ಅನುದಿನ ಕವನ-೧೭೯೮, ಕವಯತ್ರಿ:ಕಾವ್ಯಶ್ರೀ, ಬೆಂಗಳೂರು

ಜೀವ ಉಳಿಸುವ
ಒಂದು ಗುಟುಕು

ದಾಹ ತೀರಿಸುವ
ಒಂದು ಹನಿ

ಮುಳುಗಲೀಯದೆ ತೇಲಿಸುವ
ಆ ಒಂದು ಹುಲ್ಲು ಕಡ್ಡಿ

ಸುಳ್ಳಾದರೂ ಸರಿಯೇ ಒಂದೇ
ಒಂದು ಮಾತು ಕೊಡು

ಬಿಗಿಯಾಗಬೇಕು ಬಂಧ
ಒಂದು ನೂಲು ಕೊಡು
ಗೂಡ ನೇಯಬೇಕು
ಅದರೊಳಗು ಬೆಳಗಬೇಕು
ನಿನ್ನ ಕಣ್ಣಮಿಂಚ
ಒಂದು ಕ್ಷಣ ಕಡಕೊಡು


-ಕಾವ್ಯಶ್ರೀ, ಬೆಂಗಳೂರು