ಅನುದಿನ ಕವನ-೧೯೦೮, ಕವಿ: ಸ್ನೇಹಪ್ರಿಯ ನಾಗರಾಜ್, ಬೆಂಗಳೂರು

ಮಾ.21 ವಿಶ್ವ ಕಾವ್ಯದ ದಿನ: ಕಾವ್ಯದ ದಿನಾಚರಣೆ ಹಿನ್ನಲೆಯಲ್ಲಿ ಕವಿ ಸ್ನೇಹಪ್ರಿಯ ನಾಗರಾಜ್ ಅವರು ರಚಿಸಿರುವ ಒಂದಷ್ಟು ಚುಟುಕುಗಳು…..ಹನಿ ಪ್ರಿಯರಿಗಾಗಿ!🍀🍀👇

೧ ಅವಳ ತುಂಟ ನಗು
ಎಲ್ಲರಿಗೂ ಸಿಗುತ್ತದೆ
ಎಂದಾಗ..
ಮೈ ತುಂಬ ಬೆಂಕಿ
ಮನಸ್ಸು ತಟಸ್ಥ

೨ ಪ್ರೇಮ ಮೊಗೆದಷ್ಟು
ಆಳ ಅನಾಹುತ
ಚಂಚಲ ಮನಸ್ಸು
ನುಡಿಸುವುದಿಲ್ಲ
ಸಂಗೀತ..

೩ ಅವಳು
ಆಳಕ್ಕಿಳಿಯುವ
ಮೊದಲು
ಕಿತ್ತೊಗೆಯಬೇಕು
ನಲಿವ
ಮನಸ್ಥಿತಿಗೆ
ಮರಳಬೇಕು..

೪ ಅವಳ ಜೊತೆ
ಹುಷಾರಾಗಿರು
ಮೋಹಪಾಶದಿಂದ
ನರಕ
ತೋರಿಸಿ ಬಿಟ್ಟಾಳು..


-ಸ್ನೇಹಪ್ರಿಯ ನಾಗರಾಜ್, ಬೆಂಗಳೂರು