ಬಳ್ಳಾರಿ, ಜೂ. 1 : ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ನಂದಿಪುರ ಕ್ಷೇತ್ರದ ಶ್ರೀ ಶ್ರೀ ಚರಂತಪ್ಪಜ್ಜ ಮಹಾಸ್ವಾಮಿಗಳ 21ನೇ ಪುಣ್ಯಸ್ಮನೋತ್ಸವ ಕಾರ್ಯಕ್ರಮವನ್ನು ಪ್ರಪ್ರಥಮವಾಗಿ ಜೂ. 4 ರಂದು ಬಳ್ಳಾರಿ ಬಸವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಡಾ. ಮಹೇಶ್ವರ ಸ್ವಾಮಿಗಳು ಪುಣ್ಯಕ್ಷೇತ್ರ ನಂದಿಪುರ ಮಠ ಅವರು ತಿಳಿಸಿದರು.
ಅವರು ಭಾನುವಾರ ನಗರದ ಶ್ರೀ ಸಕ್ಕರೆ ಕರಡೆಪ್ಪ ಚೌಕಿಯಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಅಂದು ಬುಧವಾರ ಮುಂಜಾನೆ ಎಂಟು ಗಂಟೆಗೆ ನಗರದ ಕನಕದುರ್ಗಮ್ಮ ದೇವಸ್ಥಾನದಿಂದ ಕಾರ್ಯಕ್ರಮ ನಡೆಯುವ ಪಾರ್ವತಿ ನಗರದಲ್ಲಿರುವ ಬಸವ ಭವನದ ವರೆಗೆ ನಂದಿಕೋಲು, ಡೋಲು ಡೊಳ್ಳು, ಕಳಶ, ಕುಂಭ, ಸ್ತಬ್ದ ಚಿತ್ರ ಸಕಲ ಮಂಗಳವಾದ್ಯಗಳೊಂದಿಗೆ ಶ್ರೀ ಉಜ್ಜಯಿನಿ ಸ್ವಾಮೀಜಿಗಳ ಸಾನಿಧ್ಯದಲ್ಲಿ ಸಕಲ ಹರಗುರು ಚರಮೂರ್ತಿಗಳ ನೇತೃತ್ವದಲ್ಲಿ ಶ್ರೀ ರೇಣುಕಾಚಾರ್ಯ ಮತ್ತು ಬಸವಣ್ಣ ಅವರ ಭಾವಚಿತ್ರದೊಂದಿಗೆ ಪರಮಪೂಜ್ಯ ಶ್ರೀ ಚರಂತಾಪ್ಪಜ್ಜ ಮಹಾಸ್ವಾಮಿಗಳ ಭಾವಚಿತ್ರದ ಭವ್ಯ ಮೆರವಣಿಗೆಯನ್ನು ನಡೆಸಲಾಗುವುದು ಎಂದರು.
ಈ ಮೆರವಣಿಗೆಯನ್ನು ಗುರು ಚರಂತಾರ್ಯ ಮಹಾಸ್ವಾಮಿಗಳ ಸ್ವರ್ಣೋಸ್ತವ ಸೇವಾ ಸಮಿತಿಯ ಅಧ್ಯಕ್ಷರಾದ ಎಬಿ ಬಸವರಾಜ್ ಉದ್ಘಾಟಿಸುವರು.
ನಂತರ ವೇದಿಕೆ ಕಾರ್ಯಕ್ರಮದಲ್ಲಿ ಕಾರ್ಯಕ್ರಮದ ಕುರಿತು ಸಿದ್ದರಾಮ ಕಲ್ಮಠ ಪ್ರಸ್ತಾವಿಕ ನುಡಿಗಳನ್ನು, ಬಿಚಗಲ್ ಪಂಚಾಕ್ಷರಪ್ಪ ಸ್ವಾಗತ ನುಡಿಯನ್ನು ಮತ್ತು ಬಂಡರಾಳ್ ಮೃತ್ಯುಂಜಯ ಸ್ವಾಮಿ ಅಮಾತಿ ಬಸವರಾಜ್ ರಾಜಶ್ರೀ ಪಾಟೀಲ್ ಸವಿತಾ ಸೋನಾಲಿ ಉಮಾದೇವಿ ಇವರುಗಳು ನಿರೂಪಣೆಯನ್ನು ನಡೆಸಿಕೊಡುವರು ಎಂದು ವಿವರಿಸಿದರು.
ಕಲ್ಯಾಣ ಸ್ವಾಮಿಮಠದ ಶ್ರೀ ಕಲ್ಯಾಣ ಸ್ವಾಮೀಜಿ ಮಾತನಾಡಿ, ಬೆಂಗಳೂರಿನ
ಡಾ. ಎನ್ ಶಿವಮೂರ್ತಿ ಅವರು ರಚಿಸಿದ ದಿವ್ಯ ಪ್ರಕಾಶ, ಮತ್ತು ಎಸ್ ವಿ ಪಾಟೀಲ್ ಗುಂಡೂರು ಅವರ ‘ನಡೆದಾಡುವ ದೇವರು’ ದಿವ್ಯ ದರ್ಶನ ಭಾಗ ಒಂದು ಮತ್ತು ಎರಡರ ಅಭಿಪ್ರಾಯಗಳ ಸಂಗ್ರಹ ಕೃತಿ ಲೋಕಾರ್ಪಣೆ ಮಾಡಲಾಗುವುದು. ಈ ಕಾರ್ಯಕ್ರಮದಲ್ಲಿ ಪ್ರಧಾನ ಸಂಪಾದಕರಾದ ಭಿಕ್ಷಾವರ್ತಿ ಮಠ ಹರಿಹರ, ಎಸ್ ಪಾಟೀಲ್ ಗುಂಡೂರು ಉಪಸ್ಥಿತರಿರುವರು.
ಪ್ರಶಸ್ತಿ ಪ್ರದಾನ: ಇದೇ ಸಂದರ್ಭದಲ್ಲಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸಿ ಸಾಧನೆ ಮಾಡಿದ 11 ಹಿರಿಯ ಸಾಧಕರಿಗೆ ಗುರು ಚರಂತಾರ್ಯ ಶ್ರೀ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುದು ಎಂದರು.
ಶ್ರೀ ಜಂಗಮ ಹೊಸಹಳ್ಳಿ ಶ್ರೀಗಳು ಮಾತನಾಡಿ, ಸುಮಾರು ಐದನೂರಕ್ಕೂ ಹೆಚ್ಚು ಕೃತಿಗಳನ್ನು ರಚಿಸಿರುವ ಗಂಗಾವತಿಯ ಸಾಹಿತಿ ಎಸ್ವಿ ಪಾಟೀಲ್ ಗುಂಡೂರು ಅವರ ಹಲವು ಪುಸ್ತಕ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ವಿಎಸ್ಕೆ ವಿವಿಯ ಕುಲ ಸಚಿವರಾದ ಎಸ್. ಎನ್ ರುದ್ರೇಶ್ ಅವರು ಪುಸ್ತಕ ಪ್ರದರ್ಶನ ಮಳಿಗೆಗಳನ್ನು ಉದ್ಘಾಟಿಸುವರು ಎಂದುಹೇಳಿದರು.
ಬಸವಭವನದ ಆವರಣದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸಿದ್ದು ಈ ಕಾರ್ಯಕ್ರಮದಲ್ಲಿ ರಕ್ತದಾನ ಹೃದಯ ಎಲುಬು ಕೀಲು ದಂತ ನೇತ್ರ ಶ್ರೀ ರೋಗ ಹಾಗೂ ಚರ್ಮರೋಗ ಸೇರಿದಂತೆ ಹಲವು ರೋಗಗಳನ್ನು ತಪಾಸಣೆ ಮಾಡಿ ಉಚಿತವಾಗಿ ಔಷಧಗಳನ್ನು ನೀಡಲಾಗುವುದು ಎಂದು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಶ್ರೀ ಶಂಭುಲಿಂಗ ಸ್ವಾಮಿ, ನಿವೃತ್ತ ಪ್ರಾಂಶುಪಾಲರಾದ ಜಯಪ್ರಕಾಶ್, ಮೆಟ್ರಿ ಮೃತ್ಯುಂಜಯ, ಯರಿಸ್ವಾಮಿ, ಬಿಚ್ಚುಗಲ್ ಪಂಚಾಕ್ಷರಪ್ಪ, ಎಚ್ ಕೆ ಗೌರಿಶಂಕರ್, ಕೊಳೂರ ಚಂದ್ರಶೇಖರ್ ಗೌಡ, ಮಹಾಲಿಂಗಯ್ಯ, ದುರ್ಗೇಶ್ ಉಪ್ಪಾರ್ ಸೇರಿದಂತೆ ಹಲವು ಮುಖಂಡರು ಇದ್ದರು.
—–