ಮೋಕಾ ಆರೋಗ್ಯ ಕೇಂದ್ರದಲ್ಲಿ ವಿಶ್ವ ತಂಬಾಕು ರಹಿತ ದಿನಾಚರಣೆ: ಆರೋಗ್ಯ ವ್ಯಕ್ತಿಯಿಂದ ಆರೋಗ್ಯ ಸಮಾಜ -ಡಾ. ಭಾರತಿ

ಬಳ್ಳಾರಿ ಜೂ.೨: ಆರೋಗ್ಯ ವ್ಯಕ್ತಿಯಿಂದ ಆರೋಗ್ಯ ಸಮಾಜ ಸೃಷ್ಟಿಯಾಗುತ್ತದೆ ಎಂದು ತಾಲೂಕು ಆರೋಗ್ಯ ಅಧಿಕಾರಿ ಡಾ.‌ ಸಿ. ಭಾರತಿ ಅವರು ಹೇಳಿದರು.                            ತಾಲೂಕಿನ ಮೋಕ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾ ಆಡಳಿತ ಜಿಲ್ಲಾ ಪಂಚಾಯತ್, ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಳ್ಳಾರಿ, ಜಿಲ್ಲಾ ಅಸಾಂಕ್ರಾಮಿಕ ರೋಗಗಳ ಘಟಕ, ಬಳ್ಳಾರಿ, ಸಮುದಾಯ ಅರೋಗ್ಯ ಕೇಂದ್ರ ಮೋಕಾದಲ್ಲಿ  ವಿಶ್ವ ತಂಬಾಕು ರಹಿತ ದಿನ ಪ್ರಯುಕ್ತ ಜಾಗೃತಿ ಕಾರ್ಯಕ್ರಮದಲ್ಲಿ ಸಸಿಗೆ ನೀರು ಹಾಕುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.                                          ತಂಬಾಕು ಬಳಕೆಯಿಂದ ನಾನಾ ರೀತಿಯ ಕಾಯಿಲೆಗಳು ಬರುತ್ತವೆ. ಇಂದಿನ ಯುವಕರಲ್ಲಿ ಗುಟ್ಕಾ, ಸಿಗರೇಟ್ ಬಳಕೆಯಿಂದ ಕ್ಯಾನ್ಸರ್ ಗೆ ತುತ್ತಾಗುತ್ತಿದ್ದಾರೆ. ಕೆಟ್ಟ ಚಟಗಳಿಗೆ ಬಲಿಯಾಗದೆ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಯುವಕರು ಮುಂದಾಗಬೇಕೆಂದು ಎಂದು ತಿಳಿಸಿದರು.

1987ರಿಂದ ವಿಶ್ವ ಸಂಸ್ಥೆ ತಂಬಾಕು ಬಳಕೆಯ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ತಂಬಾಕು‌ ಬಳಕೆಯಿಂದ  ಕ್ಯಾನ್ಸರ್ ಗೆ ತುತ್ತಾಗುತ್ತಾರೆ. ಅಗಿಯುವ ಹಾಗು ಸೇದುವ ತಂಬಾಕಿನಿಂದ ಕ್ಯಾನ್ಸರ್ ಖಚಿತವಾಗಿ ಬರುತ್ತದೆ ಎಂದು ಖುರ್ಷಿದ ಬೇಗಂ ತಮ್ಮ ಪ್ರಾಸ್ತಾವಿಕ ಮಾತುಗಳಲ್ಲಿ ಹೇಳಿದರು.            ಹಿರಿಯ ದಂತ ವೈದ್ಯ ಡಾ ಅರ್ಜುಮುನ್ನಿಸ ಅವರು ಬಾಯಿ ಕ್ಯಾನ್ಸರ್‌ಗೆ ಕಾರಣ ಹಾಗು  ಆರೋಗ್ಯಕರ ಅಭ್ಯಾಸಗಳ ಬಗ್ಗೆ ಮಾಹಿತಿ ನೀಡಿದರು.                                      ತಂಬಾಕು ಜೊತೆಗೆ ನಶೆ ಪುಡಿಯನ್ನು ಹಳ್ಳಿ ಹೆಣ್ಣುಮಕ್ಕಳು ಬಳಸುತ್ತಾರೆ ಅದರಿಂದ ಸಹ ಬಾಯಿ ಕ್ಯಾನ್ಸರ್ ಬರುತ್ತದೆ ಎಂದರು.                                                ಬಾಯಿಯಲ್ಲಿ ತುಂಬಾ ಸಮಯದವರೆಗೆ ಏನಾದರು ಗಾಯಗಳಗಿದ್ದಲ್ಲಿ ತಕ್ಷಣ ವೈ ದ್ಯರ ಹತ್ತಿರ ತಪಾಸಣೆ ಮಾಡಿಸಿ, ಅರೋಗ್ಯ ಕಾಪಾಡಿ ಎಂದು ಸಂಪೂರ್ಣ ಮಾಹಿತಿ ನೀಡಿದರು,

ಕಾರ್ಯಕ್ರಮದಲ್ಲಿ ನರ್ಸಿಂಗ್ ಅಧಿಕಾರಿಗಳಾದ ಉಷಾ ರಾಣಿ, ಸಮುದಾಯ ಆರೋಗ್ಯ ಅಧಿಕಾರಿ ತ್ರಿಪುನ್ ಕುಮಾರ್, ಅಸಾಂಕ್ರಾಮಿಕ ಘಟಕದ ಜೈಕುಮಾರ್, ಪದ್ಮಾವತಿ, ಹನುಮ ಗೌಡ, ಯುವರಾಜ್, ಅರೋಗ್ಯ ನಿರೀಕ್ಷಣಾ ಅಧಿಕಾರಿ ಮಲ್ಲಿ ಗೌಡ ಸಾರ್ವಜನಿಕರು ಉಪಸ್ಥಿತರಿದ್ದರು.