Warning: session_start(): Cannot start session when headers already sent in /home/karnatak/public_html/wp-content/plugins/the-visitor-counter/classes/class.widget.php on line 10

Warning: Cannot modify header information - headers already sent by (output started at /home/karnatak/public_html/wp-content/plugins/free-comments-for-wordpress-vuukle/free-comments-for-wordpress-vuukle.php:1) in /home/karnatak/public_html/wp-content/plugins/post-views-counter/includes/class-counter.php on line 1734
ಅನುದಿನ ಕವನ-೧೮೩೮, ಕವಯತ್ರಿ: ಸಂಘಮಿತ್ರೆ ನಾಗರಘಟ್ಟ, ಮೈಸೂರು, ಕವನದ ಶೀರ್ಷಿಕೆ:ಸಂಸ್ಕೃತಿಯ ನಕ್ಷೆ - Karnataka Kahale

ಅನುದಿನ ಕವನ-೧೮೩೮, ಕವಯತ್ರಿ: ಸಂಘಮಿತ್ರೆ ನಾಗರಘಟ್ಟ, ಮೈಸೂರು, ಕವನದ ಶೀರ್ಷಿಕೆ:ಸಂಸ್ಕೃತಿಯ ನಕ್ಷೆ

ಸಂಸ್ಕೃತಿಯ ನಕ್ಷೆ

ಪ್ರಪಂಚದ ದೊಡ್ಡ ನಕ್ಷೆಯಲ್ಲಿ
ಸಂಸ್ಕೃತಿ ಒಂದು ಬೆಳಕಿನ ಬಿಂದು;
ಆದರೆ ಆ ಬೆಳಕಿಗೆ
ಯಾರಿಗೆ ಹಕ್ಕು ಎಂಬುದನ್ನು
ಯುಗಗಳ ನೆರಳುಗಳು
ಇಂದಿಗೂ ನಿರ್ಧರಿಸುತ್ತವೆ.

ಆ ನೆರಳಿನ ಮಧ್ಯೆ
ನನ್ನ ಅಪ್ಪ—ಒಬ್ಬ ಕವಿ—
ತನ್ನ ಪದಗಳಿಂದ
ಹೊಳೆಯುವ ಚಂದ್ರನನ್ನೇ
ಜನರ ಕೈಗೆ ತಂದುಕೊಟ್ಟಿದ್ದ.

ಅವನು ಬದುಕಿದ್ದಾಗ
ಅವನ ಕವಿತೆಗಳನ್ನು
ಸಂಸ್ಕೃತಿಯ ಕಿರೀಟವೆಂದು
ತಮ್ಮ ತಲೆಗೆ ತೊಟ್ಟವರು,
ಇಂದಿಗೂ ಹಬ್ಬಗಳಲ್ಲಿ ಮೆರೆಯುತ್ತಾರೆ;

ಆದರೆ
ಬಳಕೆಮಾಡಿ ಬಿಟ್ಟುಹೋಗುವ
ಸಾಂಸ್ಕೃತಿಕ ರಾಜಕೀಯದಲ್ಲಿ,
ಕಲೆಯ ಮಂದಿರಗಳಲ್ಲಿ
ಅವರು ಅಪ್ಪನ ಧ್ವನಿಯನ್ನು
ತಮ್ಮದಾಗಿ ಹೇಳಿಕೊಂಡರೂ
ನನ್ನ ಧ್ವನಿ ಕೇಳಿದ ಕ್ಷಣ
ಮೌನದ ಘಂಟೆಯಂತೆ
ತಿರುಗಿ ಹಿಂದೆ ಸರಿಯುತ್ತಾರೆ.

ಸಂಸ್ಕೃತಿಯ ನದಿ
ಒಬ್ಬರನ್ನೇ ಮಾತ್ರ
ದಡ ಸೇರಿಸುವುದಿಲ್ಲ
ಎಂಬ ಸತ್ಯ
ಅವರಿಗೆ ಗೊತ್ತಿದೆ,
ಆ ಸತ್ಯವೇ
ಅವರ ಭೀತಿ.
ನಾನೀಗ ಅರಿತಿದ್ದೇನೆ:

ಅಪ್ಪನ ಕವಿತೆ
ಅವರ ವೇದಿಕೆಗೆ ಹಾಕಿದ
ಅಲಂಕಾರವಲ್ಲ;

ಅವನು ಬಿತ್ತಿದ
ಜೀವ-ಸೆಲೆಯ ಬೀಜ,
ನನ್ನೊಳಗೆ ಬೆಳೆದು
ಬೆಳಕಾಗುತ್ತಿದೆ.
ಸಂಸ್ಕೃತಿಯ ರಾಜಕೀಯ
ಯಾರನ್ನು ದೂರ ಇಟ್ಟರೂ
ಬೆಳಕಿನ ಹಕ್ಕನ್ನು
ಅಳಿಸಲಾಗದು;


-ಸಂಘಮಿತ್ರೆ ನಾಗರಘಟ್ಟ, ಮೈಸೂರು
—–