ಶಿಕ್ಷಣ ಮಿತ್ರ-ಹಂಪಿ ಟೈಮ್ಸ್: ಅಪರೂಪದ ಸಂಪಾದಕ ಬಸಾಪುರ ಬಸವರಾಜ್ -ಮಹಿಮ, ನಿವೃತ್ತ ಡಿಡಿಪಿಐ, ಬಳ್ಳಾರಿ

 

ಬಸವರಾಜ್ ಬಸಾಪುರ

ಹಂಪಿ ಟೈಮ್ಸ್ ದಿನಪತ್ರಿಕೆ ಎರಡು ವಸಂತಗಳನ್ನು ಯಶಸ್ವಿಯಾಗಿ ಪೂರೈಸಿ ಮೂರನೇ ವಸಂತಕ್ಕೆ ಪಾದಾರ್ಪಣೆ ಮಾಡಿದೆ..
ಈ ಪತ್ರಿಕೆಯ ಸಂಪಾದಕರಾದ ಬಸಾಪುರ ಬಸವರಾಜ್ ರವರು ಓರ್ವ ಶಿಕ್ಷಣ ಪ್ರೇಮಿ..
ಆದ್ಯತೆಯಲ್ಲಿ ವಿದ್ಯಾರ್ಥಿಗಳಿಗೆ ಉಪಯುಕ್ತವಾಗುವ ಮಾಹಿತಿಗಳನ್ನು ಅವರು ಪತ್ರಿಕೆಯಲ್ಲಿ ಪ್ರಕಟಿಸುತ್ತಾ ಬಂದಿದ್ದಾರೆ..
ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಅವರು ಪತ್ರಿಕೆಯಲ್ಲಿ ನೀಡಿದ ನೋಟ್ಸ್ ಗಳು ಶಾಲಾ ಮಕ್ಕಳ ಕಲಿಕೆಯಲ್ಲಿ ಪರಿಣಾಮಕಾರಿಯಾಗಿ ಸಹಾಯ ಮಾಡಿವೆ.

ಬಸವರಾಜ್ ರವರು ಒಮ್ಮೆ ನನ್ನ ಜೊತೆ ಮಾತನಾಡುವಾಗ
“ಶಿಕ್ಷಣ ಕ್ಷೇತ್ರ ಸಬಲೀಕರಣಗೊಳ್ಳಬೇಕು,ಮಕ್ಕಳು ಪ್ರತಿಭಾವಂತರಾಗಬೇಕು..ಮಕ್ಕಳು ಪರೀಕ್ಷೆಗಳಲ್ಲಿ ಹೆಚ್ಚು ಅಂಕಗಳನ್ನು ಗಳಿಸಬೇಕು,ಶಿಕ್ಷಕರು ಮಕ್ಕಳ ಕಲಿಕೆಗೆ ಬೆನ್ನೆಲುಬಾಗಿ ನಿಲ್ಲಬೇಕು..ನನಗೆ ಬಹಳಷ್ಟು ಶಿಕ್ಷಕರು ನೋಟ್ಸ್ ಗಳನ್ನು ಪತ್ರಿಕೆಗೆ ನೀಡಿ ಮಕ್ಕಳಿಗೆ ಉತ್ತಮ ಮಾರ್ಗದರ್ಶನ ಮಾಡಿದ್ದಾರೆ..ಅವರಿಗೆ ನನ್ನ ಕೃತಜ್ಞತೆಗಳು..ಇದು ನನ್ನ ಪತ್ರಿಕೆ ಅಲ್ಲ ,,ಇದು ನಮ್ಮೆಲ್ಲರ ಪತ್ರಿಕೆ. ಶಿಕ್ಷಣ ಕ್ಷೇತ್ರಕ್ಕೆ ನನ್ನ ಕೈಲಾದ ಕೊಡುಗೆ ಇದು..” ಎಂದು ಹೇಳಿದಾಗ ನನಗೆ ಅವರ ಬಗ್ಗೆ ಹೆಮ್ಮೆ ಅನಿಸಿತು..
ಯಾವುದೇ ಹಮ್ಮು ಬಿಮ್ಮುಗಳಿಲ್ಲದ ವ್ಯಕ್ತಿತ್ವ ಬಸವರಾಜ್ ಅವರದು‌‌..
ಇಂತಹ ಮನಸ್ಥಿತಿಯವರು ಬಹಳ ವಿರಳ ,ಇಂಥವರು ಬೆಳೆಯಬೇಕು..
ಹಂಪಿ ಟೈಮ್ಸ್ ಪತ್ರಿಕೆಯು ಎಸ್ ಎಸ್ ಎಲ್ ಸಿ ಮಕ್ಕಳಿಗೆ ಉತ್ತಮ ಮಾರ್ಗದರ್ಶನ ನೀಡಿ ವಿಜಯನಗರ ಜಿಲ್ಲೆ ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ 19 ನೇ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಮಹತ್ತರವಾದ ಪಾತ್ರ ವಹಿಸಿದೆ ಎಂದು ಹೇಳಲು ನನಗೆ ಹೆಮ್ಮೆಯಾಗುತ್ತಿದೆ..
ಕೇವಲ ಶಿಕ್ಷಣ ಕ್ಷೇತ್ರವಲ್ಲದೇ ವಿವಿಧ ರಂಗಗಳ ಬಗ್ಗೆ ಸವಿಸ್ತಾರವಾದ ವರದಿಗಳನ್ನು ನಾವು ಹಂಪಿ ಟೈಮ್ಸ್ ನಲ್ಲಿ ಕಾಣಬಹುದು..
ಶಿಕ್ಷಣ ಕ್ಷೇತ್ರದ ಬಗ್ಗೆ ಅಪಾರ ಕಾಳಜಿ ಹೊಂದಿದ ಬಸವರಾಜ್ ನೇತೃತ್ವದ ಹಂಪಿ ಟೈಮ್ಸ್ ದಿನ ಪತ್ರಿಕೆ ನಾಡಿನಾದ್ಯಾಂತ ಹೆಸರು ಮಾಡಲಿ..
ವಿದ್ಯಾರ್ಥಿಗಳ ಬಾಳನ್ನು ಬೆಳಗಲಿ..
ಬಸವರಾಜ್ ರವರಿಗೆ ಈ ಶುಭ ಸಂದರ್ಭದಲ್ಲಿ ನನ್ನ ಶುಭ ಹಾರೈಕೆಗಳು..


-ಮಲ್ಲಿಕಾರ್ಜುನ ಸ್ವಾಮಿ ಹಿರೇಮಠ(ಮಹಿಮ)ನಿವೃತ್ತ ಡಿಡಿಪಿಐ, ಬಳ್ಳಾರಿ