ಕುರುಗೋಡು ನೂತನ ತಹಶೀಲ್ದಾರ್ ಎಂ. ಗುರುರಾಜ

ಬಳ್ಳಾರಿ, ಜ.31: ಕುಷ್ಟಗಿ ತಹಶೀಲ್ದಾರರಾಗಿದ್ದ ಎಂ. ಗುರುರಾಜ್ ಅವರನ್ನು ರಾಜ್ಯ ಸರಕಾರ ಜಿಲ್ಲೆಯ ಕುರುಗೋಡು ತಹಶೀಲ್ದಾರನ್ನಾಗಿ ವರ್ಗಾಯಿಸಿದೆ.
2023 ರ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಹಿನ್ನಲೆಯಲ್ಲಿ ಕೇಂದ್ರ ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ
ಕುಷ್ಟಗಿ ಸೇರಿದಂತೆ 70ಕ್ಕೂ ಹೆಚ್ಚು ತಹಶೀಲ್ದಾರರನ್ನು ಕಂದಾಯ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ಜಿ ಎನ್ ಸುಶೀಲ ಅವರು ವರ್ಗಾಯಿಸಿ ಆದೇಶ ಹೊರಡಿಸಿದ್ದಾರೆ.


ಈವರೆಗೆ ಕುರುಗೋಡು ತಹಶಿಲ್ದಾರರಾಗಿದ್ದ ಆರ್. ರಾಘವೇಂದ್ರ ರಾವ್ ಅವರು ಕುಷ್ಟಗಿಗೆ ವರ್ಗವಾಗಿದ್ದಾರೆ.
*****

Leave a Reply

Your email address will not be published. Required fields are marked *