Warning: session_start(): Cannot start session when headers already sent in /home/karnatak/public_html/wp-content/plugins/the-visitor-counter/classes/class.widget.php on line 10

Warning: Cannot modify header information - headers already sent by (output started at /home/karnatak/public_html/wp-content/plugins/free-comments-for-wordpress-vuukle/free-comments-for-wordpress-vuukle.php:1) in /home/karnatak/public_html/wp-content/plugins/post-views-counter/includes/class-counter.php on line 1734
ಅನುದಿನ ಕವನ-೨೩೭, ಕವಿ: ವನ ಪ್ರಿಯ(ಯಲ್ಲಪ್ಪ ಹಂದ್ರಾಳ್), ಹಿರೇರಾಯ ಕುಂಪಿ, ಕವನದ ಶೀರ್ಷಿಕೆ:ಶ್ರಾವಣ ಬಂತು - Karnataka Kahale

ಅನುದಿನ ಕವನ-೨೩೭, ಕವಿ: ವನ ಪ್ರಿಯ(ಯಲ್ಲಪ್ಪ ಹಂದ್ರಾಳ್), ಹಿರೇರಾಯ ಕುಂಪಿ, ಕವನದ ಶೀರ್ಷಿಕೆ:ಶ್ರಾವಣ ಬಂತು

ಶ್ರಾವಣ ಬಂತು…..

ಭಣಭಣಗುಡುವ
ಒಣವೆಲ್ಲ ಮಣಿದು
ತೆನೆಗುಣ ಪಡೆದು
ಬಂತು ಶ್ರಾವಣ ತಂತು ಯೌವನ

ಕಣಕಣ ತಣಿದು
ಗಣಪತನ ಪಡೆದು
ಘನಗುಣವಾಡಿತು
ಬಂತು ಶ್ರಾವಣ ತಂತು ನವವನ

ತೆನೆಗುಣ ಹಾಲಾಗಿ
ತನುಕಾವ ನೂಲಾಗಿ
ಮನವನು ಬಿಗಿದು
ಬಂತು ಶ್ರಾವಣ ತಂತು ನವದಿನ

ಮನಕುಣಿವ ಭೂ
ವನ ನಲಿವ ಕಸವದು ರಸವಾಗಿ
ನವನವಾನ್ನ ಮಾಡುತ
ಬಂತು ಶ್ರಾವಣ ತಂತು ಗೆಲುವನ

ಮಣಮಣ್ಣಿನ ಹಬ್ಬಗಳು
ಮಣ್ಣೆ ಮಹಲ ಮುತ್ತಿದ ಘಮಲು
ಕಣ್ಣು ಕೊರೈಸುವ ಹಸಿರಹಾಸಿ
ಬಂತು ಶ್ರಾವಣ ತಂತು ಮುದವನ


-ವನಪ್ರಿಯ (ಯಲ್ಲಪ್ಪ ಹಂದ್ರಾಳ) ಮುಖ್ಯೋಪಾಧ್ಯಾಯರು, ಸರ್ಕಾರಿ ಪ್ರೌಢಶಾಲೆ ಹಿರೇರಾಯಕುಂಪಿ, ರಾಯಚೂರು ಜಿಲ್ಲಾ

One thought on “ಅನುದಿನ ಕವನ-೨೩೭, ಕವಿ: ವನ ಪ್ರಿಯ(ಯಲ್ಲಪ್ಪ ಹಂದ್ರಾಳ್), ಹಿರೇರಾಯ ಕುಂಪಿ, ಕವನದ ಶೀರ್ಷಿಕೆ:ಶ್ರಾವಣ ಬಂತು

  1. ಇಲ್ಲಿ ಕವನವನ್ನು ಓದಿದ ಎಲ್ಲಾರಿಗೂ ತುಂಬಾ ಬಾಧನ್ಯವಾದಗಳು.. ಪ್ರಕಟಿಸಿದ ಮಂಜುನಾಥ ಸರ್ ಅವರಿಗೂ ಹಾಗೂ ಕನ್ನಡ ಕಹಳೆ ಬಳಗಕ್ಕೂ ನಮನಗಳು

Comments are closed.