ನಾಟಕ ಸಮಾಜದ ಪ್ರತಿಬಿಂಬ -ಪ್ರೊ. ನೆಲ್ಲಿಕಟ್ಟೆ ಎಸ್ ಸಿದ್ದೇಶ್

 

ಭರಮಸಾಗರ(ಚಿತ್ರದುರ್ಗ), ಮಾ. 21:  ಸಮಾಜದ ಪ್ರತಿಬಿಂಬವಾಗಿರುವ ನಾಟಕ ಸಾಹಿತ್ಯ, ಸಂಗೀತ ಮತ್ತು ಅಭಿನಯದ ಸಂಗಮ ಎಂದು ಕುವೆಂಪು ವಿಶ್ವವಿದ್ಯಾಲಯದ ಕನ್ನಡ ಭಾರತಿ ವಿಭಾಗದ ನಿರ್ದೇಶಕ, ಸಾಹಿತಿ ಪ್ರೊ. ನೆಲ್ಲಿಕಟ್ಟೆ ಎಸ್ ಸಿದ್ದೇಶ್ ಅವರು ಅಭಿಪ್ರಾಯಪಟ್ಟರು.
ಪಟ್ಟಣ ಸಮೀಪದ ನೆಲ್ಲಿಕಟ್ಟೆ ಗ್ರಾಮದಲ್ಲಿ ಏರ್ಪಡಿಸಿದ್ದ ‘ಪ್ರೀತಿಯ ಹೃದಯಕ್ಕೆ ಪ್ರೇಮದ ಸಿಡಿಲು’ ಎಂಬ ಸಾಮಾಜಿಕ ನಾಟಕ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನೆಲ್ಲಿಕಟ್ಟೆ ಗ್ರಾಮದ ಯುವಕರು ನಾಟಕದ ಪಾತ್ರಧಾರಿಗಳು ಆಗಿ ಅಭಿನಯಿಸಿರುವುದಕ್ಕೆ ಅಭಿನಂದನೆಗಳು ಸಲ್ಲಿಸಿ ನಾಟಕಗಳನ್ನು ಅಭಿನಯಿಸುವ ಮೂಲಕ ಗ್ರಾಮದಲ್ಲಿ ಸಾಮರಸ್ಯ ಮತ್ತು ಸೌಹಾರ್ದತೆ ಕಾಪಾಡಲು ಸಾಧ್ಯ ಎಂದು ಹೇಳಿದರು.
ನೆಲ್ಲಿಕಟ್ಟೆ ಗ್ರಾಮ ಕಲೆ ಸಾಹಿತ್ಯ ಸಂಗೀತದ ತಾಣ. ಈ ಊರಿಗೆ ಅಪೂರ್ವವಾದ ಇತಿಹಾಸವಿದೆ ಎಂದರು.
ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಎಚ್.ಎನ್. ತಿಪ್ಪೇಸ್ವಾಮಿ, ತಾಲ್ಲೂಕು ಪಂಚಾಯಿತಿ ಸದಸ್ಯ ಟಿ.ಜಿ.ಶೇಖರಪ್ಪ, ಗ್ರಾಮ ಪಂಚಾಯಿತಿ ಸದಸ್ಯ ನಾಗರಾಜ್, ನಿರಂಜನ ಮೂರ್ತಿ, ಜಯಪ್ಪ, ಟಿ. ಎಸ್ ಗುರುಮೂರ್ತಿ, ರುದ್ರಣ್ಣ, ಚೌಡಪ್ಪ ಮೊದಲದವರು ಉಪಸ್ಥಿತರಿದ್ದರು.
ಡಾ ಸಿ ಎಂ.ನಾಗವೇಣಿ ನಿರೂಪಿಸಿದರು. ನಾಟಕದ ವ್ಯವಸ್ಥಾಪಕ ಕೆ.ಟಿ. ನಾಗರಾಜ್ ಸ್ವಾಗತಿಸಿದರು . ಶರಣಪ್ಪ ವಂದಿಸಿದರು.
ನೆಲಗತಲಹಟ್ಟಿ ದೊಡ್ಡ ಬೋರಯ್ಯ ಮತ್ತು ಸಂಗಡಿಗರು ವಾದ್ಯ ವೃಂದ ನಿರ್ವಹಿಸಿದರು.