
ಬಳ್ಳಾರಿ : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಬಳ್ಳಾರಿ ಜಿಲ್ಲಾ ಘಟಕದ ಕಾರ್ಯಕಾರಿಣಿ ಸದಸ್ಯ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಆಯ್ಕೆಯಾದ ಕನ್ನಡ ಪ್ರಭ ಹಿರಿಯ ಛಾಯಾಗ್ರಾಹಕ ಪುರುಷೋತ್ತಮ ಹಂದ್ಯಾಳ್ ಮತ್ತು ಸುವರ್ಣ ನ್ಯೂಸ್ ವಿಡಿಯೋ ಜರ್ನಲಿಸ್ಟ್ ಶ್ರೀನಿವಾಸ ಶೆಟ್ಟಿ ಅವರಿಗೆ ನಗರದ ಕುಬೇರ ಸ್ಟುಡಿಯೋ ಮಾಲಿಕರಾದ ಕುಬೇರ ಮತ್ತು ವೃತ್ತಿಪರ ಛಾಯಾಗ್ರಾಹಕರಾದ ಸಿದ್ದಣ್ಣ,ರವೀಂದ್ರ ಶರ್ಮಾ, ರವಿಕುಮಾರ್ ಯಾದವ್, ಪ್ಯಾನಾಸೋನಿಕ್ ಕುಮಾರ್, ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ, ಟೈಲರ್ ಅಶೋಕ್,ಯುವ ಮುಖಂಡ ವಿಜಯ ಕುಮಾರ್ ಸಂಗನಕಲ್ ಮತ್ತು ಯುಟೂಬರ್ ಅವಿನಾಶ್ ಇದ್ದರು.
