ಮಾನ್ವಿಯ ಪಕ್ಷಿ ಪ್ರೇಮಿ  ಸಲಾವುದ್ದಿನ್ ಅವರಿಗೆ ಇಂದಿರಾ ಪ್ರಿಯದರ್ಶಿನಿ ಪರಿಸರ ಪಕ್ಷಿ ಸಂರಕ್ಷಕ ಪ್ರಶಸ್ತಿ ಪ್ರದಾನ: ಅಭಿನಂದನೆ


ಬಳ್ಳಾರಿ, ಅ.10:ಪರಿಸರ ಜಾಗೃತಿಯನ್ನು ಉತ್ತೇಜಿಸುವ ಮತ್ತು ಮಾಲಿನ್ಯ ಮುಕ್ತ ಕರ್ನಾಟಕ ನಿರ್ಮಾಣದ ಗುರಿಯ ಸಾರುವಲ್ಲಿ ಮಾನ್ವಿ ಹಾಗೂ ಸುತ್ತಮುತ್ತ ಸುಮಾರು 13 ವರ್ಷಗಳಿಂದ ಪಕ್ಷಿ ಸಂಕುಲದ ಉಳಿವಿಗಾಗಿ ಪಕ್ಷಿಗಳಿಗಾಗಿ ಹಗಲಿರುಳೆನ್ನದೆ ತಮ್ಮದೇ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಮಾನ್ವಿಯ ಪಕ್ಷಿ ಪ್ರೇಮಿ  ಸಲಾವುದ್ದಿನ್ ಅವರಿಗೆ ಇಂದಿರಾ ಪ್ರಿಯದರ್ಶಿನಿ ಪರಿಸರ ಪಕ್ಷಿ ಸಂರಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ನಗರದ ಸರಕಾರಿ ಪದವಿ ಪೂರ್ವ(ಮಾ ಪು) ಕಾಲೇಜು ಮೈದಾನದಲ್ಲಿ ಶುಕ್ರವಾರ ಜರುಗಿದ  ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ 50ನೇ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಸಲಾವುದ್ದಿನ್ ಅವರಿಗೆ ಅರಣ್ಯ ಇಲಾಖೆ ಜೀವಿ ಪರಿಸ್ಥಿತಿ ಮತ್ತು ಪರಿಸರ ಇಲಾಖೆ ಸಚಿವರಾದ  ಈಶ್ವರ್ ಖಂಡ್ರೆ ಮತ್ತು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಾದ  ಪಿ.ಎಂ ನರೇಂದ್ರಸ್ವಾಮಿ ಅವರು “ಇಂದಿರಾ ಪ್ರಿಯದರ್ಶಿನಿ ಪರಿಸರ ಪಕ್ಷಿ ಸಂರಕ್ಷಕ ಪ್ರಶಸ್ತಿ ಪ್ರದಾನ ಮಾಡಿದರು.                     ಅಭಿನಂದನೆ:   ರಾಜ್ಯಮಟ್ಟದ ಇಂದಿರಾ ಪ್ರಿಯದರ್ಶಿನಿ ಪರಿಸರ ಪಕ್ಷಿ ಸಂರಕ್ಷಕ ಪ್ರಶಸ್ತಿ ಪುರಸ್ಕೃತ ಪಕ್ಷಿಪ್ರೇಮಿ ಸಲಾವುದ್ದಿನ್ ಅವರನ್ನು ಗುಲ್ಬರ್ಗಾ ವಿವಿ ಮಾಜಿ ಸೆನೆಟ್ ಸದಸ್ಯ, ಹಿರಿಯ ಪತ್ರಕರ್ತ ಸಿ.ಮಂಜುನಾಥ ಮತ್ತು ಲಿಂಗಸೂರಿನ ಕವಿ, ಗಾಯಕ ಹುಸೇನ್ ಸಾಬ್ ಅವರು ಅಭಿನಂದಿಸಿದ್ದಾರೆ.

Leave a Reply

Your email address will not be published. Required fields are marked *