ಅನುದಿನ ಕವನ-೧೫೮೨, ಹಿರಿಯ ಕವಯಿತ್ರಿ: ಸವಿತಾ ನಾಗಭೂಷಣ, ಶಿವಮೊಗ್ಗ, ಕವನದ ಶೀರ್ಷಿಕೆ:ಬಸವ ಜಯಂತಿ

ಬಸವ ಜಯಂತಿ

ಕದ್ದು ಕೊಂದು ಹುಸಿಯ ನುಡಿದು
ಪರರ ಜರಿದು ನುರಿದು ನುಂಗಿ
ತನ್ನ ಬಣ್ಣಿಸಿ ಪರರ ಹಂಗಿಸಿ
ನಡೆ ನುಡಿಯ ಭಂಗಿಸಿ ಬಾಳಿದರೂ

ವರ್ಷಕ್ಕೊಮ್ಮೆ ಹರುಷದಿಂದ
ಪರುಷವಂದು ಕೊಂಡಾಡಿ
ಹೂವಿಡುವೆ ಪೊಡಮಡುವೆ!

-ಸವಿತಾ ನಾಗಭೂಷಣ, ಶಿವಮೊಗ್ಗ
—–