Warning: session_start(): Cannot start session when headers already sent in /home/karnatak/public_html/wp-content/plugins/the-visitor-counter/classes/class.widget.php on line 10

Warning: Cannot modify header information - headers already sent by (output started at /home/karnatak/public_html/wp-content/plugins/free-comments-for-wordpress-vuukle/free-comments-for-wordpress-vuukle.php:1) in /home/karnatak/public_html/wp-content/plugins/post-views-counter/includes/class-counter.php on line 1734
ವಿಜಯಪುರದಲ್ಲಿ ಜು. 29 ಮತ್ತು 30ರಂದು 10ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ: ಸರ್ವಾಧ್ಯಕ್ಷರಾಗಿ ವಿದ್ವಾಂಸ ಡಾ. ಎಚ್.ಟಿ. ಪೋತೆ ಆಯ್ಕೆ -ದಸಾಪ ರಾಜ್ಯಾಧ್ಯಕ್ಷ ಡಾ. ಅರ್ಜುನ ಗೊಳಸಂಗಿ - Karnataka Kahale

ವಿಜಯಪುರದಲ್ಲಿ ಜು. 29 ಮತ್ತು 30ರಂದು 10ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ: ಸರ್ವಾಧ್ಯಕ್ಷರಾಗಿ ವಿದ್ವಾಂಸ ಡಾ. ಎಚ್.ಟಿ. ಪೋತೆ ಆಯ್ಕೆ -ದಸಾಪ ರಾಜ್ಯಾಧ್ಯಕ್ಷ ಡಾ. ಅರ್ಜುನ ಗೊಳಸಂಗಿ

ಕಲಬುರಗಿ,ಜು. 17: ದಲಿತ ಸಾಹಿತ್ಯ ಪರಿಷತ್ತಿನ ಬೆಳ್ಳಿ ಸಂಭ್ರಮದ ಅಂಗವಾಗಿ 10ನೆಯ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನವು ವಿಜಯಪುರದ ಕೆಂಗಲ್ ಹನುಮಂತರಾಯ್ ರಂಗಮಂದಿರದಲ್ಲಿ ಜು.29 ಹಾಗೂ 30ರಂದು ಜರುಗಲಿದೆ ಎಂದು ರಾಜ್ಯ ದಲಿತ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಅರ್ಜುನ್ ಗೊಳಸಂಗಿ ಅವರು ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಸಮ್ಮೇಳನದ ಸರ್ವಾಧ್ಯಕ್ಷರಾಗಿ ಕನ್ನಡ ಹಾಗೂ ದಲಿತ ಸಾಹಿತ್ಯ ಕ್ಷೇತ್ರದಲ್ಲಿ ಅಪಾರವಾದ ಸಾಧನೆ ಮಾಡಿರುವ ಸಾಹಿತಿ, ಕರ್ನಾಟಕದಲ್ಲಿ ಭಗವಾನ್ ಬುದ್ದ ಹಾಗೂ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಜೀವನ ಮತ್ತು ಸಾಧನೆ ಕುರಿತು ಅಧಿಕೃತವಾಗಿ ಮಾತನಾಡುವ ಚಿಂತಕರೂ, ಜಾನಪದ ವಿದ್ವಾಂಸರು, ಕಲಬುರ್ಗಿ ವಿಶ್ವ ವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರು ಮತ್ತು ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಹಂಜಗಿ ಗ್ರಾಮದವರಾದ ಡಾ. ಎಚ್.ಟಿ. ಪೋತೆ ಅವರನ್ನು ದಲಿತ ಹಾಗೂ ದಲಿತ ಪರ ಸಾಹಿತಿ – ಸಂಘಟಕರ ಅಭಿಪ್ರಾಯಗಳನ್ನು ಸಂಕಲಿಸಿ, ಪರಿಷತ್ ರಾಜ್ಯ ಕಾರ್ಯಕಾರಿ ಸಮಿತಿಯು ಸರ್ವಾನುಮತದಿಂದ ಆಯ್ಕೆ ಮಾಡಿದೆ ಎಂದರು.


ಎರಡು ದಿನಗಳ ಈ ಸಮ್ಮೇಳನದಲ್ಲಿ ರಾಜ್ಯದ 31 ಜಿಲ್ಲೆಗಳಿಂದ ದಲಿತ ಸಾಹಿತ್ಯ -ಸಂಸ್ಕೃತಿ-ಸಂಘಟನೆಯ ಕ್ಷೇತ್ರದಲ್ಲಿ ತೊಡಗಿಕೊಂಡ ನೂರಾರು ಸಾಧಕರು, ಹಿರಿಯ ಮತ್ತು ಯುವ ಸಾಹಿತಿಗಳು ಹಾಗೂ ಪ್ರತಿನಿಧಿಗಳು ಸ್ಥಳೀಯ ಸಾಹಿತಿಗಳು ಹಾಗೂ ಜನಪ್ರತಿನಿಧಿಗಳು ಭಾಗವಹಿಸುವರು ಎಂದು ತಿಳಿಸಿದರು.
ಸಮ್ಮೇಳನದಲ್ಲಿ ಭಾಗವಹಿಸುವ ಪ್ರತಿನಿಧಿಗಳಿಗೆ ಊಟ ಮತ್ತು ವಸತಿ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಈ ಸಮ್ಮೇಳನದಲ್ಲಿ 25 ಜನ ದಲಿತ ಸಾಹಿತಿಗಳಿಗೆ ‘ಬೆಳ್ಳಿ ಸಂಭ್ರಮ ಪುಸ್ತಕ ಪ್ರಶಸ್ತಿ’ ಹಾಗೂ ದಲಿತ ಲೋಕದ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೂ ಬೆಳ್ಳಿ ಸಂಭ್ರಮ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ವಿವರಿಸಿದರು.
ಈ ಬಾರಿಯ ಸಮ್ಮೇಳನದ ಪ್ರಮುಖ ಆಶಯ ‘ಪ್ರಬುದ್ದ ಭಾರತ.’ ಕುರಿತ ಉಪನ್ಯಾಸ, ‘ನಮ್ಮ ಸಂವಿಧಾನ ನಮ್ಮ ರಕ್ಷಣೆ’ ಕುರಿತು ಸಂವಾದ ನಡೆಸಲಾಗುವುದು. ದಲಿತ ಸಾಹಿತ್ಯ ಕುರಿತ ಒಂದು ಗೋಷ್ಠಿ, ಮತ್ತು ಎರಡು ಕವಿಗೋಷ್ಠಿಗಳನ್ನು ಏರ್ಪಡಿಸಲಾಗುವುದು. ಸಮಾರೋಪ ಸಮಾರಂಭದಲ್ಲಿ ನಾಡಿನ ಸಾಧಕರನ್ನು ಸನ್ಮಾನಿಸಲಾಗುವುದು. ಎರಡೂ ದಿನ ಸಾಂಸ್ಕೃತಿಕ ಕಾರ್ಯಕ್ರಮಗಳೂ ಕೂಡಾ ನಡೆಯುತ್ತವೆ. ಸಮ್ಮೇಳನದ ಸರ್ವಾಧ್ಯಕ್ಷರ ಮೆರವಣಿಗೆಯಲ್ಲಿ ಸಂವಿಧಾನ ಪುಸ್ತಕಗಳ ಮೆರವಣಿಗೆ ಪ್ರಮುಖವಾಗಿರುತ್ತದೆ. ಸಮ್ಮೇಳನದಲ್ಲಿ ಪುಸ್ತಕ ಪ್ರದರ್ಶನ- ಮಾರಾಟ ವ್ಯವಸ್ಥೆಯನ್ನು ಮಾಡಲಾಗುವುದು. ಸಮ್ಮೇಳನಕ್ಕೆ ಬರುವ ಅತಿಥಿ ಹಾಗೂ ಪ್ರತಿನಿಧಿಗಳಿಗೆ ಸ್ಥಳೀಯ ವಿವಿಧ ವಸತಿಗೃಹ ಗಳಲ್ಲಿ ವ್ಯವಸ್ಠೆ ಮಾಡಲಾಗುವುದು ಎಂದು ಡಾ. ಗೊಳಸಂಗಿ ಹೇಳಿದರು.
ಗೌರವ ಪ್ರಶಸ್ತಿಯನ್ನು ಸಾಹಿತ್ಯ ಕ್ಷೇತ್ರದಲ್ಲಿ ಅನುಪಮ‌ ಸೇವೆ ಸಲ್ಲಿಸಿರುವ ಬೆಂಗಳೂರಿನ ಆರ್. ದೊಡ್ಡೇಗೌಡ, ರಾಯಚೂರಿನ ವೀರಹನುಮಾನ್, ಕಲಬುರ್ಗಿಯ ಡಾ. ಶ್ರೀಶೈಲ್ ನಾಗರಾಳ್, ಹುಮ್ನಾಬಾದ್‍ನ ಡಾ. ಗವಿಸಿದ್ದಪ್ಪ ಪಾಟೀಲ್, ಇಳಕಲ್‍ನ ಶ್ರೀಮತಿ ಮುರ್ತುಜಾಬೇಗಂ ಕೊಡಗಲಿ, ಮೈಸೂರಿನ ಹಾರೋಹಳ್ಳಿ ರವೀಂದ್ರ, ವಿಜಯಪುರದ ಪರಶುರಾಮ್, ಸಮಾಜ ಸೇವೆಗಾಗಿ ಮೈಸೂರಿನ ನರೇಂದ್ರ ನಾಗವಾಲ್, ದಲಿತ ಚಳುವಳಿಗಾಗಿ ಚಾಮರಾಜನಗರದ ಮುಳ್ಳೂರು ಶಿವಮಲ್ಲು, ಪತ್ರಿಕಾ ರಂಗದಿಂದ ಧಾರವಾಡದ ಡಾ. ಸಂಜೀವಕುಮಾರ್ ಮಾಲಗತ್ತಿ, ಹುಬ್ಬಳ್ಳಿಯ ರಾಜು ವಿಜಯಪುರ, ಚಿತ್ರಕಲಾ ಕ್ಷೇತ್ರದಲ್ಲಿ ಧಾರವಾಡದ ಕು. ಸೌಜನ್ಯ ಕರಡೋಣಿ, ಸಂಗೀತ ಕ್ಷೇತ್ರದಲ್ಲಿ ಕೋಲಾರ್‍ದ ಸಿ.ಆರ್. ನಟರಾಜ್, ಚಲನಚಿತ್ರರಂಗದಿಂದ ವಿಜಯಪುರದ ದೇವು ಕೆ., ಅಂಬಿಗ ಅವರಿಗೆ ಪ್ರದಾನ ಮಾಡಲಾಗುವುದು ಎಂದು ಅವರು ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ದಸಾಪ ಬೆಳ್ಳಿ ಸಂಭ್ರಮ ಪುಸ್ತಕ ಪ್ರಶಸ್ತಿಗಳನ್ನು ಸಹ ಪ್ರದಾನ ಮಾಡಲಾಗುವುದು. ಸಾಧಕ ಶ್ರೀ ಪ್ರಶಸ್ತಿಯನ್ನು ಗದಗದ ಗಣಪತಿ ಚಲವಾದಿ, ರಾಯಚೂರಿನ ತಾಯರಾಜ್ ಮರ್ಚಟಹಾಳ್, ಸಿಂಧನೂರಿನ ಹುಸೇನಪ್ಪ ಅಮರಾಪೂರ್ ಅವರಿಗೆ ಪ್ರದಾನ ಮಾಡಲಾಗುವುದು ಎಂದರು.
ಸುದ್ದಿ ಗೋಷ್ಠಿಯಲ್ಲಿ ದಸಾಪ ಕೇಂದ್ರ ಸಮಿತಿಯ ಪದಾಧಿಕಾರಿಗಳಾದ ಡಾ. ವೈಎಂ. ಭಜಂತ್ರಿ, ಡಾ. ಎಚ್.ಬಿ. ಕೋಲಕರ್, ಡಾ. ಸುಜಾತಾ ಚಲವಾದಿ, ಬಸವರಾಜ್ ಜಾಲವಾದಿ, ಡಾ. ಗಾಂಧೀಜಿ ಮೊಳಕೇರಿ, ಡಾ. ಸುನೀಲ್ ಜಾಬಾದಿ, ಡಾ. ಪೀರಪ್ಪ ಸಜ್ಜನ್, ಹಿರಿಯ ಪತ್ರಕರ್ತ ಅನಿಲ್ ಹೊಸಮನಿ, ಹೋರಾಟಗಾರ ಶ್ರೀನಾಥ್ ಪೂಜಾರ್ ಮತ್ತಿತರರು ಉಪಸ್ಥಿತರಿದ್ದರು.


ಡಾ.ಪೋತೆ ಅವರಿಗೆ ಅಧಿಕೃತ ಆಹ್ವಾನ: 10ನೆಯ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ವಿದ್ವಾಂಸ ಡಾ.‌ಎಚ್ ಟಿ ಪೋತೆ ಅವರಿಗೆ ಡಾ.‌ಅರ್ಜುನ‌ಗೊಳಸಂಗಿ ಅವರ ನೇತೃತ್ವದಲ್ಲಿ ದಸಾಪ ಪದಾಧಿಕಾರಿಗಳು ಅಧಿಕೃತವಾಗಿ ಆಹ್ವಾನಿಸಿ ಸತ್ಕರಿಸಿ ಗೌರವಿಸಿದರು.
ಸ್ಥಳೀಯ ಪೂಜಾ ನಗರದಲ್ಲಿರುವ ನಿವಾಸದಲ್ಲಿ ಡಾ. ಪೋತೆ ದಂಪತಿಗಳನ್ನು ಸನ್ಮಾನಿಸಲಾಯಿತು.
*****