ಗೊಣಗುತ್ತಿವೆ
ದಿನಗಳು
ನೋವಿನ ಉರಿಯಲ್ಲಿಯೇ
ಬೇಯಿಸುತ್ತಲೇ
ಸಿದ್ದಗೊಳಿಸುವ
ಆತುರಕ್ಕೆ
ಮಾತಿನ ಪುಳ್ಳೆಗಳು
ಧಗಧಗಿಸುತ್ತವೆ
ಮಿಶ್ರಣದ
ಮೇಲುಸ್ತುವಾರಿಯಲ್ಲಿ
ಬೇರೆ ಬೇರೆ ಕೈಗಳಲ್ಲಿ
ಊದುಕೊಳವೆ
ಸಾವಿನ
ರುಚಿಯನ್ನೇ
ಉಣ್ಣನ್ನು ಬಯಸುವಾಗ
ನಿಸ್ವಾರ್ಥವಾಗಿಯೇನೂ
ಸಮರ್ಪಿತ
ಆದರೂ
ತಾಳ್ಮೆಯೊಂದಿಗೆ
ಆತ್ಮಗಳ ಅರಿವು
ಬದುಕಿನ
ರುಚಿಕರ ಅಡುಗೆಯಲ್ಲವೇ?
-ಲೋಕಿ(ಲೋಕೇಶ್ ಮನ್ವಿತಾ), ಬೆಂಗಳೂರು
—–