ವಿಜಯನಗರ ಎಸ್ಪಿ ಹರಿ ಬಾಬು ಅವರಿಂದ ‘ನಾವೆಲ್ಲಾ‌ ಭಾರತೀಯರು’ ಕ್ಯಾಲೆಂಡರ್ ಬಿಡುಗಡೆ

ವಿಜಯನಗರ (ಹೊಸಪೇಟೆ), ಜ.18: ಸಾಹಿತಿ, ಸಂಶೋಧಕ, ಎಡಿಜಿಪಿ ಎಂ. ನಂಜುಂಡಸ್ವಾಮಿ(ಮನಂ) ಅವರ ಜನಪ್ರಿಯ ‘ನಾವೆಲ್ಲಾ ಭಾರತೀಯರು’ ಘೋಷ ವಾಕ್ಯದ ನೂತನ ವರ್ಷದ ಕ್ಯಾಲೆಂಡರ್ ನ್ನು ವಿಜಯನಗರ ಎಸ್ಪಿ‌ ಬಿ ಎಲ್‌ ಹರಿಬಾಬು ಅವರು ಬಿಡುಗಡೆ ಗೊಳಿಸಿದರು.

ಬೆಂಗಳೂರಿನ ಮನಂ ಅಭಿಮಾನಿ ಬಳಗ ಪ್ರಕಟಿಸಿರುವ ಆಕರ್ಷಕ ‘ನಾವೆಲ್ಲಾ ಭಾರತೀಯರು’ ಕ್ಯಾಲೆಂಡರ್ ನ್ನು ಈಚೆಗೆ ಎಸ್ಪಿ ಅವರು ಬಿಡುಗಡೆಗೊಳಿಸಿ ಸಂತಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಹಂಪಾಪಟ್ಟಣ ಬುದ್ಧ ಬಸವ ಅಂಬೇಡ್ಕರ್ ಯುವಕ ಸಂಘದ ಅಧ್ಯಕ್ಷ ಯೋಗೀಶ್ ಮನಂ, ಬಲಕುಂದಿ ಮಲ್ಲಿಕಾರ್ಜುನ ಉಪಸ್ಥಿತರಿದ್ದರು.
——

Leave a Reply

Your email address will not be published. Required fields are marked *