Warning: session_start(): Cannot start session when headers already sent in /home/karnatak/public_html/wp-content/plugins/the-visitor-counter/classes/class.widget.php on line 10

Warning: Cannot modify header information - headers already sent by (output started at /home/karnatak/public_html/wp-content/plugins/free-comments-for-wordpress-vuukle/free-comments-for-wordpress-vuukle.php:1) in /home/karnatak/public_html/wp-content/plugins/post-views-counter/includes/class-counter.php on line 1734
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ: ಪುರುಷರಂತೆ ಮಹಿಳೆಯರು ಎಲ್ಲಾ ರಂಗಗಳಲ್ಲೂ ಮುಂದು -ಸಾಹಿತಿ ಕಾರ್ತಿಕ ಆಚಾರ್ಯ - Karnataka Kahale

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ: ಪುರುಷರಂತೆ ಮಹಿಳೆಯರು ಎಲ್ಲಾ ರಂಗಗಳಲ್ಲೂ ಮುಂದು -ಸಾಹಿತಿ ಕಾರ್ತಿಕ ಆಚಾರ್ಯ

ಹೂವಿನ ಹಡಗಲಿ, ಮಾ.11:ಪ್ರಸ್ತುತ ದಿನಮಾನಗಳಲ್ಲಿ ಪುರುಷರಂತೆ ಮಹಿಳೆಯರು ಎಲ್ಲಾ ರಂಗದಲ್ಲೂ ಮುಂಚೂಣಿಯಲ್ಲಿದ್ದಾರೆ ಎಂದು ಸಾಹಿತಿ ದಾವಣಗೆರೆಯ ಕಾರ್ತಿಕ ಆಚಾರ್ಯ ಎಂ.ಕಲ್ಲಹಳ್ಳಿ ಅವರು ತಿಳಿಸಿದರು.

ಪಟ್ಟಣದ ಕರ್ನಾಟಕ ರಾಜ್ಯ ಸಾಹಿತ್ಯ ಸಾಂಸ್ಕೃತಿಕ ಟ್ರಸ್ಟ್ (ರಿ) ಶನಿವಾರ ಸಮೀಪದ ನಾಗತಿ ಬಸಾಪುರ ಗ್ರಾಮದ ” ಜ್ಞಾನ ಭಾರತಿ ಶಾಲೆ ” ಯಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ
“ಸಾಧಕರೊಂದಿಗೆ ನಾವು ನೀವು” ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಪ್ರತಿ ಕ್ಷೇತ್ರದಲ್ಲೂ ಸಾಕಷ್ಟು ಸಾಧನೆ ಮಾಡಿದ ಮಹಿಳಾ ಸಾಧಕಿಯರು ಇದ್ದಾರೆ. ಇವರಿಗೆ ಸೂಕ್ತ ಪ್ರೋತ್ಸಾಹ, ಗೌರವ ದೊರೆಯಬೇಕು ಎಂದು ಹೇಳಿದರು.
ಹೆಣ್ಣು ಎಲ್ಲಿ ಪೂಜೆಗೊಳ್ಳುತ್ತಾಳೋ ಅಲ್ಲಿ ಗೌರವಿಸಲ್ಪಡುತ್ತಾಳೋ ಅಲ್ಲಿ ದೇವತೆಗಳು ನೆಲೆಸಿರುತ್ತಾರೆ ಎಂದು ವೇದಗಳು ಹೇಳುತ್ತವೆ ಆದರೆ ಆಧುನಿಕ ಕಾಲಘಟ್ಟದಲ್ಲಿ ದೌರ್ಜನ್ಯ, ಶೋಷಣೆಗಳಿಂದ ಸಂಕಷ್ಟ ಅನುಭವಿಸುತ್ತಿದ್ದಾಳೆ ಎಂದು ವಿಷಾಧಿಸಿದರು.
ಡಾ. ಕೊಟ್ರಮ್ಮ ಅವರು ಕಾರ್ಯಕ್ರಮ ಉದ್ಘಾಟಿಸಿದರು.
ಅಧ್ಯಕ್ಷತೆವಹಿಸಿದ್ದ ಶ್ರೀಮತಿ ಶೋಭಾ ಮಲ್ಕಿ ಒಡೆಯರ್ ಅವರು ಮಾತನಾಡಿದರು.


ರಾಜ್ಯ ಪ್ರಶಸ್ತಿ ಪುರಸ್ಕೃತ ಗಾಯಕ ಎಲ್. ಮೂರ್ತಿ ನಾಯಕ್ ಅವರು ಜಾನಪದ ಗೀತೆಗಳನ್ನು ಹಾಡಿ ಗಮನ ಸೆಳೆದರು.
ಸನ್ಮಾನ: ಇದೇ ಸಂದರ್ಭದಲ್ಲಿ ಡಾ. ಹೆಚ್. ಕೊಟ್ರಮ್ಮ ಅವರನ್ನು ಕರ್ನಾಟಕ ರಾಜ್ಯ ಸಾಹಿತ್ಯ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು. ಹೆಚ್. ಎಮ್. ಗೌರಮ್ಮ ಮಲ್ಲಿನಾಥ್ ಅವರು ಸನ್ಮಾನಿತರನ್ನು ಪರಿಚಯಿಸಿದರು.
ಕಾರ್ಯಕ್ರಮದಲ್ಲಿ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಎಸ್. ಹೆಚ್. ಮಹೇಶ್, ಗೌರವ ಅಧ್ಯಕ್ಷ, ಹಿರಿಯ ಸಾಹಿತಿ ಪ್ರಕಾಶ್ ಮಲ್ಕಿ ಒಡೆಯರ್, ಅಧ್ಯಕ್ಷ ಬಿ. ಎಮ್. ದೊಡ್ಡಬಸಯ್ಯ, ಉಪಾಧ್ಯಕ್ಷ ಎಚ್. ಎಂ. ಕೊಟ್ರಯ್ಯ, ಶಿಕ್ಷಕ ಹಾಲೇಶ್ ಹಕ್ಕಂಡಿ ಮತ್ತಿತರರು ಉಪಸ್ಥಿತರಿದ್ದರು.


ಶಾಲೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು.ಗೌರಮ್ಮ ಮಲ್ಲಿನಾಥ್ ಅವರು ಸ್ವಾಗತಿಸಿದರು. ನಯನ ಮಲ್ಲಿನಾಥ ನಿರೂಪಿಸಿದರು. ಹೆಚ್.ಎಂ.
ಗೌರಮ್ಮ ಮಲ್ಲಿನಾಥ್ ಅವರ ಜನ್ಮದಿನದ ಪ್ರಯುಕ್ತ ಶಾಲಾ ಮಕ್ಕಳಿಗೆ ಮತ್ತು ಸಭಿಕರಿಗೆ ಸಿಹಿ ಹಂಚಲಾಯಿತು.
*****