Warning: session_start(): Cannot start session when headers already sent in /home/karnatak/public_html/wp-content/plugins/the-visitor-counter/classes/class.widget.php on line 10

Warning: Cannot modify header information - headers already sent by (output started at /home/karnatak/public_html/wp-content/plugins/free-comments-for-wordpress-vuukle/free-comments-for-wordpress-vuukle.php:1) in /home/karnatak/public_html/wp-content/plugins/post-views-counter/includes/class-counter.php on line 1734
ಅಧ್ಯಾಪಕ ನಿಜವಾದ ವಿದ್ಯಾರ್ಥಿ -ಖ್ಯಾತ ಸಾಹಿತಿ ಪ್ರೊ ಎಸ್.ಜಿ.ಸಿದ್ದರಾಮಯ್ಯ - Karnataka Kahale

ಅಧ್ಯಾಪಕ ನಿಜವಾದ ವಿದ್ಯಾರ್ಥಿ -ಖ್ಯಾತ ಸಾಹಿತಿ ಪ್ರೊ ಎಸ್.ಜಿ.ಸಿದ್ದರಾಮಯ್ಯ

ಶಂಕರಘಟ್ಟ, ಮಾ.7:  ಅಧ್ಯಾಪಕರು ಅನುದಿನ ಅಧ್ಯಯನದ ಜತೆ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಬೇಕು. ಅಧ್ಯಾಪಕರು ವೃತ್ತಿ ಜೀವನ ಆರಂಭಿಸಿದ ನಂತರ ನಿಜವಾದ ವಿದ್ಯಾರ್ಥಿ ಎಂದು ಖ್ಯಾತ ಸಾಹಿತಿ ಪ್ರೊ ಎಸ್.ಜಿ. ಸಿದ್ದರಾಮಯ್ಯ ಅವರು ಅಭಿಪ್ರಾಯಪಟ್ಟರು.
ಅವರು ಕುವೆಂಪು ವಿಶ್ವವಿದ್ಯಾಲಯದ ಹಿರೇಮಠ ಸಭಾಂಗಣದಲ್ಲಿ ಕನ್ನಡ ಭಾರತಿ ಏರ್ಪಡಿಸಿದ್ದ ಪದವಿ ತರಗತಿಗಳ ಭಾಷಾ ಪಠ್ಯ ಪುಸ್ತಕಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.           ಪಾರಂಪರಿಕ ತಿಳಿವಳಿಕೆಯ ವರ್ತಮಾನದ ಬದುಕನ್ನು ಕಟ್ಟಿಕೊಳ್ಳಲು ಪ್ರೇರೇಪಿಸುತ್ತದೆ. ವರ್ತಮಾನದ ಅರಿವು ಪಡೆದಾಗ ಭವಿಷ್ಯ ತ್ ಬದುಕು ಸಾರ್ಥಕವಾಗುತ್ತದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ವಿವಿ ಕುಲಪತಿ ಪ್ರೊ ಶರತ್ ಅನಂತ್ ಮೂರ್ತಿ ಅವರು ಮಾತನಾಡಿ ಅಂತರ್ ಜ್ಞಾನ ಶಿಸ್ತು ಮೂಲಕ ಭಾಷಾ ಪಠ್ಯ ರಚನೆಯ ಆಗಬೇಕು ಎಂದರು. ಸ್ನಾತಕ ಪದವಿ ಅಧ್ಯಯನ ಮಂಡಳಿ ಅಧ್ಯಕ್ಷರು ಮತ್ತು ಕನ್ನಡ ಭಾರತಿ ನಿರ್ದೇಶಕರು ಆದ ಪ್ರೊ ನೆಲ್ಲಿಕಟ್ಟೆ ಎಸ್ ಸಿದ್ದೇಶ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಪರೀಕ್ಷಾಂಗ ಕುಲಸಚಿವ ತಿಮ್ಮರಾಯಪ್ಪ. ಹಣಕಾಸು ಅಧಿಕಾರಿ ರಮೇಶ್ , ಕುಂಸಿ ಉಮೇಶ್ ಮತ್ತಿತರರು ಉಪಸ್ಥಿತರಿದ್ದರು
ರಿಯಾಸಿ ಪ್ರಾರ್ಥನೆ ಸಲ್ಲಿಸಿದರು.ಪ್ರೊ. ಮುತ್ತಯ್ಯ ವಂದಿಸಿದರು.
—–