ಅನುದಿನ ಕವನ-೧೯೬೧, ಕವಿ(ತೆಲುಗು ಮೂಲ): ಪಲ್ಲಿಪಟ್ಟು ನಾಗರಾಜು, ಕನ್ನಡಕ್ಕೆ:ಡಾ. ಶಿವಕುಮಾರ್ ಕಂಪ್ಲಿ, ದಾವಣಗೆರೆ, ಕವನದ ಶೀರ್ಷಿಕೆ: ಕತ್ತಲು ಬೆಳಗುತ್ತಿರುವಾಗ…

ಕತ್ತಲು ಬೆಳಗುತ್ತಿರುವಾಗ…


” ತಲೆಯೇ ಇರದ ಮರಗಳ
ಮುಖ ಕಲ್ಪಿಸಿಕೊಳ್ಳುವುದು ಹೇಗೆ…!
ಮುಖವಿರದೆಯೂ ಮಾತಾಡಲು ಸಾಧ್ಯಾವಾ…!

ಕಲ್ಲುಗಳೂ ನಡೆಯುತ್ತವಾ…!
ಬಂಡೆತುಟಿಗಳೂ ಕಂಪು ಸೂಸುತ್ತವಾ…!

ಏನೋ…..!

ಬೆರಳನು ಬೇರಿನ ಹಾಗೆ
ನೆಲದಾಳಕೆ ನಾಟಿಸುತ್ತಾ
ಮಣ್ಣ ಅಂತರ್ ಲೋಕವನು
ತಾಗದ ಕೈಗಳು ಚಪ್ಪಾಳೆ ಹೊಡೆಯುತ್ತವಾ….!
‌ ‌‌‌ ‌‌ ೫
ಈ ಕತ್ತಲೆ ಅದೆಂತಹ ಚೈತನ್ಯ ಮರ‍್ತಿಯಲ್ಲವೇ…!
ಇಷ್ಟೊಂದು ಸಿಡಿಲುಗಳನು ಒಳಗೇ ಸುರಿದು ಹೋಗಿದೆ….!

ದಾರಿಯ ಎರಡೂ ಕಡೆಯಲ್ಲಿ…
ಗುಂಪು ಗುಂಪಾದ ಮರಗಳು…
ಬೆಟ್ಟ ಬೆಟ್ಟವಾದ ಕಲ್ಲುಗಳು…
ಹದ್ದುಗಳು,
ಬೆಟ್ಟದ ಕುರಿಗಳು ಹಿಕ್ಕೆಯ ನಾತ ಹೊಡೆಸುತ್ತಿವೆ….!

ಈ ಮರಗಳು
ತಲೆಯನು ಹೇಗೆ ಕೆರೆಯುತ್ತವೋ…!
ಮುಖವನು ಹೇಗೆ ತೊಳೆಯುತ್ತವೋ…!

ಏನೋ….
ಏನೋ…
ಏನೋ….


ತೆಲುಗು ಮೂಲ: ಪಲ್ಲಿಪಟ್ಟು ನಾಗರಾಜು


ಕನ್ನಡಕ್ಕೆ: ಡಾ. ಶಿವಕುಮಾರ್ ಕಂಪ್ಲಿ,  ದಾವಣಗೆರೆ

Leave a Reply

Your email address will not be published. Required fields are marked *