ಅನುದಿನ ಕವನ-೧೯೪೪, ಕವಿ: ಶರಣಪ್ಪ ತಳ್ಳಿ ಕುಪ್ಪಿಗುಡ್ಡ, ಕವನದ ಶೀರ್ಷಿಕೆ: ನೆರಳ ವಿರಹ

ನೆರಳ ವಿರಹ

​ಈ ಮುನ್ನ,
ನನ್ನ ಸ್ವಚ್ಛ ನಗುವಿಗೆ
ನೀನು ಮೋಹಿತಳಾಗಿದ್ದೆ
ಇನ್ನೇಕೆ ಹೀಗೆ ಸ್ಥಬ್ಧವಾದೆ?

​ಇಷ್ಟು ದಿನಗಳ ಕಾಲ
ನಗುನಗುತ್ತಾ ಜೊತೆಯಿದ್ದು,
ಅದೆಷ್ಟು ಬೇಗನೆ
ದೂರ ಸರಿದು ಹೋದೆ?

​ಎಷ್ಟು ಸುಂದರವಾಗಿದ್ದವು
ನಾವು ಅಲೆದಾಡಿದ ಆ
ಸ್ಥಳಗಳು,ದಿನಗಳು,
ಅದೆಂಥ ಸನ್ನಿವೇಶ?
ಪ್ರೀತಿಯ ಪಯಣಕ್ಕೆ
ಅದೆಷ್ಟು ತೀವ್ರ ವಿದಾಯ ಹೇಳಿದೆ!

​ಇಷ್ಟು ದಿನಗಳ ಕಾಲ
ನನ್ನೆದೆಯ ಆಳಕ್ಕಿಳಿದು
ಅನಂತತೆಯನ್ನು ತಲುಪಿದ್ದೆ,
ಅದೆಷ್ಟು ಬೇಗನೆ
ನೆನಪಾಗಿ ಅಳಿದುಹೋದೆ?

​ನೀನಿರುವ ತನಕ
ಬಿರು ಬಿಸಿಲೂ ಹೂಬಿಸಿಲಾಗುತ್ತಿತ್ತು…
ಈಗ ಮೃದು ಕನಸುಗಳನ್ನು ತುಳಿದು,
ನಿರ್ಜನ ಹಾದಿಯಲ್ಲಿ ಅದೇಕೆ ಬಿಟ್ಟುಹೋದೆ?

-ಶರಣಪ್ಪ ತಳ್ಳಿ ಕುಪ್ಪಿಗುಡ್ಡ

Leave a Reply

Your email address will not be published. Required fields are marked *