ಅನುದಿನ ಕವನ-೧೮೩೨, ಹಿರಿಯ ಕವಿ: ಮಹಿಮ, ಬಳ್ಳಾರಿ

ನೀನಂದುಕೊಂಡ ಹಾಗೆ
ನಾನಂದುಕೊಂಡ ಹಾಗೆ
ಬದುಕು ಸಾಗುವುದಿಲ್ಲ,

ಬದುಕು ಸಾಗುವ ಹಾದಿಯಲ್ಲಿಯಲ್ಲಿಯೇ ನಾವು ಸಾಗಬೇಕು,

ಬದುಕೆಂಬ ಸುನಾಮಿಯ ಚಿತ್ತ
ಎತ್ತ ವಾಲುವುದೇನೋ,

ಹಣೆಬರಹವೋ
ವಿಧಿಬರಹವೋ
ಮನಗಳ ತಾಕಲಾಟವೋ
ಮನಗಳ ಬಯಕೆಗಳೋ
ಏನೋ ಏನೇನೋ

ಹೆಸರುಗಳು ಸಾವಿರಾರು,
ಅರ್ಥವಾಗದ ಪಯಣವೀ
ಬದುಕು

-ಮಹಿಮ, ಬಳ್ಳಾರಿ
—–