Warning: session_start(): Cannot start session when headers already sent in /home/karnatak/public_html/wp-content/plugins/the-visitor-counter/classes/class.widget.php on line 10

Warning: Cannot modify header information - headers already sent by (output started at /home/karnatak/public_html/wp-content/plugins/free-comments-for-wordpress-vuukle/free-comments-for-wordpress-vuukle.php:1) in /home/karnatak/public_html/wp-content/plugins/post-views-counter/includes/class-counter.php on line 1734
ಬಳ್ಳಾರಿ: ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ ಶಾಸಕ ನಾರಾ ಭರತ್ ರೆಡ್ಡಿ - Karnataka Kahale

ಬಳ್ಳಾರಿ: ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ ಶಾಸಕ ನಾರಾ ಭರತ್ ರೆಡ್ಡಿ

ಬಳ್ಳಾರಿ, ಫೆ.9: ನಗರ ಶಾಸಕ ನಾರಾ ಭರತ್ ರೆಡ್ಡಿಯವರು ವಾರ್ಡ್ ಸಂಖ್ಯೆ 21ರ ಬಸವೇಶ್ವರ ನಗರದ ಸಂಗಮೇಶ್ವರ ದೇವಸ್ಥಾನದ ಅಭಿವೃದ್ಧಿ ಹಾಗೂ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಸೋಮವಾರ ಅಂದಾಜು 95 ಲಕ್ಷ ರೂ.ಗಳ ಅನುದಾನದಡಿ ಭೂಮಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ವೀರಶೈವ ಲಿಂಗಾಯತ ಮಹಾಸಭಾದ ನಿಕಟಪೂರ್ವ ಅಧ್ಯಕ್ಷ ಚಾನಾಳ್ ಶೇಖರ್, ವಿ. ವಿ. ಸಂಘದ ಜಂಟಿ ಕಾರ್ಯದರ್ಶಿಗಳು ಯಾಲ್ಪಿ ಪಂಪನಗೌಡ್ರು, ಕೆರನಹಳ್ಳಿ ಚಂದ್ರಶೇಖರ್, ಸಂಗಮೇಶ್ವರ ದೇವಸ್ಥಾನದ ಕಮಿಟಿ ಅಧ್ಯಕ್ಷರು ಮತ್ತು ಸದಸ್ಯರು, ಚಿದಾನಂದಪ್ಪ, ಕಟ್ಟೆಗೌಡ, ಚಂದ್ರಮೌಳಿ, ಮಹೇಶ್, ಜಯದೇವಗೌಡ, ಸುರೇಶ್ ಸ್ವಾಮಿ, ವಾಸು ರೆಡ್ಡಿ, ಗುರುಸಿದ್ಧ, ಸುರೇಖಾ, ಮಲ್ಲನಗೌಡ, ಮಾಜಿ ಮೇಯರ್ ರಾಜೇಶ್ವರಿ, ಪಾಲಿಕೆಯ ಸದಸ್ಯರಾದ ಮಿಂಚು ಸೀನ, ಕುಬೇರಾ, ಕಾಂಗ್ರೆಸ್ ಮುಖಂಡರಾದ ಮಹಮ್ಮದ್ ಭಾಯ್, ಮಂಜು ಬಳಗಾರ್, ಪೋಲಕ್ ಹನುಮಂತ ರೆಡ್ಡಿ, ಲೋಕೇಶ್, ಶಾಮ ಮತ್ತಿತರರು ಇದ್ದರು.

ಅದೇ ರೀತಿ ವಾರ್ಡ್ ಸಂಖ್ಯೆ 8ರ ವ್ಯಾಪ್ತಿಯಲ್ಲಿ 34.52 ಕೋಟಿ ರೂ.ಗಳ ವೆಚ್ಚದಲ್ಲಿ ಕಲ್ಯಾಣದುರ್ಗ ಸಿಸಿ ರಸ್ತೆಯ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು. ಈ ಸಂದರ್ಭ ವಾರ್ಡಿನ ಸದಸ್ಯ ರಾಮಾಂಜನೇಯ, ಮಾಜಿ ಮೇಯರುಗಳಾದ ಎಂ.ರಾಜೇಶ್ವರಿ, ಮುಲ್ಲಂಗಿ ನಂದೀಶ್, ಪಾಲಿಕೆಯ ಸದಸ್ಯರಾದ ಮಿಂಚು ಸೀನಾ, ನೂರ್ ಮೊಹಮ್ಮದ್, ಎಂ.ಪ್ರಭಂಜನಕುಮಾರ್, ನಾಜು, ಆಸಿಫ್, ರಾಜಶೇಖರ್, ಜಬ್ಬಾರ್, ಕಾಂಗ್ರೆಸ್ ಮುಖಂಡರಾದ ಕಲ್ಲುಕಂಭ ಪಂಪಾಪತಿ, ಎಲ್.ಮಾರೆಣ್ಣ, ಅಯಾಜ್ ಅಹ್ಮದ್, ಮೊಹಮ್ಮದ್ ಭಾಯ್, ಪಿ.ಜಗನ್ನಾಥ್, ಬಿಆರಲ್ ಸೀನಾ, ಮುಂಡ್ಲೂರು ವಿಜಯ್, ವೆಂಕಟೇಶ ಹೆಗಡೆ, ಹೊನ್ನಪ್ಪ, ಶಿವರಾಜ್, ಹಗರಿ ಗೋವಿಂದ, ವೀರೇಂದ್ರ, ಸೋಮು, ಶಿವರಾಜ್, ವಿಷ್ಣು ಬೋಯಾಪಾಟಿ, ಪದ್ಮಾ, ಬಿ.ಎಂ.ಪಾಟೀಲ್, ಸಮೀರ್, ಅರ್ಷದ್ ಸೇರಿದಂತೆ ಹಲವರು ಇದ್ದರು.

ವಾರ್ಡ್ ಸಂಖ್ಯೆ 23ರ ಮಹಾನಂದಿಕೊಟ್ಟಂನಲ್ಲಿ 50 ಲಕ್ಷ ರೂ.ಗಳ ಅನುದಾನದಡಿ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಶಾಸಕ ನಾರಾ ಭರತ್ ರೆಡ್ಡಿಯವರು ಭೂಮಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ವಾರ್ಡಿನ ಸದಸ್ಯ ಮತ್ತು ಮೇಯರ್ ಪಿ.ಗಾದೆಪ್ಪ, ಪಾಲಿಕೆಯ ಸದಸ್ಯರಾದ ಮಿಂಚು ಸೀನಾ, ನೂರ್ ಮೊಹಮ್ಮದ್, ಮಾಜಿ ಮೇಯರ್ ಎಂ.ರಾಜೇಶ್ವರಿ, ಸುಬ್ಬರಾಯುಡು, ಸ್ಥಳೀಯ ಮುಖಂಡರಾದ ಸೋಮಶೇಖರ್, ಪೋಲಕ್ ಹನುಮಂತ ರೆಡ್ಡಿ, ಸೂರಿ, ಕುರುವಳ್ಳಿ ರಾಜ, ಗೌತಮ್.ಎಸ್, ನಾಗರಾಜ ಮತ್ತಿತರರು ಹಾಜರಿದ್ದರು.
ಅದೇ ರೀತಿ ಬಳ್ಳಾರಿ ಜಿಲ್ಲಾ ಖನಿಜ ಪ್ರತಿಷ್ಠಾನದ ವತಿಯಿಂದ ಬಳ್ಳಾರಿ ನಗರದ ಮುನಿಸಿಪಲ್ ಕಾಲೇಜು ಆವರಣದಲ್ಲಿ ನಿರ್ಮಿಸಲಾಗಿರುವ ನಾಲ್ಕು ಶಾಲಾ ಕೊಠಡಿಗಳನ್ನು ಸೋಮವಾರ ಉದ್ಘಾಟಿಸಿದರು. ಈ ವೇಳೆ ಡಿಡಿಪಿಯು ಉಪ ನಿರ್ದೇಶಕ ಲಕ್ಷ್ಮಣ ಹಳ್ಳದಮನಿ, ಪ್ರಾಂಶುಪಾಲ ಸುಂಕಪ್ಪ, ಕಾಲೇಜು ಅಭಿವೃದ್ಧಿ ಸಮಿತಿಯ ಜಿ.ರಮೇಶ್, ಅರ್ಷದ್ ಹಾಗೂ ಸ್ಥಳೀಯ ಮುಖಂಡರು, ಬೆಂಬಲಿಗರು ಹಾಜರಿದ್ದರು.