Warning: session_start(): Cannot start session when headers already sent in /home/karnatak/public_html/wp-content/plugins/the-visitor-counter/classes/class.widget.php on line 10

Warning: Cannot modify header information - headers already sent by (output started at /home/karnatak/public_html/wp-content/plugins/free-comments-for-wordpress-vuukle/free-comments-for-wordpress-vuukle.php:1) in /home/karnatak/public_html/wp-content/plugins/post-views-counter/includes/class-counter.php on line 1734
ಕರ್ನಾಟಕ ಗ್ರಾಮೀಣ ಬ್ಯಾಂಕಿನ ನಿವೃತ್ತ ಮುಖ್ಯ‌ ಪ್ರಬಂಧಕ ಬಿ ಎಂ ಕಾಂತಿಮಣಿ‌ ವಿಧಿವಶ - Karnataka Kahale

ಕರ್ನಾಟಕ ಗ್ರಾಮೀಣ ಬ್ಯಾಂಕಿನ ನಿವೃತ್ತ ಮುಖ್ಯ‌ ಪ್ರಬಂಧಕ ಬಿ ಎಂ ಕಾಂತಿಮಣಿ‌ ವಿಧಿವಶ

ಬಳ್ಳಾರಿ, ಜ.10: ಕರ್ನಾಟಕ ಗ್ರಾಮೀಣ ಬ್ಯಾಂಕಿನ ನಿವೃತ್ತ ಮುಖ್ಯ‌ ಪ್ರಬಂಧಕ ಬಿ ಎಂ ಕಾಂತಿಮಣಿ‌(67) ಅವರು ಬುಧವಾರ ಸಂಜೆ ಬೆಂಗಳೂರಿನ ತಮ್ಮ ನಿವಾಸದಲ್ಲಿ‌ ಹೃದಯಾಘಾತದಿಂದ ನಿಧನರಾಗಿದ್ದಾರೆ.


ಮೃತರು ಪತ್ನಿ, ಮೂವರು ಪುತ್ರರು ಸೇರಿದಂತೆ ಅಪಾರ‌ ಬಂಧು ಮಿತ್ರರನ್ನು ಅಗಲಿದ್ದಾರೆ.
ಗುರುವಾರ ಮಧ್ಯಾಹ್ನ ಎರಡು‌ ಗಂಟೆಗೆ ಹುಟ್ಟೂರು ಬೀದರಿನ ಬಿವಿಬಿ ಕಾಲೇಜು ಎದುರು ಇರುವ ರುದ್ರಭೂಮಿಯಲ್ಲಿ ಅಂತಿಮ ಸಂಸ್ಕಾರ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಕರ್ನಾಟಕ (ತುಂಗಭದ್ರಾ) ಗ್ರಾಮೀಣ ಬ್ಯಾಂಕಿನಲ್ಲಿ 35 ವರ್ಷಗಳ ಕಾಲ ಉತ್ತಮ ಕಾರ್ಯನಿರ್ವಹಿಸಿರುವ ಕಾಂತಿಮಣಿ ಅವರು ಬಳ್ಳಾರಿಯ ಬಸವೇಶ್ವರ ನಗರದಲ್ಲಿ ದಶಕಗಳ ಕಾಲ ವಾಸವಾಗಿದ್ದರು.
ಸಂತಾಪ: ಬಿ ಎಂ ಕಾಂತಿಮಣಿ ಅವರ ನಿಧನಕ್ಕೆ ಕರ್ನಾಟಕ ಗ್ರಾಮೀಣ ಬ್ಯಾಂಕಿನ ಸಹೋದ್ಯೋಗಿಗಳು, ವಿವಿಧ ಸಂಘಟನೆಗಳ ಮುಖಂಡರು ಸಂತಾಪ ವ್ಯಕ್ತಪಡಿಸಿದ್ದಾರೆ. ಬ್ಯಾಂಕಿನ ನಿವೃತ್ತ ರಿಜಿನಲ್ ಮ್ಯಾನೇಜರ್, ಹಿರಿಯ ಸಾಹಿತಿ ಡಾ.‌ವೆಂಕಟಯ್ಯ ಅಪ್ಪಗೆರೆ, ನಿವೃತ್ತ ವ್ಯವಸ್ಥಾಪಕ ಗಾಳೆಪ್ಪ, ಸಿಂಡಿಕೇಟ್ ಬ್ಯಾಂಕಿನ ನಿವೃತ್ತ ವ್ಯವಸ್ಥಾಪಕ ಬಸವರಾಜ ಅಮೀನಗಢ, ಗುಲ್ಬರ್ಗಾ ವಿವಿ ಮಾಜಿ ಸೆನೆಟ್ ಸದಸ್ಯ ಸಿ.ಮಂಜುನಾಥ್, ಬಿಎಸ್ ಐ ಬಳ್ಳಾರಿ ಜಿಲ್ಲಾ ಘಟಕದ ಮಾಜಿ ಪ್ರಧಾನ ಕಾರ್ಯದರ್ಶಿ ಡಾ.‌ಲಕ್ಕಿ ಪೃಥ್ವಿರಾಜ್‌ ಅವರು ಕಾಂತಿಮಣಿ ಅವರ ಅಕಾಲಿಕ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.
——