ಹುಟ್ಟೂರು ಹಂಪಾಪಟ್ಟಣದಲ್ಲಿ ತಿಮ್ಮಪ್ಪ ಪೂಜಾರ್ ಗೆ ಸನ್ಮಾನ

ಹಗರಿಬೊಮ್ಮನಹಳ್ಳಿ, ಜ.13: ಹೆಮ್ಮೆಯ ಇಸ್ರೋ ಸಂಸ್ಥೆಯ ಯಶಸ್ವಿ ಚಂದ್ರಯಾನದಲ್ಲಿ ಭಾಗಿಯಾಗಿದ್ದ ತಾಲೂಕಿನ ಹಂಪಾಪಟ್ಟಣ ಗ್ರಾಮದ ಪೂಜಾರ್ ತಿಮ್ಮಪ್ಪ ಅವರನ್ನು ಆರ್ಯವೈಶ್ಯ ಸಮಾಜ ಸನ್ಮಾನಿಸಿ ಗೌರವಿಸಿತು.
ಗ್ರಾಮದ ನಗರೇಶ್ವರ ದೇವಸ್ಥಾನದಲ್ಲಿ ಆರ್ಯವೈಶ್ಯ ಸಮಾಜ ಆಯೋಜಿಸಿದ್ದ ಸರಳ ಕಾರ್ಯಕ್ರಮದಲ್ಲಿ
ಗ್ರಾಮ ಪುರೋಹಿತರಾದ ಸತ್ಯನಾರಾಯಣ ಜೋಶಿ ಮತ್ತಿತರ ಗಣ್ಯರು ತಿಮ್ಮಪ್ಪ ಪೂಜಾರ್ ಅವರನ್ನು ಸತ್ಕರಿಸಿದರು.
ಪ್ರಧಾನ ಅರ್ಚಕ ಮಧುಸೂಧನ ಜೋಶಿ, ಆರ್ಯವೈಶ್ಯ ಸಂಘದ ಅಧ್ಯಕ್ಷರು, ಕಾರ್ಯದರ್ಶಿ, ಸದಸ್ಯರುಗಳು, ಆರ್ಯವೈಶ್ಯ ಸಂಘ ಯುವಜನ ಸಂಘ ಹಾಗೂ ಆರ್ಯವೈಶ್ಯ ಮಹಿಳಾ ಸಂಘದ ಪದಾಧಿಕಾರಿಗಳು ಹಾಗೂ ಗ್ರಾಮದ ಮುಖಂಡರಾದ ಶಿವನ ಗೌಡ್ರು ಹಾಗೂ ಎಲಿಗಾರ್ ಚರಂತೇಶ್, ಮಾತಾ ಸೇವಾ ಟ್ರಸ್ಟ್ ನ ಜಿ ಶ್ರೀನಿವಾಸ ಉಪಸ್ಥಿತರಿದ್ದರು.
——

Leave a Reply

Your email address will not be published. Required fields are marked *