ವಿಎಸ್ ಕೆವಿವಿ: ವಿ. ಜಡೆಪ್ಪಗೆ ಪಿಎಚ್‌ಡಿ ಪದವಿ ಘೋಷಣೆ

ಕೊಪ್ಪಳ: ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಇಂಗ್ಲಿಷ್ ಅಧ್ಯಯನ ವಿಭಾಗದ ವಿ. ಜಡೆಪ್ಪ ಅವರಿಗೆ ವಿವಿ ಪಿಎಚ್‌ಡಿ ಪದವಿ ಘೋಷಿಸಿದೆ.
ವಿಶ್ವವಿದ್ಯಾಲಯದ ಇಂಗ್ಲಿಷ್ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾದ ಪ್ರೊ. ಎನ್. ಶಾಂತನಾಯ್ಕ ಅವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದ “ಚಾಲೆಂಜ್ಸ್ ಇನ್ ರೈಟಿಂಗ್ ಅಟ್ ಪೋಸ್ಟ್ ಗ್ರಾಜುಷನ್ ಲೆವೆಲ್ ಇನ್ ಬಳ್ಳಾರಿ ಅಂಡ್ ಕೊಪ್ಪಳ ಡಿಸ್ಟ್ರಿಕ್ಟ್ಸ್: ಎ ಕೇಸ್ ಸ್ಟಡಿ”ಎಂಬ ಮಹಾಪ್ರಬಂಧಕ್ಕೆ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯವು ಪಿಎಚ್‌ಡಿ ಪದವಿ ಘೋಷಿಸಲಾಗಿದೆ ಎಂದು ವಿವಿ ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *