Warning: session_start(): Cannot start session when headers already sent in /home/karnatak/public_html/wp-content/plugins/the-visitor-counter/classes/class.widget.php on line 10

Warning: Cannot modify header information - headers already sent by (output started at /home/karnatak/public_html/wp-content/plugins/free-comments-for-wordpress-vuukle/free-comments-for-wordpress-vuukle.php:1) in /home/karnatak/public_html/wp-content/plugins/post-views-counter/includes/class-counter.php on line 1734
ವಿಪರೀತ ಹೊಗೆ ಉಗುಳುವ ಹೂವಿನಹಡಗಲಿ ಸಾರಿಗೆ ಬಸ್ - Karnataka Kahale

ವಿಪರೀತ ಹೊಗೆ ಉಗುಳುವ ಹೂವಿನಹಡಗಲಿ ಸಾರಿಗೆ ಬಸ್

ವಿಪರೀತ ಹೊಗೆ ಉಗುಳುವ ಹೂವಿನಹಡಗಲಿ ಸಾರಿಗೆ ಬಸ್

ಸಾರ್ವಜನಿಕರ ಆರೋಗ್ಯ ಹಿತದೃಷ್ಟಿಯಿಂದ ಸರಕಾರ ವಾಯುಮಾಲಿನ್ಯ ನಿಯಂತ್ರಣ ಕಾಯಿದೆ ತಂದಿದೆ. ಆದರೆ ಇದು ಖಾಸಗಿ ವಾಹನಗಳಿಗೆ ಮಾತ್ರ ಅನ್ವಯ ಸರಕಾರಿ ವಾಹನಗಳಿಗೆ ಅನ್ವಯವಾಗುವುದಿಲ್ಲ ಎಂಬಂತಾಗಿದೆ.
ಖಾಸಗಿ ವಾಹನಗಳು ವಾಯು ಮಾಲಿನ್ಯ ತಪಾಷಣೆ ಮಾಡಿಸದಿದ್ದರೆ ತಡೆದು ಫೈನ್ ಹಾಕುವ ಪೊಲೀಸ್ ಅಧಿಕಾರಿಗಳಿಗೆ ಇಂತಹ ಸರಕಾರಿ ವಾಹನಗಳು ಕಣ್ಣಿಗೆ ಬೀಳುತ್ತಿಲ್ಲವೇನೊ ಎನ್ನುವ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತದೆ.
ಹೂವಿನಹಡಗಲಿ ಘಟಕದ ಈ ಬಸ್ ಹೂವಿನಹಡಗಲಿ ಯಿಂದ ರಾಣೆಬೆನ್ನೂರಿಗೆ ಸಂಚರಿಸುತ್ತಿದೆ. ಈ ವಾಹನ ಉಗುಳುವ ವಿಪರೀತ ಹೊಗೆಯಿಂದಾಗಿ ಹಿಂದೆ ಪ್ರಯಾಣಿಸುವ ಪ್ರಯಾಣಿಕರಿಗೆ ಉಸಿರುಕಟ್ಟಿದಂತಾಗುತ್ತದೆ. ಆದರೂ ಇದನ್ನು ಚಲಾಯಿಸುವ ಚಾಲಕ ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತಂದಿಲ್ಲವೆಂದು ಕಾಣುತ್ತೆ. ಒಂದು ವೇಳೆ ಚಾಲಕ ಘಟಕದ ವ್ಯವಸ್ಥಾಪಕರಿಗೆ ತಿಳಿಸಿದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರಬಹುದು.
ಈ ಬಗ್ಗೆ ಘಟಕದ ವ್ಯವಸ್ಥಾಪಕ ವೆಂಕಟಾಚಲಪತಿ ಅವರಿಗೆ ಕರೆಮಾಡಿ ಮಾತನಾಡಿದಾಗ ಅವರು ಕೂಡಲೇ ಬಸ್ ಮರಳಿ ಬರುತ್ತಲೆ ತಪಾಸಣೆ ಮಾಡಿಸುವುದಾಗಿ ತಿಳಿಸಿದ್ದು, ಕೂಡಲೇ  ಬಸ್ಸು ಹೊಗೆ ಉಗುಳುವುದನ್ನು ತಪ್ಪಿಸಲಿ.

-ಹೆಚ್.ಸುಭಾಸಚಂದ್ರ
ಸಾಹಿತಿ ಹಾಗೂ ಪತ್ರಕರ್ತರು
ಹೊಳಲು
—–