ಅನುದಿನ‌ ಕವನ-೧೫೭೬, ಕವಿ: ವೈ ಜಿ ಅಶೋಕ‌ ಕುಮಾರ್, ಬೆಂಗಳೂರು

ದಡದಲ್ಲಿ ಮಲಗಿ
ಕನಸುಗಳ
ಪೋಣಿಸುವವರಿಗೆ ಕಾಣುವುದೇನು
ಕಡಲ ನಡುವಿನ
ಹೊಯ್ದಾಟದ
ಬದುಕು

ಹಡಗು ಮುಳುಗಿದ್ದ
ಕಂಡು ಅಂಜಬೇಡ
ದೋಣಿ ತೂತಾಗಿದೆಯೆಂದು ಕೊರಗಬೇಡ

ಅದರಲ್ಲೇ
ಪಯಣಿಸಬೇಕಿದೆ
ಬಹಳಷ್ಟು ದೂರ
ನಾನು ನೀನು

ಎಷ್ಟು ಕೂಡಿಟ್ಟರೂ
ಯಾವ ಗುರುತುಗಳೂ
ನಮಗಾಗಿ ಇಲ್ಲಿ ಉಳಿಯುವುದಿಲ್ಲ


-ವೈ ಜಿ ಅಶೋಕ ಕುಮಾರ್, ಬೆಂಗಳೂರು
—–

Leave a Reply

Your email address will not be published. Required fields are marked *