
ಬಳ್ಳಾರಿ: ನಗರದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಭವನದಲ್ಲಿ ಇತ್ತೀಚಿಗೆ ರಾಜ್ಯ ಕಾರ್ಯಧ್ಯಕ್ಷರಾದ ನಾಗನಗೌಡ ಎಂ ಎ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ಕರ್ನಾಟಕ ರಾಜ್ಯ ಪ್ರಾರ್ಥಮಿಕ ಶಾಲಾ ಶಿಕ್ಷಕರ ಸಂಘದ ಬಳ್ಳಾರಿ ಜಿಲ್ಲಾ ಘಟಕ ರಚಿಸಲಾಯಿತು. ಸಭೆಯಲ್ಲಿ ಬಳ್ಳಾರಿ ಜಿಲ್ಲೆಯ ಸಂಡೂರು ಕಂಪ್ಲಿ ಸಿರುಗುಪ್ಪ ಕುರುಗೋಡು ಮತ್ತು ಬಳ್ಳಾರಿ ನಗರದ ಎಲ್ಲಾ ಸಮಾನ ಮನಸ್ಕರ ತಂಡದ ಹಾಗೂ ವಿವಿಧ ವೃಂದ ಸಂಘಗಳ ಸದಸ್ಯರು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಘಟಕದ ಪದಾಧಿಕಾರಿಗಳು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ ವೈ ತಿಪ್ಪಾರೆಡ್ಡಿ , ಜಿಲ್ಲಾ ಖಜಾಂಚಿ ಹನುಮಂತರಾಯ, ರಾಜ್ಯ ಸಂಘಟನಾ ಕಾರ್ಯದರ್ಶಿ ರಮೇಶ್ ಎನ್, ಸಮಾನ ಮಸ್ಕರ ತಂಡದ ಮುಖಂಡರಾದ ಡಾ! ಎಂಟಿ ಮಲ್ಲೇಶ್, ಮೆಹತಾಬ್, ಬಿ ಪಂಪನಗೌಡ, ರಘೋತ್ತಮ್ ರಾವ್, ಬಸವರಾಜ್, ದೊಡ್ಡಬಸಪ್ಪ ಎಲ್ ಕೆ ಸುಭಾನ್, ಶ್ರೀಮತಿ ಯಾದವಿ, ಗೋವಿಂದರಾಜುಲು, ದಯಾನಂದ ಸ್ವಾಮಿ, ಮಂಜುನಾಥ್ ನಾಟೇಕರ್, ಹೆಚ್ಎನ್ ನಾಗರಾಜ್, ಗಿರೀಶ ಜೆ, ಹನುಮಂತಪ್ಪ ಕೆ, ನಂದೀಶ್ ಪುಂಡಿ, ನೀಲಕಂಠಗೌಡ, ವೀರಭದ್ರ ಆಚಾರಿ, ಬಸವರಾಜ್ ಕೋಳೂರು ಅವರು ಹಾಗೂ ರಾಜ್ಯಸಂಘದ ಗೌರವ ಸಲಹೆಗಾರರಾದ ಅರುಣ ಪ್ರತಾಪ್ ರೆಡ್ಡಿ ಸಿರುಗುಪ್ಪ ರವರ ಉಪಸ್ಥಿತಿಯಲ್ಲಿ ಬಳ್ಳಾರಿ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾದ ಭಾಸ್ಕರ್ ರೆಡ್ಡಿ ಹಾಗೂ ತಾಲೂಕು ಘಟಕದ ಅಧ್ಯಕ್ಷರಾದ ಹರಿಪ್ರಸಾದ್ ಜಿಪಿಟಿ ಶಿಕ್ಷಕರ ಜಿಲ್ಲಾಧ್ಯಕ್ಷರಾದ ವೀರೇಶ್ ದಮ್ಮೂರು ಎಲ್ಲಾ ಸರ್ವ ಸದಸ್ಯರ ಸಮ್ಮುಖದಲ್ಲಿ ಜಿಲ್ಲಾ ಘಟಕವನ್ನು ರಚಿಸಲಾಯಿತು.
ಪದಾಧಿಕಾರಿಗಳು:


ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊನ್ನೂರ ಸ್ವಾಮಿ
ಖಜಾಂಚಿ : ಜಾಕೀರ್ ಬಾಷಾ
ಗೌರವ ಅಧ್ಯಕ್ಷರು : ದಯಾನಂದ ಸ್ವಾಮಿ ಹೆಚ್ ಎಂ
ಕಾರ್ಯಾಧ್ಯಕ್ಷರು : ರೇವಣಸಿದ್ದೇಶ ಕಂಪ್ಲಿ
ಹಿರಿಯ ಉಪಾಧ್ಯಕ್ಷರು : ಶ್ರೀ ಎರಿಸ್ವಾಮಿ ಸಂಡೂರು
ಉಪಾಧ್ಯಕ್ಷರು: ಶ್ರೀ ಪ್ರಕಾಶ್ ರೆಡ್ಡಿ ಕುರುಗೋಡು
ಉಪಾಧ್ಯಕ್ಷರು (ಮಹಿಳೆ) : ಶ್ರೀಮತಿ ಶರಣಮ್ಮ ಸಿರಗುಪ್ಪ
ಸಹ ಕಾರ್ಯದರ್ಶಿ : ಶ್ರೀ ಜಾಲಗಾರ ಭಾಷಾ ಸಿರುಗುಪ್ಪ
ಸಹ ಕಾರ್ಯದರ್ಶಿ ( ಮಹಿಳೆ ): ಶ್ರೀಮತಿ ನಜಹತ್ ಜಬಿನ ಕಂಪ್ಲಿ
ಸಂಘಟನಾ ಕಾರ್ಯದರ್ಶಿ : ಶ್ರೀ ರಮೇಶ್ ಎನ್ ಸಂಡೂರು
