Warning: session_start(): Cannot start session when headers already sent in /home/karnatak/public_html/wp-content/plugins/the-visitor-counter/classes/class.widget.php on line 10

Warning: Cannot modify header information - headers already sent by (output started at /home/karnatak/public_html/wp-content/plugins/free-comments-for-wordpress-vuukle/free-comments-for-wordpress-vuukle.php:1) in /home/karnatak/public_html/wp-content/plugins/post-views-counter/includes/class-counter.php on line 1734
ಅನುದಿನ ಕವನ-೬೮೪, ಕವಯತ್ರಿ:ಧರಣೀಪ್ರಿಯೆ, ದಾವಣಗೆರೆ, ಕವನದ ಶೀರ್ಷಿಕೆ: ತಾಯಿ(ಮುಕ್ತಕಗಳು) - Karnataka Kahale

ಅನುದಿನ ಕವನ-೬೮೪, ಕವಯತ್ರಿ:ಧರಣೀಪ್ರಿಯೆ, ದಾವಣಗೆರೆ, ಕವನದ ಶೀರ್ಷಿಕೆ: ತಾಯಿ(ಮುಕ್ತಕಗಳು)

ತಾಯಿ

ಮನೆಯಲ್ಲಿ ಮಗುವಿರಲು ಸಂತಸವು ತುಂಬಿರಲು
ದಿನವುರುಳಿ ನಗುನಗುತ ಚಿಂತೆಮರೆತು
ಮನದಲ್ಲಿ ಉಲ್ಲಾಸ ಮಗುವಿನಾ ತುಂಟಾಟ
ಮನೆಯಲ್ಲ ಕಳೆಹೊಂದಿ-ಧರಣಿದೇವಿ||

ಮಗುವನ್ನು ನೋಡುತಲಿ ಮಮತೆಯನು ತೋರುತಲಿ
ಸೊಗಸಾದ ಅನುಭವವ ತಾಯಿಪಡೆದು
ಮಿಗಿಲಿಲ್ಲ ಕಂದನಿಗೆ ಪ್ರಪಂಚ ನೀನೆನುತ
ಮುಗಿಲನ್ನೆಮುಟ್ಟಿರಲುಧರಣಿದೇವಿ||

ತಾಯ್ತನದ ಸುಖವದುವೆ ಹೆಣ್ಣಿನಲಿ ಮನೆಮಾಡಿ
ಕಾಯಕದಿ ಮೈಮರೆತು ದಿನಪೂರವು
ಕಾಯುವಳು ಕಂದನನು ಮಡಿಲಲ್ಲಿ ಪೋಷಿಸುತ
ನೋಯುತಲಿ ಬೇಯುತಲಿ-ಧರಣಿದೇವಿ||

ಮಗುವಿನಾ ಪಾಲನೆಗೆ ತನ್ನನ್ನೆ ಮುಡುಪಿಟ್ಟು
ಸಿಗುತಿರುವ ಸಣ್ಣಖುಷಿ ಮನಸಿನಿಂದ
ಬಿಗಿದಪ್ಪಿ ಒಳಗೊಳಗೆ ದು:ಖವನು ತಾನಂಗಿ
ಮಗುವನ್ನು ಮುದ್ದಿಸಲು-ಧರಣಿದೇವಿ||

ಬೆಳೆಸುತಲಿ ತಿಳಿಸುತಲಿ ಜಗದಲ್ಲಿ ಬಾಳುವುದ
ಕಲಿಸುತಲಿ ಬಳಿಯಿರಲು ಸಹಕರಿಸುತ
ಸಲಹೆಗಳ ನೀಡುತಲಿ ಬೇಕಾದ ಸಮಯದಲಿ
ನಲಿಯುತಲಿ ಸಂತಸದಿ ಧರಣಿದೇವಿ||

-ಧರಣೀಪ್ರಿಯೆ, ದಾವಣಗೆರೆ
*****