Warning: session_start(): Cannot start session when headers already sent in /home/karnatak/public_html/wp-content/plugins/the-visitor-counter/classes/class.widget.php on line 10

Warning: Cannot modify header information - headers already sent by (output started at /home/karnatak/public_html/wp-content/plugins/free-comments-for-wordpress-vuukle/free-comments-for-wordpress-vuukle.php:1) in /home/karnatak/public_html/wp-content/plugins/post-views-counter/includes/class-counter.php on line 1734
ಹೆಚ್.ಕೆ.ಬಿ.ಕೆ ಜಿಐಯಲ್ಲಿ 77 ನೇ ಗಣರಾಜ್ಯೋತ್ಸವ ಆಚರಣೆ: ಸಂವಿಧಾನವು ಭಾರತದ ಆತ್ಮ -ಸಿ.ಎಂ.‌ಫೈಝ್ ಮಹಮ್ಮದ್ ಅಭಿಮತ - Karnataka Kahale

ಹೆಚ್.ಕೆ.ಬಿ.ಕೆ ಜಿಐಯಲ್ಲಿ 77 ನೇ ಗಣರಾಜ್ಯೋತ್ಸವ ಆಚರಣೆ: ಸಂವಿಧಾನವು ಭಾರತದ ಆತ್ಮ -ಸಿ.ಎಂ.‌ಫೈಝ್ ಮಹಮ್ಮದ್ ಅಭಿಮತ

ಬೆಂಗಳೂರು, ಜ.26 :ನಗರದ ಹೆಚ್.ಕೆ. ಬಿ.ಕೆ. ಸಮೂಹ ಶಿಕ್ಷಣ ಸಂಸ್ಥೆಗಳು ಮತ್ತು ಒನ್ ಸ್ಕೂಲ್ ಆಫ್ ಬಿಜಿನೆಸ್ ಸಹಯೋಗದಲ್ಲಿ 77 ನೇ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.

ಹೆಚ್.ಕೆ.ಬಿ.ಕೆ ಸಮೂಹ ಶಿಕ್ಷಣ ಸಂಸ್ಥೆಗಳ ನಿರ್ದೇಶಕರು, ಒನ್ ಸ್ಕೂಲ್ ಆಫ್ ಬಿಜಿನೆಸ್ ನ ಅಧ್ಯಕ್ಷರೂ ಆದ  ಸಿ.ಎಂ. ಫೈಝ್ ಮಹಮ್ಮದ್ ಅವರು ಧ್ವಜಾರೋಹಣ ನೆರವೇರಿಸಿ ಮಾತನಾಡಿ, ದೇಶದ ಮಹಾನ್ ನಾಯಕರ ತ್ಯಾಗ ಬಲಿದಾನಗಳ ಫಲವಾಗಿ ದೇಶ ಸ್ವತಂತ್ರವಾಗಿದೆ. ಹಿಂದು ಮುಸ್ಲಿಂ ಕ್ರೈಸ್ತ ಹೀಗೆ ಅನೇಕ ಜಾತಿ ಮತ ಪಂಥ ಪಂಗಡದವರು ವಾಸಿಸುವ ಭಾರತವು ವೈವಿಧ್ಯತೆಯಲ್ಲಿ ಏಕತೆಯನ್ನು ಹೊಂದಿದೆ ಎಂದು ತಿಳಿಸಿದರು.        ಎಲ್ಲರೂ ಸಮಾನತೆ ಸಹಬಾಳ್ವೆಯಿಂದ ಜೀವನ ನಡೆಸಲು ಸಂವಿಧಾನವನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕು. ಮೂಲಭೂತ ಹಕ್ಕು ಮತ್ತು ಕರ್ತವ್ಯ, ಆದರ್ಶಗಳನ್ನು ಅಳವಡಿಸಿಕೊಂಡು ಸಂವಿಧಾನದ ಘನತೆ ಕಾಪಾಡಬೇಕು. ಗಣತಂತ್ರ ವ್ಯವಸ್ಥೆಯ ಯಶಸ್ಸಿಗೆ ಸಾಂವಿಧಾನಿಕ ಮೌಲ್ಯಗಳ ಅನುಸರಣೆ ಅಗತ್ಯ. ಸಂವಿಧಾನವು ದೇಶದ ಆತ್ಮ ಇದ್ದಂತೆ ಎಂದು ಅಭಿಪ್ರಾಯ ಪಟ್ಟರು.

ತಾಂತ್ರಿಕ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಮಹಮ್ಮದ್ ರಿಯಾಝ್ ಅಹ್ಮದ್, ಒನ್ಎಸ್ ಬಿ ಯ ಡಾ.‌ ಲತಾ, ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಹರೀಶ್ ಎಸ್.ಬಿ., ಡಾ. ಸಂತೋಷ್ ಪಿ., ಸಂಸ್ಥೆಯ ಅಂಗ ಸಂಸ್ಥೆಗಳ ಪ್ರಾಂಶುಪಾಲರು, ಡೀನರು, ಕಾಲೇಜುಗಳ ಎಲ್ಲ ವಿಭಾಗಗಳ ಮುಖ್ಯಸ್ಥರು ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಜರಿದ್ದರು.‌

ಡಾ. ವಿವೇಕಕುಮಾರ್ ಶಾಹ ಸ್ವಾಗತಿಸಿದರು.‌ ಪ್ರೊ. ತಿರಮಾಗಲ ವಂದಿಸಿದರು. ಪ್ರೊ.‌ಪವನ್ ಕುಮಾರ್ ನಿರೂಪಿಸಿದರು.

ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.