ಅನುದಿನ ಕವನ-೧೦೪೭, ಕವಿ:ಎಂ.ವಿ. ಶಶಿಭೂಷಣ ರಾಜು, ಪೆನ್ಸಿಲ್ವೇನಿಯ, ಅಮೇರಿಕ, ಕವನದ ಶೀರ್ಷಿಕೆ: ದೀಪಾವಳಿ

ದೀಪಾವಳಿ

ದೀಪಗಳೆಂದರೆ ಬರೀ ಬೆಳಕಲ್ಲ
ಜ್ಞಾನದ ಗುರಿಯ ಹಾದಿಯದು
ರೂಪ ಕುರೂಪಗಳ ಭೇದವ ಮೀಟಿ
ಸುಂದರ ಜಗ ತೋರುವ ಜ್ಯೋತಿಯದು

ಸೇರುವ ಜೊತೆಯಲಿ ಬೆಳಗಲು ದೀಪ
ಸಾರಲು ಹರುಷದಿ ಪ್ರೀತಿ ಸ್ವರೂಪ
ಎರಗಲು ಬರುವ ನರಕನ ಭಾವಕೆ
ಸುರಿಯುವ ಅಗ್ನಿಯ ಕುಹುಕದ ಮನಕೆ

ತಣಿಯಲಿ ಮುನಿಸು ಮನಗಳ ನಡುವೆ
ಅರಳಲಿ ಸ್ನೇಹ ಸಿಹಿ ಉಣಿಸಿನಲಿ
ತ್ಯಾಗದ ಅರ್ಥ ಜಗದಲಿ ಪಸರಿಸಿ
ಕ್ಲೇಶಗಳಲೆಲ್ಲವ ಕಳೆಯಲಿ

ಅರಳಲಿ ಹರುಷವು ಎಲ್ಲರ ಬಾಳಲಿ
ಸುರಿಯಲಿ ಸುಮಮಳೆ ಹಾದಿಯಲಿ
ಸರಿಯಲಿ ಕಷ್ಟಗಳೆಲ್ಲವು ಮೂಲೆಗೆ
ತೆರೆಯಲಿ ಎಲ್ಲವು ಹೊಸಜಗಕೆ

-ಎಂ.ವಿ. ಶಶಿಭೂಷಣ ರಾಜು, ಪೆನ್ಸಿಲ್ವೇನಿಯ, ಅಮೇರಿಕ