ಅನುದಿನ ಕವನ-೪೮೫, ಕವಯತ್ರಿ- ರಂಹೊ, ತುಮಕೂರು

ತಲೆಮಾರುಗಳ ತಮದ
ಸಂಘರ್ಷಗಳಲ್ಲಿ
ಬೆಳಕೂ ಬೆಂಕಿಯಾಗಿದೆ ಗುರುವೇ…

ನಿಶ್ಯಬ್ದವೆಂಬುದೂ ಸದ್ದೇ ಆಗಿ
ಮಾತುಗಳೆಲ್ಲ ಮುಳ್ಳಾಗಿವೆ
ಸಣ್ಣ ಸಣ್ಣ ತಾವಿನಲ್ಲೂ ಗೋಡೆ ಬೆಳೆದು
ಬರವನ್ನೇ ಬೆಳೆಯುತ್ತಿವೆ!

ಕಾರುಣ್ಯ ನುಡಿದವರ
ಕೊಲೆಗಳಾಗುವ ನೆಲದಲ್ಲಿ
ನೀನು ಹಚ್ಚಿ ಹೋದ ಹಣತೆ
ಉಸಿರ ಬೇಡುತ್ತಿದೆ!

ಕ್ರೌರ್ಯ ಕಾರುಣ್ಯವಾಗಿ
ಪ್ರೀತಿ ಎಲ್ಲರ ಹಾಡಾಗಿ
ಬುದ್ಧ ಬೆಳಕು ಎದೆ ತುಂಬುವ
ಕರುಣಾ ಮೈತ್ರಿ ಮಾರ್ಗಕ್ಕೆ
ಕಾದಿದ್ದೇವೆ !


-ರಂಹೊ, ತುಮಕೂರು
*****

Leave a Reply

Your email address will not be published. Required fields are marked *