ಜೂ. 1, ‘ಕರ್ನಾಟಕ ಕಹಳೆ ಸಾಹಿತ್ಯ ಬಳಗ’ ದ ಹೆಮ್ಮೆಯ ಕವಿ ಮಹೇಂದ್ರ ಕುರ್ಡಿ ಅವರ ಜನ್ಮದಿನ. ಈ ಹಿನ್ನಲೆಯಲ್ಲಿ ಕುರ್ಡಿ ಅವರ ಭವ ಸಾಗರ ಕವಿತೆ ಪ್ರಕಟಿಸುವ ಮೂಲಕ ಕರ್ನಾಟಕ ಕಹಳೆ ಡಾಟ್ ಕಾಮ್ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರುತ್ತಿದೆ.
(ಸಂಪಾದಕ)
ಭವ ಸಾಗರ
ಭವದಿ ಹುಟ್ಟಿ ಬಂದು
ಬವಣೆಗಳ ಮೆಟ್ಟಿ ನಿಂದು
ಭವ ಸಾಗರವ ಈಜುತ್ತ
ಬದುಕು ಸಾಗುತಿಹುದು ಇಂದು .
ಬಂಗಾರದ ನಾಡಿನ ಬಂಧುವಾಗಿ
ಬರಹದಲ್ಲಿ ನಿತ್ಯ ಮಗ್ನನಾಗಿ
ಬರುವ ಆಲೋಚನೆಗಳ ಅಳೆದು ತೂಗಿ
ಬರೆದೆ ಅದನು ಹೊನ್ನುಡಿಯಾಗಿ .
ಬಡತನ ಸಿರಿತನ ಎಣಿಸದೆ
ಬಾಳುವೆ ಜಾತಿ ಧರ್ಮಗಳೆನ್ನದೆ
ಭಾರತದೊಳು ಭಾವೈಕ್ಯತೆ ಬಿತ್ತುವೆನೆಂಬ
ಭರವಸೆಯಲ್ಲಿ ನಡೆವೆ ಹಗಲಿರುಳೆನ್ನದೆ.
ಬಾಳೊಂದು ಸುಂದರ ವನ
ಬಳಲಿಸದಿರಿ ಹೆತ್ತವರ ಕೊನೆತನ
ಬಂಧುಗಳೆನ್ನಿ ಮನುಜ ಜೀವಿಗಳನ್ನ
ಬಾಳೋಣ ಸಂತೋಷದಿ ಅನುದಿನ.
✍️ಡಾ. ಮಹೇಂದ್ರ ಕುರ್ಡಿ, ಹಟ್ಟಿ ಚಿನ್ನದ ಗಣಿ