ಪಲ್ಲವ ವೆಂಕಟೇಶ್ ಅವರಿಗೆ ಮಾತೃ ವಿಯೋಗ

ಬಳ್ಳಾರಿ, ಏ.15: ರಾಯಚೂರಿನ ಮಹರ್ಷಿ ಶ್ರೀ ವಾಲ್ಮೀಕಿ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಡಾ. ಕೆ. ವೆಂಕಟೇಶ್ (ಪಲ್ಲವ ವೆಂಕಟೇಶ್) ಅವರ ತಾಯಿ ಶ್ರೀಮತಿ ಕೆ. ಈರಮ್ಮ ಅವರು ಸಿರುಗುಪ್ಪ ತಾಲೂಕಿನ ಚನ್ನಪಟ್ಟಣ ಗ್ರಾಮದಲ್ಲಿ ಬುಧವಾರ ನಸುಕಿನ ಜಾವ ನಿಧನರಾಗಿದ್ದಾರೆ.
ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಈರಮ್ಮ ಅವರಿಗೆ 88 ವರ್ಷವಾಗಿತ್ತು. ಹಿರಿಯ ಪುತ್ರ ಕೆ. ತಿಪ್ಪೇಸ್ವಾಮಿ ಮತ್ತು ಪುತ್ರಿ ಸಿದ್ಧಲಿಂಗಮ್ಮ ಸೇರಿದಂತೆ ಸೊಸೆಯಂದಿರು, ಅಳಿಯ, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಹದಿನೈದು ವರ್ಷಗಳ ಹಿಂದೆ ಪತಿ, ಗ್ರಾಮದ ಹಿರಿಯ ಮುಖಂಡ ಕೆ. ಸಿದ್ಧಲಿಂಗಪ್ಪ ಅವರು ವಿಧಿವಶವಾಗಿದ್ದಾರೆ.
ಅಪಾರ ಬಂಧು ಬಳಗದ ಸಮ್ಮುಖದಲ್ಲಿ ಮಧ್ಯಾಹ್ನ ಚನ್ನಪಟ್ಟಣದ ರುದ್ರಭೂಮಿಯಲ್ಲಿ ಅಂತಿಮ‌ಸಂಸ್ಕಾರ ನೆರವೇರಿತು.
ಹೊಸಪೇಟೆಯ ಎಎಸ್ಐ ದಳವಾಯಿ ಕೆ. ಮಲ್ಲೇಶಪ್ಪ, ಪ್ರಾಚಾರ್ಯ ಡಾ. ಟಿ. ಎಚ್. ಬಸವರಾಜ್, ಸಹಾಯಕ ಪ್ರಾಧ್ಯಾಪಕರಾದ ಡಾ. ಮಹೇಶ್, ಡಾ.‌ಮಲ್ಲಿಕಾರ್ಜುನ್, ಜಿಂದಾಲ್ ಕೆ.‌ಬಸವರಾಜ್, ಕೃಷ್ಣಮೂರ್ತಿ ಸೇರಿದಂತೆ ಹಲವು ಗಣ್ಯರು ಅಂತಿಮ ನಮನ ಸಲ್ಲಿಸಿದರು.
ಸಂತಾಪ: ಶ್ರೀಮತಿ ಈರಮ್ಮ ಅವರ ನಿಧನಕ್ಕೆ ಗುಲ್ಬರ್ಗಾ ವಿವಿ ಮಾಜಿ ಸೆನೆಟ್ ಸದಸ್ಯ, ಹಿರಿಯ ಪತ್ರಕರ್ತ ಸಿ. ಮಂಜುನಾಥ, ಹಿರಿಯ ಸಾಹಿತಿಗಳಾದ ಡಾ. ವೆಂಕಟಯ್ಯ ಅಪ್ಪಗೆರೆ, ಟಿ.ಕೆ.ಗಂಗಾಧರ ಪತ್ತಾರ್, ರಾಯಚೂರಿನ ಪ್ರಗತಿಪರ ರೈತ ಕೆ.‌ಎಂ ಗೌಡ, ಕುರುಗೋಡಿನ ಕೂನಾ ರಾಘವೇಂದ್ರ, ಪತ್ರಕರ್ತ ಸಿ. ಶಿವಾನಂದ ಮತ್ತಿತರರು ಸಂತಾಪ ವ್ಯಕ್ತಪಡಿಸಿದ್ದಾರೆ. ಹಾಗೂ ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಪ್ರಾರ್ಥಿಸಿದ್ದಾರೆ.

Leave a Reply

Your email address will not be published. Required fields are marked *