ಅನುದಿನ ಕವನ-೧೯೭೦, ಹಿರಿಯ ಕವಿ: ಎಂ. ಎಸ್. ರುದ್ರೇಶ್ವರಸ್ವಾಮಿ, ಬೆಂಗಳೂರು, ಕವನದ ಶೀರ್ಷಿಕೆ:ಕಪ್ಪು ಹುಡಿಗಿಗೆ….

ಕಪ್ಪು ಹುಡಿಗಿಗೆ….

ಕಪ್ಪು ಹಲಗೆ ವರ್ಣ-
ಮಾಲೆ ಕಲಿಸಿತು.

ವರ್ಣ-ಆಶ್ರಮ ಜಾತಿಯ ವಿಷಬೀಜ
ಬಿತ್ತಿ; ಕಪ್ಪುಜನರ
ದೂರವಿಟ್ಟಿತು.

ಕಪ್ಪುಹಲಗೆಯ ಮೇಲೆ
ಬಿಳಿ ಅಕ್ಷರ ಮೂಡಿತು,
ಎದೆಯೊಳಗೆ
ಬೀಜಬಿದ್ದು ಮೊಳೆಯಿತು

ಅ-ಕ್ಷರದ ಬೇಲಿ-
ಮೇಲೆ ನೂರು ಹೂ…
ಹೂವ ಕಂಪಿಗೆ
ಯಾವ ಜಾತಿ, ಗಂಧ ಸುಗಂಧ
ಬೆರೆತ ರೀತಿ

ಇರುಳಿನಲ್ಲೆ ಚುಕ್ಕಿ
ಚಂದ್ರ, ಹಾಲು ಬೆಳಕ ಕಾಲು ಹಾದಿ…

-ಎಂ.ಎಸ್. ರುದ್ರೇಶ್ವರಸ್ವಾಮಿ, ಬೆಂಗಳೂರು

Leave a Reply

Your email address will not be published. Required fields are marked *