಿ ವೈದ್ಯರು ಚಿಕಿತ್ಸೆ ನೀಡಬೇಕು -ಪಾಲಿಕೆ ಸದಸ್ಯ ಪಿ ಗಾದೆಪ್ಪ appeared first on Karnataka Kahale.
]]>
ಬಳ್ಳಾರಿ : ನಗರದ 23ನೇ ವಾರ್ಡ್ ನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅಂಬೇಡ್ಕರ್ ನಗರದಲ್ಲಿ ಶುಕ್ರವಾರ ಮಹಾನಗರ ಪಾಲಿಕೆ ಸದಸ್ಯ ಪಿ. ಗಾದೆಪ್ಪ ಅಧ್ಯಕ್ಷತೆಯಲ್ಲಿ ಜನ ಆರೋಗ್ಯ ಸಮಿತಿ ಮತ್ತು ಆರೋಗ್ಯ ರಕ್ಷಾ ಸಮಿತಿ ಸಭೆ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಪಿ.ಗಾದೆಪ್ಪ ಅವರು ಆರೋಗ್ಯ ಕೇಂದ್ರದ ಸಮಸ್ಯೆಗಳ ಬಗ್ಗೆ ಚರ್ಚೆ ಹಾಗೂ ಅಗತ್ಯ ಸೌಕರ್ಯ ಕಲ್ಪಿಸುವ ದೃಷ್ಟಿಯಿಂದ ಪ್ರತಿ ತಿಂಗಳ ಕೊನೆ ದಿನ ಸಭೆ ನಡೆಸಲು ಜನ ಆರೋಗ್ಯ ಸಮಿತಿ ಮತ್ತು ಆರೋಗ್ಯ ರಕ್ಷಾ ಸಮಿತಿಗೆ ಸೂಚಿಸಿದರು.
ನಮ್ಮ ಕ್ಲಿನಿಕ್ ಗೆ ನಗರ ಪ್ರದೇಶದಿಂದ ಅತ್ಯಂತ ಕಡು ಬಡ ರೋಗಿಗಳು ಬರುತ್ತಾರೆ. ಆಸ್ಪತ್ರೆಯಲ್ಲಿ ರೋಗಿಗಳಿಗೆ, ಗರ್ಭಿಣಿಯರಿಗೆ ಸಿಗಬೇಕಾದ ಸೌಲಭ್ಯಗಳ ಬಗ್ಗೆ ಗಮನಹರಿಸಬೇಕು. ಆಸ್ಪತ್ರೆಗೆ ಬರುವ ರೋಗಿಗಳನ್ನು ವೈದ್ಯರು ಹಾಗೂ ಸಿಬ್ಬಂದಿ ತಮ್ಮ ಮನೆಯವರೆಂದು ಭಾವಿಸಿ ಚಿಕಿತ್ಸೆ ನೀಡಬೇಕು ಎಂದು ಕಿವಿ ಮಾತು ಹೇಳಿದರು.
ಚಿಕಿತ್ಸೆ ನೀಡುವುದರ ಜೊತೆಗೆ ಸ್ವಚ್ಛತೆಯನ್ನು ಕಾಪಾಡುವಂತೆ ವೈದ್ಯರಿಗೆ ಹಾಗೂ ಸಿಬ್ಬಂದಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕುಷ್ಟರೋಗ ನಿಯಂತ್ರಣಧಿಕಾರಿಗಳಾದ ಡಾ. ವೀರೇಂದ್ರ ಕುಮಾರ್ , ಹಿರಿಯ ಸಾಹಿತಿ ಎನ್.ಡಿ ವೆಂಕಮ್ಮ , ಶಾಲಾ ಮುಖ್ಯ ಶಿಕ್ಷಕಿ ಎರ್ರೆಮ್ಮ .ಪಿ , ಸಹ ಶಿಕ್ಷಕರುಗಳಾದ ಹೆಚ್. ನಾಗರಾಜ್ , ಸಿದ್ದಲಿಂಗಮ್ಮ.ಎಲ್ , ಎಂ .ಪ್ರಮೀಳಾ ಬಾಯಿ , ಅನಿತಾ ಹೆಚ್.ವೈ , ನಗರ ಮುಖಂಡರುಗಳಾದ ಸಿಂಧೂರ ಲಕ್ಷ್ಮಣ್ , ಮೋಹನ್ ರಾಮ್ .ಕೆ , ಷಣ್ಮುಖ , ಲಕ್ಷ್ಮಣ. ಎಸ್ ಭಂಡಾರಿ , ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿಗಳಾದ ಡಾ. ಸಾತ್ವಿಕ್ , ನಮ್ಮ ಕ್ಲಿನಿಕ್ ಆಡಳಿತ ವೈದ್ಯಧಿಕಾರಿಗಳಾದ ಡಾ.ಎಂ. ಹನುಮೇಶ್ , ಸಿಪಿಎಂ ರುದ್ರಮ್ಮ , ಪಿಎಚ್ಸಿಒ ನಾಗಮಣಿ , ಎಂ ಎಲ್ ಡಬ್ಲ್ಯೂ ಎರಿಸ್ವಾಮಿ , ಶುಶ್ರೂಷಾಧಿಕಾರಿ ಉಮಾದೇವಿ , ಆರೋಗ್ಯ ನಿರೀಕ್ಷಣಾಧಿಕಾರಿ ಮಾಧವಿ.ಡಿ , ಸಹಾಯಕಿ ಪ್ರಿಯದರ್ಶಿನಿ.ಎಚ್ , ಅಂಗನವಾಡಿ ಕಾರ್ಯಕರ್ತರು , ಆಶಾ ಕಾರ್ಯಕರ್ತರು ಸೇರಿದಂತೆ ನಗರದ ಮಹಿಳೆಯರು ಉಪಸ್ಥಿತರಿದ್ದರು
The post ‘ನಮ್ಮ ಕ್ಲಿನಿಕ್’ ಗೆ ಬರುವ ರೋಗಿಗಳನ್ನು ಕುಟುಂಬದ ಸದಸ್ಯರೆಂದು ಭಾವಿಸಿ ವೈದ್ಯರು ಚಿಕಿತ್ಸೆ ನೀಡಬೇಕು -ಪಾಲಿಕೆ ಸದಸ್ಯ ಪಿ ಗಾದೆಪ್ಪ appeared first on Karnataka Kahale.
]]>The post ವಿದ್ಯಾರ್ಥಿಗಳು ಮೊಬೈಲ್ ಬಿಟ್ಟು ಪುಸ್ತಕ ಹಿಡಿದುಕೊಳ್ಳಿ – ಶ್ರೀ ನಿರಂಜನ ಪ್ರಭು ಸ್ವಾಮೀಜಿ appeared first on Karnataka Kahale.
]]>
ಬಳ್ಳಾರಿ ಜೂ. 1: ಇಂದು ಮೊಬೈಲ್ ಹಿಡಿದುಕೊಳ್ಳುವುದು ವಿದ್ಯಾರ್ಥಿಗಳಿಗೆ ಫ್ಯಾಷನ್ ಆಗಿದ್ದು, ಇದರಿಂದ ಅಭ್ಯಾಸಕ್ಕೆ ಅಡಚಣೆ ಆಗುವುದರ ಜೊತೆಗೆ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರಲಿದೆ ಕಾರಣ ಇಂದಿನ ವಿದ್ಯಾರ್ಥಿಗಳು ಮೊಬೈಲ್ ಬಿಟ್ಟು ಪುಸ್ತಕವನ್ನು ಹಿಡಿದುಕೊಳ್ಳಿ ಆಗ ಮಾತ್ರ ನಿಮ್ಮಿಂದ ಏನಾದರೂ ಸಾಧಿಸಲು ಸಾಧ್ಯವಾಗುತ್ತದೆ ಎಂದು ಕುರುಗೋಡು ಒಪ್ಪತ್ತೇಶ್ವರ ಮಠದ ಶ್ರೀ ನಿರಂಜನ ಪ್ರಭು ಸ್ವಾಮೀಜಿ ಅವರು ತಿಳಿಸಿದರು.
ಅವರು ಭಾನುವಾರ ನಗರದ ಅಲ್ಲಿಪುರ ಶ್ರೀ ಮಹದೇವ ತಾತ ಮಠದಲ್ಲಿ ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ನೌಕರರ ಸಂಘದಿಂದ ಪದಾಧಿಕಾರಿಗಳ ಪದಗ್ರಹಣ ಮತ್ತು 10ನೇ ತರಗತಿ, ಪಿಯುಸಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿ ಆಶೀರ್ವಚನ ನೀಡಿದರು.
ಪೋಷಕರು ತಮ್ಮ ಮಕ್ಕಳಿಗೆ ಕೇವಲ ವಿದ್ಯೆಯನ್ನು ಮಾತ್ರ ಕಲಿಸಿದರೆ ಸಾಲದು ಅವರಿಗೆ ಜೀವನದಲ್ಲಿ ಅತ್ಯಂತ ಅವಶ್ಯಕವಿರುವ ಸಂಸ್ಕಾರವನ್ನು ಕಲಿಸಬೇಕು, ಇಂದಿನ ಯುವಕರು ಮತ್ತು ವಿದ್ಯಾರ್ಥಿಗಳು ಮೊಬೈಲ್ ಹಿಂದೆ ಬಿದ್ದು ಸಂಸ್ಕಾರವನ್ನೇ ಮರೆತಿದ್ದಾರೆ, ಮೊಬೈಲ್ ಬಿಟ್ಟು ಪುಸ್ತಕ ಹಿಡಿದುಕೊಂಡಲ್ಲಿ ಜೀವನದಲ್ಲಿ ಏನಾದರೂ ಸಾಧಿಸಲು ಸಾಧ್ಯ ಎಂದರು.
ಪ್ರತಿಭಾ ಪುರಸ್ಕಾರ ನೀಡುವುದರಿಂದ ವಿದ್ಯಾರ್ಥಿಗಳಲ್ಲಿ ಉನ್ನತ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ಸಿಕ್ಕಂತಾಗುತ್ತದೆ ಮತ್ತು ಬಡ ವಿದ್ಯಾರ್ಥಿಗಳಿಗೆ ಅಥವಾ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡುವುದರಿಂದ ಅವರ ಶಿಕ್ಷಣಕ್ಕೆ ಅನುಕೂಲವಾಗಲಿದೆ. ಇದನ್ನು ಮನಗಂಡ ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಪ್ರತಿ ವರ್ಷ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಸಬೇಕೆಂದು ತೀರ್ಮಾನಿಸಲಾಗಿದೆ ಅದರಂತೆ ಈ ವರ್ಷ ಸುಮಾರು 300 ಜನ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ನೀಡಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಎಂಎಸ್ ಭದ್ರಯ್ಯ ತಿಳಿಸಿದರು.
ದಿವ್ಯ ಸಾನಿಧ್ಯವನ್ನು ನಂದಿಪುರ ಕ್ಷೇತ್ರದ ಶ್ರೀ ಮಹೇಶ್ವರ ಸ್ವಾಮೀಜಿ, ಶ್ರೀಧರಗಡ್ಡೆ ವಿರಕ್ತಮಠದ ಕೊಟ್ಟೂರು ಶ್ರೀ ಗಳು ವಹಿಸಿದ್ದರು.
ಸಂಘದ ರಾಜ್ಯಾಧ್ಯಕ್ಷ ಸೋಮಶೇಖರಯ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಉದ್ಯಮಿಗಳಾದ ಡಾ. ಯಶವಂತ್ ಭೋಪಾಲ್, ಎಂಜಿ ಗೌಡ, ಕಣೆಕಲ್ ಮಹಾಂತೇಶ್, ದರೂರು ಶಾಂತನಗೌಡ ಅವರು ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಹಾನಗರ ಪಾಲಿಕೆ ಸದಸ್ಯ ಸುರೇಖಾ ಮಲ್ಲನಗೌಡ, ಜಿಲ್ಲಾ ಪಂಚಾಯತ್ ಯೋಜನಾಧಿಕಾರಿ ವಾಗೀಶ್ ಶಿವಾಚಾರ್ಯ, ಪತ್ರಿ ಬಸಪ್ಪ ವಿಶ್ವನಾಥ್ ಹಿರೇಗೌಡ ದಂಡಿನ ಶಿವಾನಂದ, ಡಾ. ಅರವಿಂದ್ ಪಟೇಲ್ ಕೋರಿ ವಿರೂಪಾಕ್ಷಪ್ಪ, ಅಲ್ಲಮ ಪ್ರಶಾಂತ್, ಸಂಗನಕಲ್ಲು ಬಸವರಾಜ್, ಮಸೀದಿಪುರ ಸಿದ್ದರಾಮನಗೌಡ ಸೇರಿದಂತೆ ಇತರರು ವೇದಿಕೆಯಲ್ಲಿದ್ದರು.
ಉಪನ್ಯಾಸ: ಕಿಷ್ಕಿಂದ ವಿಶ್ವವಿದ್ಯಾಲಯದ ಡೀನ್ ಡಾ. ಎಸ್. ಮಂಜುನಾಥ್ ಅವರು, ಎಸ್ ಎಸ್ ಎಲ್ ಸಿ- ಪಿಯುಸಿ ನಂತರ ಮುಂದೇನು ಎಂಬ ವಿಷಯದ ಬಗ್ಗೆ ವಿಶೇಷ ಉಪನ್ಯಾಸವನ್ನು ನೀಡಿದರು.
ಕಾರ್ಯಕ್ರಮದಲ್ಲಿ ಸಂಘದ ಗೌರವಾಧ್ಯಕ್ಷ ಎಚ್.ಎಮ್. ಚನ್ನಬಸವ ಸ್ವಾಮಿ, ಕೋಶಾಧ್ಯಕ್ಷ ಕೋಳೂರು ವೆಂಕಟೇಶ ಗೌಡ, ಪ್ರಧಾನ ಕಾರ್ಯದರ್ಶಿ ಬಿಸಿಲಹಳ್ಳಿ ಬಸವರಾಜ್ ಸೇರಿದಂತೆ ಕಾರ್ಯಕಾರಿಣಿ ಸಮಿತಿ ಸದಸ್ಯರು, ಸಂಘದ ಸದಸ್ಯರು, ವೀರಶೈವ ಲಿಂಗಾಯತ ಸಮಾಜ ಬಂದುಗಳು ಇದ್ದರು.
ಈ ಸಂದರ್ಭದಲ್ಲಿ 300ಕ್ಕೂ ಹೆಚ್ಚು 10ನೇ ತರಗತಿ ಮತ್ತು ಪಿಯುಸಿಯಲ್ಲಿ ಶೇಕಡಾ 85 ಕ್ಕಿಂತಲೂ ಹೆಚ್ಚು ಅಂಕ ಗಳಿಸಿದ ವೀರಶೈವ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
The post ವಿದ್ಯಾರ್ಥಿಗಳು ಮೊಬೈಲ್ ಬಿಟ್ಟು ಪುಸ್ತಕ ಹಿಡಿದುಕೊಳ್ಳಿ – ಶ್ರೀ ನಿರಂಜನ ಪ್ರಭು ಸ್ವಾಮೀಜಿ appeared first on Karnataka Kahale.
]]>The post ಒಳಮೀಸಲಾತಿ ಜಾತಿ ಸಮೀಕ್ಷೆ ತಾಂತ್ರಿಕ ತೊಂದರೆಗಳನ್ನು ನಿವಾರಿಸಿ ಪಾರದರ್ಶಕವಾಗಿ ನಡೆಸಿ -ವಿ ರಾಮಾಂಜನೇಯ ಮನವಿ appeared first on Karnataka Kahale.
]]>
ಬಳ್ಳಾರಿ, ಮೇ 13 : ನಿವೃತ್ತ ನ್ಯಾಯಾಧೀಶರಾದ ಹೆಚ್.ಎನ್.ನಾಗಮೋಹನ್ ದಾಸ್ ನೇತೃತ್ವದಲ್ಲಿ ಏಕಸದಸ್ಯ ವಿಚಾರಣಾ ಆಯೋಗದ ಅಡಿಯಲ್ಲಿ ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿ ಕಲ್ಪಿಸಲು ನಡೆಸುತ್ತಿರುವ ಜಾತಿ ಗಣತಿ ಸಮೀಕ್ಷೆಯಲ್ಲಿ ಹಲವು ತಾಂತ್ರಿಕ ತೊಡಕುಗಳು ಕಂಡುಬರುತ್ತಿವೆ, ಅವುಗಳನ್ನು ಶೀಘ್ರವೇ ನಿವಾರಿಸಿ ಒಳಮೀಸಲಾತಿಯ ಸಮೀಕ್ಷೆಯನ್ನು ಪಾರದರ್ಶಕವಾಗಿ ಕೈಗೊಂಡು ಅರ್ಹರಿಗೆ ಮೀಸಲಾತಿಯನ್ನು ಕಲ್ಪಿಸಬೇಕು ಎಂದು ಬಳ್ಳಾರಿ ಜಿಲ್ಲಾ ಬೋವಿ ವಡ್ಡರ ಸಂಘದ ಜಿಲ್ಲಾಧ್ಯಕ್ಷ ವಿ ರಾಮಾಂಜನೇಯ ಸಮೀಕ್ಷಾ ತಂಡಕ್ಕೆ ಮನವಿ ಮಾಡಿದರು.
ಅವರು ಮಂಗಳವಾರ ನಗರದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿ ಮಾತನಾಡಿದರು. ಸಮೀಕ್ಷೆಯ ಕಾರ್ಯಕ್ಕೆ ನಿಯೋಜಿತಾರಾಗಿರುವ ಶಿಕ್ಷಕ ಸಿಬ್ಬಂದಿಗಳಿಗೆ ಕೇವಲ ಮೂರು ಗಂಟೆಗಳ ಕಾಲ ತರಬೇತಿ ನೀಡಲಾಗಿದೆ. ಹಾಗಾಗಿ ಪರಿಣಾಮಕಾರಿಯಾಗಿ ಸಮೀಕ್ಷೆ ನಡೆಸಲು ಅವರಿಗೆ ಸಾಧ್ಯವಾಗುತ್ತಿಲ್ಲ, ಸಮೀಕ್ಷಾ ನಡೆಸುತ್ತಿರುವ ಸಿಬ್ಬಂದಿಗಳಿಗೆ ಮೊತ್ತೊಮ್ಮೆ ಒಂದುದಿನದ ಪೂರ್ಣಾವಧಿ ತರಬೇತಿ ಅಗತ್ಯತೆ ಇರುತ್ತದೆ ಸಮೀಕ್ಷೆಯಲ್ಲಿ ಬಳಸಲಾಗುತ್ತಿರುವ ಪ್ರಶ್ನಾವಳಿಗಳು ಕ್ಲಿಷ್ಟವಾಗಿರುವುದರಿಂದ ಈ ತಳಮಟ್ಟದ ಸಮುದಾಯಗಳ ಜನರಾದ ಪರಿಶಿಷ್ಟ ಜಾತಿ ಸಮುದಾಯಗಳ ಜನರ ಶೈಕ್ಷಣಿಕ ಮಟ್ಟವು ಕಡಿಮೆ ಇದ್ದು ಅವರಿಗೆ ಅರ್ಥವಾಗುವ ರೀತಿಯಲ್ಲಿ ಪ್ರಶ್ನೆಗಳನ್ನು ವಿವರಿಸುವ ಅಗತ್ಯತೆ ಇದೆ. ಹಾಗಾಗಿ ಸದರಿ ಸಮೀಕ್ಷೆಯಲ್ಲಿ ತಪ್ಪು ಮಾಹಿತಿ ಸಂಗ್ರಹವಾಗುವ ಅಪಾಯವಿದೆ ಎಂದು ರಾಮಾಂಜನೇಯ ಆತಂಕವನ್ನು ವ್ಯಕ್ತಪಡಿಸಿದರು. ಮೇ 5 ರಿಂದ 17ರ ವರೆಗೆ ನಡೆಯಲಿರುವ ಜಾತಿ ಸಮೀಕ್ಷೆಯನ್ನು ಗಡುವಿನಲ್ಲಿ ಮುಗಿಸುವುದಕ್ಕೆ ಕಷ್ಟ ಎನ್ನಲಾಗುತ್ತದೆ. ಕಾರಣ ಮೊಬೈಲ್ಅಪ್ಲಿಕೇಷನ್ ಮೂಲಕ ಸಮೀಕ್ಷೆ ನಡೆಸಲಾಗುತ್ತಿದ್ದು ಆದರೆ ಅಪ್ಲಿಕೇಷನ್ ನಲ್ಲಿ ಸಾಕಷ್ಟು ತಾಂತ್ರಿಕ ತೊಂದರೆ ಕಾಣಿಸಿಕೊಳ್ಳುತ್ತಿವೆ. ಬೆಳಗೆ, 8:00 ರಿಂದ ಸಂಜೆ 6:00ರವರೆಗೆ ಸಮೀಕ್ಷೆಗೆ ಸಮಯ ನಿಗಧಿಪಡಿಸಲಾಗಿದೆ. ಆದರೆ ಮೊಬೈಲ್ ಅಪ್ಲಿಕೇಷನ್ ನಲ್ಲಿ ನೆಟವರ್ಕ್ ಸಮಸ್ಯೆಯಿಂದ ತಡವಾಗುತಿದೆ. ಪರಿಶಿಷ್ಟ ಜಾತಿಯ ಗಣತಿ ಸಮೀಕ್ಷೆಯಲ್ಲಿ 42 ಪ್ರಶ್ನಾವಳಿಗೆ ಉತ್ತರ ಪಡೆದು ಮಾಹತಿ ಅಪ್ ಲೋಡ್ ಮಾಡಬೇಕಾಗಿ ಇರುವುದರಿಂದ ವಿನಾ ಕಾರಣ ವಿಳಂಭವಾಗುತ್ತಿದೆ. ಹಳ್ಳಿಯಲ್ಲಿ ಇಂಟರ್ನೆಟ್ ನೆಟ್ವರ್ಕ್ ಸಮಸ್ಯೆ ಇರುತ್ತದೆ ಎಂದರು.
ಒಂದು ಕುಟುಂಬದ ಸಮೀಕ್ಷೆಗೆ ಅರ್ಧಗಂಟೆ, ಕೆಲವು ಸಮಯದಲ್ಲಿ ಒಂದು ಗಂಟೆ ಬೇಕಾಗಬಹುದು ಹೀಗಾಗಿ ಒಂದು ದಿನಕ್ಕೆ 5 ರಿಂದ 10 ಕುಟುಂಬಗಳ ಸಮೀಕ್ಷೆ
ನಡೆಸಲಷ್ಟೇ ಸಾಧ್ಯವಾಗುತ್ತದೆ. ಸಮೀಕ್ಷೆಗೆ ನೀಡಿರುವ ಅಲ್ಪಾವಧಿಯಲ್ಲಿ ನೀಡಿರುವ ಮನೆಗಳ ಸಮೀಕ್ಷೆ ನಡೆಸುವುದು ಕಷ್ಟ ಸಾಧ್ಯವಾಗಿದ್ದು, ಮುಕ್ತಾಗೊಳಿಸಲು ಸಾಧ್ಯವಾಗದೇ ಇರಬಹುದು. ಹಾಗಾಗಿ ಇನ್ನಷ್ಟು ದಿನಗಳ ಕಾಲಾವಕಾಶ ನೀಡಿ ಪಾರದರ್ಶಕವಾಗಿ ಸಮೀಕ್ಷೆ ಕೈಗೊಳ್ಳಲು ಅವಕಾಶ ನೀಡಬೇಕೆಂದು ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸುವಂತೆ ಜಿಲ್ಲಾಧಿಕಾರಿಗಳಿಗೆ
ಮನವಿ ಪತ್ರವನ್ನು ನೀಡಿ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಂಘದ ಕೋಶಾಧ್ಯಕ್ಷರಾದ ಟಿವಿ ವೆಂಕಟೇಶ, ನಗರ ಅಧ್ಯಕ್ಷ ತಮ್ಮಣ್ಣ, ಆರ್ ವಿ ಪ್ರಕಾಶ್,
ಗೋನಾಳ್ ಹುಲುಗಪ್ಪ, ಶೇಷಣ್ಣ, ಮಹಿಳಾ ಜಿಲ್ಲಾಧ್ಯಕ್ಷರಾದ ಎಲ್ಲಮ್ಮ, ವಿ ರಾಘವೇಂದ್ರ ಸೋಮಸಮುದ್ರ, ಗುಡುದೂರ್ ಹನುಮಂತ, ಜಿಲ್ಲಾ ಯುವ ಅಧ್ಯಕ್ಷರು,
ಎಂ ಪಿ ರಾಜೇಶ್, ದಿವಾಕರ್ ಬಾಬು, ಸಂಗನಕಲ್ ರಾಘವೇಂದ್ರ ಅಂದ್ರಾಲ್ ಹುಲಗಪ್ಪ, ಗುಡುದೂರ್ ಶ್ರೀನಿವಾಸ್, ಸಂಗನಕಲ್ಲ ರಾಮುಡು, ಪ್ರವಾಲಿಕ ಸೇರಿದಂತೆ ಇತರರಿದ್ದರು.
The post ಒಳಮೀಸಲಾತಿ ಜಾತಿ ಸಮೀಕ್ಷೆ ತಾಂತ್ರಿಕ ತೊಂದರೆಗಳನ್ನು ನಿವಾರಿಸಿ ಪಾರದರ್ಶಕವಾಗಿ ನಡೆಸಿ -ವಿ ರಾಮಾಂಜನೇಯ ಮನವಿ appeared first on Karnataka Kahale.
]]>