ನನಗೆ ನದಿಯಾಗಬೇಕಿನಿಸಿತು
ಗುಡ್ಡಗವ್ವರ ನೋಡಿ ಬದಿಗೆ ಸರಿದೆ.
ನನಗೆ ಬೆಟ್ಟವಾಗಬೇಕೆನಿಸಿತು
ನಿಂತಲ್ಲೇ ನಿಂತ ಪರಿಯ ಕಂಡು ಬೇಡವೆನಿಸಿತು.
ನನಗೆ ಸಾಗರವಾಗಬೇಕೆನಿಸಿತು
ಉಪ್ಪು ನೀರಾಗುವ ಏಕ ರುಚಿ ಹಿಡಿಸದಾಯಿತು.
ಏನೂ ಬೇಡವೆಂದು
ಮನುಷ್ಯನಾಗಬೇಕೆಂದಿದ್ದೇನೆ
ಮನುಷ್ಯತ್ವ ಹುಡುಕಿ ನಿಮ್ಮೊಂದಿಗೆ
ಮುಖಾಮುಖಿಯಾಗಿದ್ದೇನೆ.

– ಡಾ. ಪ್ರಕಾಶ ಖಾಡೆ, ಬಾಗಲಕೋಟೆ
