ಬಳ್ಳಾರಿಯ ಅತಿಥಿ ಉಪನ್ಯಾಸಕಿ ಈಗ ಗ್ರಾಪಂ ಸದಸ್ಯೆ!

ಬಳ್ಳಾರಿ: ನಗರದ ವೀರಶೈವ ಕಾಲೇಜ್ ನಲ್ಲಿ ಕನ್ನಡ ವಿಭಾಗದ ಅತಿಥಿ ಉಪನ್ಯಾಸಕಿ ಹೇಮ ಮಂಜುನಾಥ್ ಅವರು ಗ್ರಾಮ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
ತಾಲೂಕಿನ ಶ್ರೀಧರ ಗಡ್ಡೆ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಹೇಮ ಮಂಜುನಾಥ್ ಅವರು ತಮ್ಮ ಸಮೀಪದ ಪ್ರತಿ ಸ್ಪರ್ಧಿ ತಮ್ಮ ಗ್ರಾಮದ ಸುಧಾ
ಅವರನ್ನು 140 ಮತಗಳ ಅಂತರದಿಂದ ಗೆಲುವು ಸಾಧಿಸಿದರು.
ಒಟ್ಟು 446 ಮತಗಳಲ್ಲಿ ಹೇಮಾ ಅವರು286 ಮತ ಪಡೆದರೆ ಸುಧಾ ಅವರು 146 ಮತ ಗಳಿಸಿದ್ದಾರೆ.
ಇಂದು‌ ನಗರದ ಸೇಂಟ್ ಜಾನ್ಸ್ ಶಾಲೆಯಲ್ಲಿ ಗ್ರಾಪಂ ಚುನಾವಣೆಯ ಮತ ಎಣಿಕೆ ನಡೆಯಿತು.

Leave a Reply

Your email address will not be published. Required fields are marked *