ಅನುದಿನ ಕವನ-೧೩೯೨, ಕವಿ: ಸಿದ್ದು ಜನ್ನೂರ್, ಚಾಮರಾಜನಗರ

ಸ್ವರ್ಗದ ಮಹಲು
ನಿನ್ನ ಮಡಿಲು
ತಾಯಿ ಒಡಲು
ಸುಖದ ನೆಳಲು
ಹೊತ್ತು ಹೆತ್ತು ನಗುವ
ಸಾಕಿ ಸಲಹಿ ನಡೆವ
ತ್ಯಾಗದ ಕಡಲು ತಾಯಿಯ ಮಡಿಲು…

ಜೀವಕೆ ಜೀವ ಕೊಟ್ಟು
ಉಸಿರಿಗೆ ಉಸಿರ ಬಸಿದು
ಕಾಯೋ ಒಂದೆ ಜೀವ
ತಾಯಿ ಅನ್ನೋ ದೈವ
ಕಷ್ಟ ನಷ್ಟ ತೊಟ್ಟು
ಪ್ರೀತಿ ಹರಕೆ ಹೊಸೆದು
ನಮ್ಮ ಕಾಯ್ವ ಜೀವ
ತಾಯಿ ಅನ್ನೋ ದೈವ
ಮಿತಿ ಇಲ್ಲದ ಕರುಣೆ…ತೋರುವ ಧರಣಿ…
ತಾಯಿ ಒಬ್ಬಳೇ ಅಕ್ಕರೆಯ ಜನನಿ…


-ಸಿದ್ದು ಜನ್ನೂರ್, ಚಾಮರಾಜನಗರ
—–

Leave a Reply

Your email address will not be published. Required fields are marked *